Advertisement

ಪುನೀತ್ ಅಂತಿಮ ನಮನ : ಪುತ್ರಿಯ ಕಂಡು ಕಂಠೀರವದಲ್ಲಿ ಕಣ್ಣೀರ ಕೋಡಿ

06:28 PM Oct 30, 2021 | Team Udayavani |

ಬೆಂಗಳೂರು : ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪುತ್ರಿ ಧೃತಿ ಶನಿವಾರ ಅಮೆರಿಕಾದಿಂದ ಆಗಮಿಸಿ ತಂದೆಯ ತಲೆಯನ್ನು ಮುಟ್ಟಿ ಕಣ್ಣೀರಿಟ್ಟಿದ್ದಾರೆ. ಭಾವುಕ ಕ್ಷಣವನ್ನು ಕಂಡು ಸ್ಥಳದಲ್ಲಿದ್ದ ನೂರಾರು ಗಣ್ಯರು, ಕುಟುಂಬ ಸದಸ್ಯರೂ ಕಣ್ಣೀರಿಟ್ಟರು.

Advertisement

ಮಧ್ಯಾಹ್ನ ಅಮೆರಿಕಾದಿಂದ ದೆಹಲಿಗೆ ಬಂದಿಳಿದ ಧೃತಿ ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು. ಭಾರಿ ಭದ್ರತೆಯಲ್ಲಿ ಅವರನ್ನು ಸಂಜೆ ಸದಾಶಿವ ನಗರದ ಮನೆಗೆ ಕರೆದೊಯ್ದು ಬಳಿಕ ಕಂಠೀರವ ಕ್ರೀಡಾಂಗಣಕ್ಕೆ ಕರೆತರಲಾಯಿತು.

ಪುನೀತ್ ಅವರ ಪತ್ನಿ ಅಶ್ವಿನಿ ಅವರು ಮಗಳಿಗೆ ಸಾಂತ್ವನ ಹೇಳಿದರು. ದೊಡ್ಡಪ್ಪ ಶಿವರಾಜ್ ಕುಮಾರ್ ಹಣೆಗೆ ಮುತ್ತಿಟ್ಟು ಸಂತೈಸಿದರು.

ಇನ್ನೋರ್ವ ಪುತ್ರಿ ವಂದಿತಾ ಕೂಡ ಸಹೋದರಿಯೊಂದಿಗೆ, ಮರಳಿಬಾರದ ಊರಿಗೆ ಪಯಣಿಸಿದ ಪ್ರೀತಿಯ ಪಪ್ಪಾ ನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು. ರಾಜ್ ಕುಟುಂಬ ಕಣ್ಣೀರ ಪ್ರವಾಹದಲ್ಲಿ ಮುಳುಗಿದೆ.

ನಾಳೆ(ಭಾನುವಾರ) ಸಕಲ ಸರಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

Advertisement

ಇಂದೂ ಪುನೀತ್ ಅವರ ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಹರಿದು ಬರುತ್ತಿದೆ ಅಭಿಮಾನ ಸಾಗರ

ಪ್ರವಾಹದೋಪಾದಿಯಲ್ಲಿ ಅಕಾಲಿಕವಾಗಿ ಕಾಲನ ವಶವಾದ ನೆಚ್ಚಿನ ಅಪ್ಪುವನ್ನು ನೋಡಲು ಸಾವಿರಾರು ಗಣ್ಯರು, ಲಕ್ಷಾಂತರ ಅಭಿಮಾನಿಗಳು ಶನಿವಾರ ಸಂಜೆಯವರೆಗೆ ಆಗಮಿಸಿದ್ದು, ಅಭಿಮಾನಿಗಳ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next