Advertisement

ಗುಣಮುಖರ ಪ್ರಮಾಣ ಹೆಚ್ಚಳ

01:43 PM Jan 28, 2022 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ದಾಖಲೆಪ್ರಮಾಣದಲ್ಲಿ ಒಂದೇ ದಿನ 518 ಕೊರೊನಾಸೋಂಕಿತರು ಗುಣಮುಖರಾಗಿದ್ದಾರೆ.

Advertisement

ಸೋಂಕಿತರಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿರುವುದುವಿಶೇಷ. ದಾವಣಗೆರೆ ನಗರ, ತಾಲೂಕಿನಲ್ಲಿಅತಿ ಹೆಚ್ಚು 272, ಹರಿಹರದಲ್ಲಿ 56,ಜಗಳೂರಿನಲ್ಲಿ 53, ಚನ್ನಗಿರಿಯಲ್ಲಿ 73,ಹೊನ್ನಾಳಿಯಲ್ಲಿ 41 ಹಾಗೂ ಹೊರಜಿಲ್ಲೆಯ 23 ಸೋಂಕಿತರು ಸೇರಿ 518 ಜನಸೋಂಕಿತರು ಡಿಸಾcರ್ಜ್‌ ಆಗಿದ್ದಾರೆ.

ಜಿಲ್ಲೆಯ257 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ.ದಾವಣಗೆರೆ ನಗರ ಮತ್ತು ತಾಲೂಕಿನಇತರೆಡೆ ಅತಿ ಹೆಚ್ಚು 100, ಹರಿಹರದಲ್ಲಿ 20,ಜಗಳೂರಿನಲ್ಲಿ 30, ಚನ್ನಗಿರಿಯಲ್ಲಿ 21,ಹೊನ್ನಾಳಿಯಲ್ಲಿ 72, ಹೊರ ಜಿಲ್ಲೆಯ 14ಜನರು ಸೇರಿದಂತೆ 257 ಜನರಲ್ಲಿ ಕೊರೊನಾಸೋಂಕು ದೃಢಪಟ್ಟಿದೆ.

ಕಳೆದ ವರ್ಷಕೊರೊನಾ ಪ್ರಾರಂಭದಿಂದ ದಾವಣಗೆರೆತಾಲೂಕಿನಲ್ಲಿ 29,129, ಹರಿಹರದಲ್ಲಿ 7399,ಜಗಳೂರಿನಲ್ಲಿ 3167, ಚನ್ನಗಿರಿಯಲ್ಲಿ 6998,ಹೊನ್ನಾಳಿಯಲ್ಲಿ 7146, ಹೊರ ಜಿಲ್ಲೆಯ1723 ಜನರು ಸೇರಿದಂತೆ ಈವರೆಗೆ ಒಟ್ಟು55,729 ಜನರು ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾದಿಂದ ಈವರೆಗೆ ದಾವಣಗೆರೆತಾಲೂಕಿನಲ್ಲಿ 28,304 ಹರಿಹರದಲ್ಲಿ 7073,ಜಗಳೂರಿನಲ್ಲಿ 2903, ಚನ್ನಗಿರಿಯಲ್ಲಿ6705, ಹೊನ್ನಾಳಿಯಲ್ಲಿ 6570, ಹೊರಜಿಲ್ಲೆಯ 1633 ಜನರು ಸೇರಿದಂತೆ 52,918ಸೋಂಕಿತರು ಗುಣಮುಖರಾಗಿದ್ದಾರೆ.ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆಕೊರೊನಾಕ್ಕೆ 610 ಜನರು ಬಲಿಯಾಗಿದ್ದು,2201ಸಕ್ರಿಯ ಪ್ರಕರಣಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next