Advertisement
ಬುಧವಾರ ದೃಶ್ಯಕಲಾ ಮಹಾವಿದ್ಯಾಲಯದ ಗ್ಯಾಲರಿಯಲ್ಲಿ ಅಂತಿಮ ಬಿ.ವಿ.ಎ. ಆನ್ವಯಿಕ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಐತಿಹಾಸಿಕ ಸ್ಥಳಗಳ ಛಾಯಾಚಿತ್ರ ಕಲೆಯ ಸಮೂಹ ಪ್ರದರ್ಶನ “ಬೆಳಕು ಬಿಂದು-2020′ ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆ ವಿಶ್ವವಿದ್ಯಾಲಯದಿಂದ ಕೇಂದ್ರಕ್ಕೆ 200 ಕೋಟಿಗೂ ಅಧಿ ಕ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕಲೆಗಳ ಕೋರ್ಸ್ ಪ್ರಾರಂಭಿಸುವ ಚಿಂತನೆ ನಡೆದಿದೆ. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪಿಯುಸಿ ನಂತರ ಸಂಗೀತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಹಿಂದೆಯೇ ಸಂಗೀತ, ನೃತ್ಯ, ಫ್ಯಾಷನ್ ಡಿಸೈನಿಂಗ್ ಇತರೆ ಪ್ರದರ್ಶನ ಕಲೆಗಳನ್ನು ಲಲಿತಕಲಾ ಮಹಾವಿದ್ಯಾಲಯದಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು. ಈಗ ಫ್ಯಾಷನ್ ಡಿಸೈನಿಂಗ್ ಪ್ರಾರಂಭಿಸಲಾಗಿದೆ. ಉಳಿದ ಪ್ರದರ್ಶನ ಕಲೆಗಳ ಕೋರ್ಸ್ ಆರಂಭಿಸಲು ಚರ್ಚೆ ನಡೆಸಲಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಡಿಜಿಟಲ್ ಆರ್ಟ್ನಲ್ಲಿ
ಡಿಪ್ಲೋಮಾ, ಡಿಪ್ಲೋಮಾ ಇನ್ ಕ್ಲಿನಿಕಲ್ ಡಯೆಟಿಕ್ಸ್, ಡಿಜಿಟಲ್ ಮೀಡಿಯಾದಲ್ಲಿ ಪಿಜಿ ಡಿಪ್ಲೋಮಾ, ಚಿಲ್ಲರೆ ಮಾರುಕಟ್ಟೆ ಮತ್ತು ಮಾಹಿತಿ ತಂತ್ರಜ್ಞಾನ, ಸೈಬರ್ ಭದ್ರತೆ ಇತರೆ ಕೌಶಲ್ಯ ಕೋರ್ಸ್ ಆರಂಭಿಸಲಾಗಿದೆ ಎಂದರು.
Related Articles
Advertisement
ದೃಶ್ಯಕಲಾ ಕಾಲೇಜಿನ ಪ್ರಾಚಾರ್ಯ ಡಾ| ರವೀಂದ್ರ ಎಸ್. ಕಮ್ಮಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ.ಆರ್. ಕೊರ್ತಿ, ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ, ಡಾ|ಎಚ್.ಎಸ್. ಅನಿತಾ, ಹಣಕಾಸು ಅ ಧಿಕಾರಿ ಡಿ. ಪ್ರಿಯಾಂಕ ಇತರರು ಇದ್ದರು. ಆರ್. ರಂಜಿತಾ ಸ್ವಾಗತಿಸಿದರು. ಪಲ್ಲವಿ ಪ್ರಾರ್ಥಿಸಿದರು. ದತ್ತಾತ್ರೇಯ ಎನ್. ಭಟ್ ನಿರೂಪಿಸಿದರು.
ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?