Advertisement

ಇಂದ್ರಜಿತ್‌ ಲಂಕೇಶ್‌ ಬಹಿರಂಗ ಕ Òಮೆ ಯಾಚನೆಗೆ ಆಗ್ರಹ

06:29 PM Jul 22, 2021 | Team Udayavani |

ದಾವಣಗೆರೆ: ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಅವರ ಅಭಿಮಾನಿಗಳ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡಿರುವ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಜು. 22ರ ಒಳಗಾಗಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಅಖೀಲ ಕರ್ನಾಟಕ ದರ್ಶನ್‌ ತೂಗುದೀಪ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ. ಚಂದ್ರು ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ವರನಟ ಡಾ| ರಾಜ್‌ಕುಮಾರ್‌ ರವರು ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು.

Advertisement

ಅದೇ ಹಾದಿಯಲ್ಲಿ ದರ್ಶನ್‌ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ. ದರ್ಶನ್‌ ಅಭಿಮಾನಿಗಳನ್ನು ಇಂದ್ರಜಿತ್‌ ಲಂಕೇಶ್‌ ರೌಡಿಗಳು ಎಂದು ಕರೆದಿರುವುದು ಅತ್ಯಂತ ಖಂಡನೀಯ. ಗುರುವಾರದ ಒಳಗೆ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದಲ್ಲಿ ಕಾನೂನು ಒಳಗೊಂಡಂತೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇಂದ್ರಜಿತ್‌ ಲಂಕೇಶ್‌, ನಟ ದರ್ಶನ್‌ ಅವರ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ತಮಗೆ ಸಂಬಂಧವೇ ಇಲ್ಲದ ವಿಷಯ ಮುಂದಿಟ್ಟುಕೊಂಡು ಪ್ರಚಾರ ಮತ್ತು ಇಮೇಜ್‌ ಬೆಳೆಸಿಕೊಳ್ಳಲು ಮಾತನಾಡಿದ್ದಾರೆ. ದರ್ಶನ್‌ ಜನ್ಮದಿನದಂದು ಅನೇಕ ಅಭಿಮಾನಿಗಳು ವೃದ್ಧಾಶ್ರಮ, ಅಂಧ ಮಕ್ಕಳ ಶಾಲೆ ಇತರೆಡೆ ಪಡಿತರ ದಾನ ನೀಡುತ್ತಿದ್ದಾರೆ. ದರ್ಶನ್‌ರವರ ಮನವಿ ಮೇರೆಗೆ ಅನೇಕರು ಪ್ರಾಣಿಗಳನ್ನು ದತ್ತು ತೆಗೆದುಕೊಂಡರು.

ಅಂತಹ ಅಭಿಮಾನಿಗಳನ್ನು ಇಂದ್ರಜಿತ್‌ ಲಂಕೇಶ್‌ ರೌಡಿಗಳು ಎಂದು ಕರೆದಿರುವುದು ಸರಿ ಅಲ್ಲ. ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಅರುಣ್‌ಕುಮಾರ್‌, ಸುರೇಶ್‌, ಮಂಜು, ಸತೀಶ್‌, ಅಜಯ್‌ ಕುಮಾರ್‌, ವಿಕ್ಕಿ, ಯಶಸ್‌, ಮೌನೇಶ್‌, ವಿಜಯ್‌ಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next