Advertisement

ವಿದ್ಯಾರ್ಥಿಗಳಿಗೆ ಮಧ್ಯಾಹದ ಬಿಸಿಯೂಟ ಪುನಾರಂಭ

02:31 PM Oct 22, 2021 | Team Udayavani |

ಹೊನ್ನಾಳಿ: ಕೊರೊನಾ ಕಾರಣದಿಂದ 19ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ಮಧ್ಯಾಹ್ನದಬಿಸಿಯೂಟ ಯೋಜನೆ ಮತ್ತೆ ಆರಂಭಗೊಂಡಿದ್ದು,ಗುರುವಾರ ಮಕ್ಕಳಿಗೆ ಪಾಯಸ, ಅನ್ನ, ಸಾಂಬಾರುಬಡಿಸುವುದರೊಂದಿಗೆ ಹೊನ್ನಾಳಿ ಹಾಗೂ ನ್ಯಾಮತಿತಾಲೂಕಿನಾದ್ಯಂತ ಬಿಸಿಯೂಟ ಕಾರ್ಯಕ್ರಮಕ್ಕೆಚಾಲನೆ ನೀಡಲಾಯಿತು.

Advertisement

ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ಸರ್ಕಾರ ಬಿಸಿಯೂಟವನ್ನುಸ್ಥಗಿತಗೊಳಿಸಿ ಶಾಲೆಗೆ ರಜಾ ಘೋಷಣೆ ಮಾಡಿತ್ತು.ಇದೀಗ ದೇಶದೆಲ್ಲಡೆ ಕೊರೊನಾ ಸೋಂಕುಗಣನಿಯವಾಗಿ ಇಳಿದಿರುವುದರಿಂದ ರಾಜ್ಯ ಸರ್ಕಾರಮಾರ್ಗಸೂಚಿ ಪ್ರಕಟಿಸಿದೆ. ಹಂತ ಹಂತವಾಗಿಶಾಲಾ-ಕಾಲೇಜುಗಳನ್ನು ಪ್ರಾರಂಭ ಮಾಡಿ ಮಕ್ಕಳಿಗೆ ಬಿಸಿಯೂಟವನ್ನು ಪ್ರಾರಂಭಿಸಿದೆ.

ಹೊನ್ನಾಳಿಪಟ್ಟಣದ ಟಿ.ಬಿ. ವೃತ್ತದ ಸರ್ಕಾರಿ ಉನ್ನತೀಕರಿಸಿದಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟಕ್ಕೆ ಚಾಲನೆನೀಡಿ ಬಿಇಒ ಜಿ.ಇ. ರಾಜೀವ್‌ ಮಾತನಾಡಿ,ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ 123ಹಿರಿಯ ಪ್ರಾಥಮಿಕ ಶಾಲೆ ಹಾಗೂ 44 ಸರ್ಕಾರಿಹಾಗೂ ಅನುದಾನಿತ ಶಾಲೆಗಳು ಸೇರಿ ಒಟ್ಟು 167ಶಾಲೆಗಳಿವೆ. ಎಚ್‌ಪಿಎಸ್‌ ಶಾಲೆಗಳಲ್ಲಿ 7915 ಹಾಗೂ ಪ್ರೌಢಶಾಲೆಯಲ್ಲಿ 5409 ಸೇರಿ ಒಟ್ಟು 13,324ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇಂದು 1095ವಿದ್ಯಾರ್ಥಿಗಳು ಬಿಸಿಯೂಟ ಸವಿದಿದ್ದಾರೆ ಎಂದು ತಿಳಿಸಿದರು.

ಅಕ್ಷರ ದಾಸೋಹ ತಾಲೂಕು ಸಹಾಯಕನಿರ್ದೇಶಕ ರುದ್ರಪ್ಪ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಹೇಶ್ವರಪ್ಪ, ಬಿಆರ್‌ಪಿ ಇಬ್ರಾಹಿಂ,ಅರುಣ್‌ಕುಮಾರ್‌, ಸಿಆರ್‌ಪಿ ಶಿವರಾಜ್‌,ಮುಖ್ಯೋಪಾಧ್ಯಾಯ ಯೋಗೇಂದ್ರಕುಮಾರ್‌ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next