Advertisement

ತಿಂಗಳಾಂತ್ಯದವರೆಗೆ ವಾರಾಂತ್ಯ ಕರ್ಫ್ಯೂ ವಿಸ್ತರಣೆ

01:32 PM Jan 14, 2022 | Team Udayavani |

ದಾವಣಗೆರೆ: ಕೋವಿಡ್‌ ಪ್ರಕರಣಗಳುದಿಢೀರನೆ ಏರಿಕೆಯಾಗುತ್ತಿರುವಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿನಿಯಂತ್ರಣಕ್ಕೆ ಸರ್ಕಾರ ಜ. 4ರಂದುಹೊರಡಿಸಿದ್ದ ಮಾರ್ಗಸೂಚಿ ಜ.31ವರೆಗೂ ಮುಂದುವರೆಯಲಿದ್ದು,ಇದರೊಂದಿಗೆ ವಾರಾಂತ್ಯ ಕರ್ಫ್ಯೂ ಕೂಡಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ,ಚಿತ್ರಮಂದಿರ, ಹೋಟೆಲ್‌, ರೆಸ್ಟೋರೆಂಟ್‌ಮುಂತಾದೆಡೆ ಶೇ. 50 ಆಸನಸಾಮರ್ಥ್ಯದೊಂದಿಗೆ ಕೋವಿಡ್‌ ನಿಯಂತ್ರಣಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿಪಾಲಿಸುವುದು ಸೇರಿದಂತೆ ಹಲವುನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.ಸಾರ್ವಜನಿಕರು ಮಾರ್ಗಸೂಚಿಯನ್ನುತಪ್ಪದೇ ಪಾಲಿಸುವುದರ ಮೂಲಕ ಜಿಲ್ಲೆಯಲ್ಲಿಕೋವಿಡ್‌ ನಿಯಂತ್ರಣಕ್ಕೆ ಸಹಕರಿಸಬೇಕುಎಂದು ಕೋರಿದ್ದಾರೆ.ಸಂಕ್ರಾಂತಿ ಹಬ್ಬದ ಪ್ರಯುಕ್ತ ದೇವಾಲಯದಒಳ ಆವರಣದಲ್ಲಿ ಮಾತ್ರ ಸಂಪ್ರದಾಯದಂತೆದೈನಂದಿನ ಪೂಜಾ ಕೈಂಕರ್ಯ ನಡೆಸಲುಅನುಮತಿ ನೀಡಲಾಗಿದೆ.

ಪೂರ್ಣಪ್ರಮಾಣದ ಕೋವಿಡ್‌ ಲಸಿಕೆ ಪಡೆದ 50ಜನರಿಗೆ ಮಾತ್ರ ಒಂದು ಬಾರಿಗೆ ದೇವರದರ್ಶನಕ್ಕೆ ಅವಕಾಶವಿದೆ. ಉಳಿದಂತೆಯಾವುದೇ ಸೇವೆಗೆ ಅನುಮತಿ ಇಲ್ಲ.ಹಬ್ಬಗಳ ಆಚರಣೆ ಸಲುವಾಗಿ ಯಾವುದೇರೀತಿಯ ಮೆರವಣಿಗೆ, ಮನೋರಂಜನಾಕಾರ್ಯಕ್ರಮ ಇತ್ಯಾದಿ ಆಯೋಜಿಸುವಂತಿಲ್ಲಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳುಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ,ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಇದು ಜ.31ರಂದು ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರುತ್ತದೆ.ಈ ಅವಧಿಯಲ್ಲಿ ಪ್ರತಿ ದಿನ ರಾತ್ರಿ 10ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.ಕರ್ಫ್ಯೂ ಅವಧಿಯಲ್ಲಿ ರೋಗಿಗಳನ್ನುಆಸ್ಪತ್ರೆಗೆ ದಾಖಲಿಸುವುದು, ತುರ್ತುಸೇವೆಚಟುವಟಿಕೆ ಹೊರತುಪಡಿಸಿ ಎಲ್ಲ ಬಗೆಯಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ.

ಎಲ್ಲ ಕಚೇರಿಗಳು ಸೋಮವಾರದಿಂದಶುಕ್ರವಾರದವರೆಗೆ ವಾರದ ಐದು ದಿನಕಾರ್ಯ ನಿರ್ವಹಿಸಲಿವೆ. ಸಾರ್ವಜನಿಕಸಾರಿಗೆ ವ್ಯವಸ್ಥೆ ಪ್ರಯಾಣಿಕರ ಸಂಖ್ಯೆಗೆಅನುಗುಣವಾಗಿ, ಕೋವಿಡ್‌ ನಿಯಂತ್ರಣಮಾರ್ಗಸೂಚಿಯಂತೆ ಜಾರಿಯಲ್ಲಿರುತ್ತದೆ.ಪಬ್ಸ್, ಕ್ಲಬ್ಸ್, ರೆಸ್ಟೋರೆಂಟ್ಸ್‌, ಬಾರ್,ಹೋಟೆಲ್‌ಗ‌ಳು, ಚಿತ್ರಮಂದಿರಗಳು,ಮಲ್ಟಿಪ್ಲೆಕ್ಸ್‌, ರಂಗಮಂದಿರಗಳು,ಆಡಿಟೋರಿಯಂ, ಈಜುಕೊಳ, ಜಿಮ್‌,ಕ್ರೀಡಾ ಕಾಂಪ್ಲೆಕ್ಸ್‌ ಇತ್ಯಾದಿ ಸ್ಥಳಗಳಲ್ಲಿಯೂಆಸನ ಸಾಮರ್ಥ್ಯದ ಶೇ. 50ರಷ್ಟು ಮಾತ್ರಕಾರ್ಯಚಟುವಟಿಕೆಯನ್ನು ಕೋವಿಡ್‌ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡುಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next