Advertisement
ಮಡಿಕೇರಿ ತಾಲೂಕಿನ ಮರಗೋಡಿನ ನಿವಾಸಿ ಪೂವಮ್ಮ (73) ಎಂಬವರನ್ನು ಹತ್ಯೆ ಮಾಡಲಾಗಿದ್ದು, ಕೊಲೆ ಆರೋಪದಲ್ಲಿ ಸೊಸೆ ಬಿಂದು (26) ಎಂಬಾಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Related Articles
Advertisement
ಅನುಮಾನ ಮೂಡಿದ ಬಳಿಕ ಪ್ರಸನ್ನ ಅವರು ಘಟನೆ ನಡೆದ ಸ್ಥಳ, ದಿಂಬಿನ ಕವರ್, ಬಟ್ಟೆಯ ಮೇಲಾಗಿದ್ದ ರಕ್ತದ ಕಲೆ ಗಳು ಕಂಡು ಅನುಮಾನ ಮತ್ತಷ್ಟು ಹೆಚ್ಚಾಯಿತು. ಬಿಂದು ನಡವಳಿಕೆಯಲ್ಲೂ ಭಾರೀ ಬದಲಾವಣೆ ಪುಷ್ಠಿ ನೀಡಿತು.
ಮಾಡಿದ್ದೇನು?
ಬೆಳಗ್ಗೆ ತಿಂಡಿಗೆ ಬಂದಾಗ ವಾಗ್ವಾದ ನಡೆದಿದ್ದು, ಕೈಯಲ್ಲಿದ್ದ ಮೊಬೈಲ್ನಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಬಿಂದು ಹೊಡೆದ ಪರಿಣಾಮ ಹಾಸಿಗೆ ಮೇಲೆ ಕುಸಿದು ಬಿದ್ದ ಪೂವಮ್ಮ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಮೃತಪಟ್ಟಿದ್ದು ಅರಿತು ಇಳಿದ ರಕ್ತ ಸ್ವಚ್ಛ ಮಾಡಿ ಹಾಸಿಗೆ ಮೇಲಿದ್ದ ಬಟ್ಟೆಗಳನ್ನೂ ಬದಲಾಯಿಸಿ, ಧರಿಸಿದ್ದ ಬಟ್ಟೆಯನ್ನೂ ಬದಲಾಯಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದ್ದಳು ಎಂದು ಪ್ರಸನ್ನ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಡೆದ ದಿನ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ.
ಪೊಲೀಸರು ವಿಚಾರಣೆ ನಡೆಸಿದ್ದು, ತಪ್ಪೊಪ್ಪಿಕೊಂಡಿರುವ ಬಿಂದುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿಡಲಾಗಿದೆ.