Advertisement

ದಾವಣಗೆರೆ: ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಲೈನ್ ಮ್ಯಾನ್

11:56 AM Dec 29, 2021 | Team Udayavani |

ದಾವಣಗೆರೆ:  ಲಂಚ ಸ್ವೀಕರಿಸುವಾಗ  ಲೈನ್ ಮ್ಯಾನ್ ಯೊಬ್ಬ ಎಸಿಬಿ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

Advertisement

ದಾವಣಗೆರೆಯ ಬೆಸ್ಕಾಂ ಸಹಾಯಕ ಕಾರ್ಯ  ನಿರ್ವಾಹಕ ಕಚೇರಿಯ  ಎಂಟಿ ಉಪವಿಭಾಗದ ಲೈನ್ ಮ್ಯಾನ್ ರವಿಕುಮಾರ್ ಎಸಿಬಿ ಬಲೆಗೆ ಬಿದ್ದವರು.

ಇದನ್ನೂ ಓದಿ: ಸ್ಥಳೀಯ ಚುನಾವಣೆ ಸೋಲು: ಬಿಜೆಪಿ ವಿರುದ್ಧವೇ ಅರುಣ್ ಸಿಂಗ್ ಗೆ ಕವಟಗಿಮಠ್ ದೂರು

ದಾವಣಗೆರೆಯ ಶ್ರಿರಾಮ್ ಎಂಬುವರು  ಹಿಟ್ಟಿನ ಗಿರಣಿಯ ಹಿಂಬಾಕಿ ಬಿಲ್ ಗೆ 15 ಸಾವಿರ ದಂಡ ಪಾವತಿಸಬೇಕಿತ್ತು. ಶ್ರೀರಾಮ್ ಎನ್ನುವರಿಗೆ  ದಂಡವನ್ನು ಸರಿಪಡಿಸಲು ರವಿಕುಮಾರ್ ಐದು ಸಾವಿರ ಬೇಡಿಕೆ ಇಟ್ಟಿದ್ದರು.

ಈ ಕುರಿತು ಹಿಟ್ಟಿನ ಗಿರಣಿ ಮಾಲೀಕ ಶ್ರೀರಾಮ್ ಎಸಿಬಿ ಗೆ ದೂರು ಸಲ್ಲಿಸಿದ್ದರು. ಬುಧವಾರ ಬೆಳಗ್ಗೆ  ಕಚೇರಿ ಆವರಣದಲ್ಲಿರುವ ಗಣೇಶ ದೇವಸ್ಥಾನದ ಬಳಿ 5 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರವಿಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next