Advertisement

ಕರುನಾಡು ಬಂಜಾರ ಸೇನೆಯಿಂದ ಮೆರವಣಿಗೆ

07:50 PM Apr 22, 2022 | Team Udayavani |

ದಾವಣಗೆರೆ: ಕರುನಾಡು ಬಂಜಾರ ಸೇನೆ ವತಿಯಿಂದಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ 131ನೇ ಜನ್ಮದಿನಾಚರಣೆ ಅಂಗವಾಗಿಅದ್ಧೂರಿ ಮೆರವಣಿಗೆ ನಡೆಸಲಾಯಿತು.ಡಾ| ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆಮಾಡುವುದರೊಂದಿಗೆ ಆರಂಭಗೊಂಡ ಮೆರವಣಿಗೆಜಯದೇವ ವೃತ್ತ, ಮಹಾತ್ಮಗಾಂಧಿ ವೃತ್ತ, ಮಹಾನಗರಪಾಲಿಕೆಯ ಮಾರ್ಗವಾಗಿ ಅರುಣ ಚಿತ್ರಮಂದಿರ ವೃತ್ತ,

Advertisement

ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕುಂದುವಾಡರಸ್ತೆಯಲ್ಲಿರುವ ಬಂಜಾರ ಭವನ ತಲುಪಿತು. ಮೆರವಣಿಗೆಯಲ್ಲಿಬಂಜಾರ ಸಮುದಾಯದ ಕಲೆ, ಸಂಸ್ಕೃತಿ, ಉಡುಗೆ ತೊಡುಗೆಬಿಂಬಿಸಲಾಯಿತು. ವಿವಿಧ ಕಲಾ ತಂಡಗಳ, ನೃತ್ಯ ಗಮನಸೆಳೆಯಿತು. ಸೇನೆಯ ರಾಜ್ಯಾಧ್ಯಕ್ಷ ಲಕ್ಷ್ಮಣ್‌ ರಾಮಾವತ್‌,ಶೀತಲ್‌ ಜಿ. ನಾಯ್ಕ, ಸಂದೀಪ್‌ ನಾಯ್ಕ, ಕೆ. ರಾಘವೇಂದ್ರನಾಯ್ಕ, ಶಶಿಕುಮಾರ್‌, ಸಂತೋಷ ನಾಯ್ಕ, ಅರುಣ್‌ಕುಮಾರ್‌, ಕುಮಾರ ನಾಯ್ಕ ಇತರರು ನೇತೃತ್ವ ವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next