Advertisement

ಗ್ರಾಮೀಣ ಭಾಗದ ಸಮಸ್ಯೆ ನಿವಾರಣೆಗೆ ಒತ್ತು ಕೊಡಿ

04:07 PM Jan 24, 2021 | Team Udayavani |

ಜಗಳೂರು: ಗ್ರಾಮೀಣ ಭಾಗದ ಸಮಸ್ಯೆಗಳನ್ನ ಗುರುತಿಸಿ ಸ್ಥಳದಲ್ಲಿಯೇ ಬಗೆಹರಿಸಿ ಮತದಾರರ ವಿಶ್ವಾಸ ಕಾಪಾಡಿಕೊಳ್ಳಬೇಕು ಎಂದು ನೂತನ ಗ್ರಾಪಂ ಸದಸ್ಯರಿಗೆ ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ ಸಲಹೆ ನೀಡಿದರು.
ತಾಲೂಕಿನ ಬಿದರಿಕೆರೆ ತೋಟದಲ್ಲಿ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್‌.ಎಂ. ಹೊಳೆ ಹಾಗು ಸಿ.ಎಂ. ಹೊಳೆಯ ಗ್ರಾಪಂ
ಸದಸ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು.

Advertisement

ತೊರೆಸಾಲು ಭಾಗ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಪಕ್ಷದ ಚಿನ್ಹೆ ಇಲ್ಲದಿದ್ದರೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವುದು ಪಕ್ಷಕ್ಕೆ ಚೈತನ್ಯ ತುಂಬಿದಂತಾಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಲು ನಿಮ್ಮ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಸಿ.ಎಂ. ಹೊಳೆ ಕೃಷ್ಣಪ್ಪ, ಗ್ರಾಪಂ ಸದಸ್ಯರಾದ ಶಿವಣ್ಣ, ರಂಗಪ್ಪ, ಸುರೇಶ್‌, ಈರಮ್ಮ, ಶಿವಣ್ಣ, ರಜಿಯಾಬಿ, ಕಲೀಲ್‌ ಸಾಬ್‌, ದ್ಯಾಮಕ್ಕ, ತಿಪ್ಪೇಸ್ವಾಮಿ, ಶಿವರುದ್ರಮ್ಮ ಇತರರು ಇದ್ದರು.

ಓದಿ : ಸುಭಾಷ್‌ಚಂದ್ರ ಬೋಸ್‌ ಸ್ಮರಣೆ

Advertisement

Udayavani is now on Telegram. Click here to join our channel and stay updated with the latest news.

Next