Advertisement

ಡಾಟಾ ಎಂಟ್ರಿ-ಕಂಪ್ಯೂಟರ್‌ ಆಪರೇಟರ್‌ ಸಮಾವೇಶ

05:56 PM Jul 25, 2022 | Team Udayavani |

ಹಾವೇರಿ: ನಗರದ ಡಾ|ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಹೊರಗುತ್ತಿಗೆ ನೌಕರರ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ಡಾಟಾ ಎಂಟ್ರಿ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್‌ಗಳ ಸಮಾವೇಶ ನಡೆಯಿತು.

Advertisement

ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಡಾಟಾ ಎಂಟ್ರಿ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್‌ಗಳಿಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು. ಅಲ್ಲದೇ, ಸರ್ಕಾರದ ಗಮನ ಸೆಳೆಯುವ ಆಶ್ವಾಸನೆ ನೀಡಿದರು.

ಡಾಟಾ ಎಂಟ್ರಿ, ಕಂಪ್ಯೂಟರ್‌ ಆಪರೇಟರ್‌ ಗಳ ಕಾರ್ಯಾಧ್ಯಕ್ಷ ಪ್ರಕಾಶ ವೈ.ಎಂ. ಮಾತನಾಡಿ, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಮಲತಾಯಿ ಧೋರಣೆ ಖಂಡಿಸಿದರು. ಎಲ್ಲಾ ನೌಕರರನ್ನು ನೇರ ಪಾವತಿಗೆ ಒಳಪಡಿಸಿದಲ್ಲಿ, ಈ ಹಿಂದೆ ಸರ್ಕಾರದಿಂದ ಅನುಸರಿಸಿದ ಹೊರಗುತ್ತಿಗೆ ಪದ್ಧತಿಯಿಂದ ಗುತ್ತಿಗೆದಾರರಿಗೆ ಪಾವತಿಯಾಗುತ್ತಿರುವ ವಿವಿಧ ತೆರಿಗೆಗಳಾದ ಜಿಎಸ್‌ಟಿ, ಸರ್ವೀಸ್‌ ಟ್ಯಾಕ್ಸ್‌ ಮುಂತಾದವುಗಳಿಂದ ಶೇ.25ರಷ್ಟು ಹಣ ಸರ್ಕಾರ ಮತ್ತು ನೌಕರರರಿಗೆ ಉಳಿತಾಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಮುಂದಿನ ದಿನಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್‌ ನೌಕರರಿಗೆ ನೇರ ಪಾವತಿ, ಖಾಯಮಾತಿಗಾಗಿ ಒಗ್ಗೂಡಿ ಸರ್ಕಾರವನ್ನು ಆಗ್ರಹಿಸಿ ಹೋರಾಡಲು ಸಂಪೂರ್ಣ ಬೆಂಬಲ ನೀಡಿದರು.

ಅಂತಿಮವಾಗಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್‌ ಗಳಿಗೆ ನೇರ ಪಾವತಿ, ಸೇವಾ ಖಾಯಮಾತಿ ಮಾಡಲು ಸರ್ಕಾರವನ್ನು ಒತ್ತಾಯಿಸಿದರು. 700 ಜನರಿಗೆ ಒಬ್ಬ ಪೌರಕಾರ್ಮಿಕರಿದ್ದ ನಿಯಮಗಳನ್ನು 500 ಜನರಿಗೆ ಒಬ್ಬರಂತೆ ಬದಲಾಯಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ರೂಪಿತವಾದ ಸಿಆರ್‌ ನಿಯಮ 2010ರಲ್ಲಿ ರಚನೆಯಾಗಿದೆ. ಇಂದಿನ ಸ್ಥಿತಿಗೆ ಅನುಗುಣವಾಗಿ ಸಿಆರ್‌ ನಿಯಮ ಬದಲಾಯಿಸಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಹೊರಗುತ್ತಿಗೆ ನೌಕರರ ಸಂಘದ ರಾಜ್ಯಧ್ಯಕ್ಷ ಎಂ.ಬಿ. ನಾಗನಗೌಡ್ರ ಅಧ್ಯಕ್ಷತೆ ವಹಿಸಿದ್ದರು.

Advertisement

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ನಾಯಕರಾದ ಜಿಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ವಕೀಲರಾದ ಎಸ್‌.ಜಿ. ಹೊನ್ನಪ್ಪನವರ, ನಾಗರಾಜ ಮಾಳಗಿ, ಸಂಜಯಗಾಂಧಿ  ಸಂಜೀವಣ್ಣನವರ, ಹೊನ್ನೇಶ್ವರ ತಗಡಿನಮನಿ, ಉಡಚಪ್ಪ ಮಾಳಗಿ, ಬಸವರಾಜ ಹಿಡಿಗೊಂಡ, ಲಕ್ಷ್ಮಣ ಕನವಳ್ಳಿ ಪಾಲ್ಗೊಂಡು ಬೆಂಬಲ ವ್ಯಕ್ತ ಪಡಿಸಿದರು.

ಸಮಾವೇಶದಲ್ಲಿ ಜಿಲ್ಲೆಯ ಹೊರಗುತ್ತಿಗೆ ನೌಕರರ ಡಾಟಾ ಎಂಟ್ರಿ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್‌ಗಳ ಸಂಘದ ಜಿಲ್ಲಾಧ್ಯಕ್ಷ ಸತೀಶ ಪೂಜಾರ, ಸಂಘದ ಮುಖಂಡರಾದ ಸಂತೋಷಗೌಡ ಹಿತ್ತಲಮನಿ, ರಾಘು ದಾಮೋದರ, ಶೋಯಬ್‌ ಚಿನಿವಾಲ, ಜಗದೀಶ ಕಾಶೆಟ್ಟಿ, ಹೇಮಾ ಪಾಟೀಲ, ಶೈಲಜಾ, ಫೈರೋಜ, ಸುರೇಶ ಕಮ್ಮಾರ, ಅಣ್ಣಯ್ಯ, ರೇಖಾ ಗಿಡ್ಡಣ್ಣನವರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next