Advertisement

ಯುಗಾದಿ ಬಳಿಕ ಹೊಸ ಮುಖ್ಯಮಂತ್ರಿ

02:30 PM Jan 31, 2021 | Team Udayavani |

ವಿಜಯಪುರ: ಮುಂಬರುವ ಯುಗಾದಿ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದು, ಉತ್ತರ ಕರ್ನಾಟಕ ಭಾಗದವರೇ ನೂತನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

Advertisement

ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ತಿಂಗಳಲ್ಲಿ ಹೊಸ ಮುಖ್ಯಮಂತ್ರಿ ಬರುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ನಾನು ಮಂತ್ರಿ ಸ್ಥಾನ ಬೇಕು ಎಂದು ದಾವಣಗೆರೆಯಲ್ಲಿ ಮಾತನಾಡಿಲ್ಲ. ಬ್ಲಾಕ್‌ವೆುಲ್‌ ಮಾಡಿಲ್ಲ, ಮಾಡುತ್ತಿಲ್ಲ, ಬಿಜೆಪಿ ಬಿಟ್ಟು ಎಲ್ಲೂ ಹೋಗಿಲ್ಲ. ಮಂತ್ರಿ ಕೊಡುವ ಸ್ಥಾನದಲ್ಲಿ ನಮ್ಮವರೇ ಬರುತ್ತಾರೆ ಕಾಯಿರಿ ಎಂದು ಮತ್ತೂಮ್ಮೆ ಮಾರ್ಮಿಕವಾಗಿಯೇ ಉತ್ತರಿಸಿದರು.

ರಾಮ ಮಂದಿರ ನಿರ್ಮಾಣ ನಿ ಧಿ ಸಂಗ್ರಹ ವಾಹನದ ಮೇಲೆ ಕಲ್ಲು ಎಸೆಯುವ ಮೂಲಕ ಬೆಂಗಳೂರು ಮತೀಯ ಗಲಭೆ ಸೃಷ್ಟಿಸುವ ಹಾಟ್‌ಸ್ಪಾಟ್‌ ಆಗುತ್ತಿದೆ ಎಂಬುದಕ್ಕೆ ಮತ್ತೂಮ್ಮೆ ಸಾಕ್ಷಿ ಒದಗಿಸಿದೆ. ರಾಜ್ಯದಲ್ಲಿ ಕೋಮು ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಕೋಮು ಗಲಭೆ ಸೃಷ್ಟಿಸುವವರ ಜೊತೆ ಮುಖ್ಯಮಂತ್ರಿ, ಗೃಹ ಸಚಿವರು ಸಲುಗೆ ಹೊಂದಿದ್ದರೆ ರಾಜ್ಯಕ್ಕೆ ದುಸ್ಥಿತಿ ತಪ್ಪಲ್ಲ. ಇದಲ್ಲದೇ ರಾಜ್ಯದಲ್ಲಿ ವಿರೋಧ ಪಕ್ಷಗಳೇ ಸತ್ತು ಹೋಗಿವೆ ಎಂದು ವಿಪಕ್ಷಗಳ ವಿರುದ್ಧವೂ ಹರಿಹಾಯ್ದರು.

ಓದಿ : ತಾಳ್ಮೆ ಪರೀಕ್ಷಿಸದೆ ಮೀಸಲು ಕೊಡಿ

Advertisement

Udayavani is now on Telegram. Click here to join our channel and stay updated with the latest news.

Next