Advertisement

ಉಡುಪಿ-ಕುಂದಾಪುರಕ್ಕೆ ಮಂಗಳೂರಿನಿಂದ ದಸರಾ ದರ್ಶನ ಪ್ರವಾಸ

04:34 PM Oct 01, 2022 | Team Udayavani |

ಮಂಗಳೂರು: ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಉಡುಪಿ ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ “ದಸರಾ ದರ್ಶನ’ ಒಂದು ದಿನದ ಪ್ಯಾಕೇಜ್‌ ಪ್ರವಾಸವನ್ನು ಅ.1 ರಿಂದ 4ರ ವರೆಗೆ ಆಯೋಜಿಸುತ್ತಿದೆ.

Advertisement

ಈ ಪ್ಯಾಕೇಜ್‌ ಪ್ರವಾಸವು ಮಂಗಳೂರು ಬಸ್‌ ನಿಲ್ದಾಣದಿಂದ ಬೆಳಗ್ಗೆ 8ಕ್ಕೆ ಹೊರಟು ಉಡುಪಿ-ಕುಂದಾಪುರ ಮಾರ್ಗವಾಗಿ ಮಾರಣಕಟ್ಟೆ ಶ್ರೀ ಮಹಾಲಿಂಗೇಶ್ವರ, ಕೊಲ್ಲೂರು ಶ್ರೀ ಮೂಕಾಂಬಿಕೆ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದೇವರ ದರ್ಶನ ಮುಗಿಸಿ ಸಂಜೆ 6.30ಕ್ಕೆ ಮಂಗಳೂರು ಬಸ್‌ ನಿಲ್ದಾಣಕ್ಕೆ ಬರಲಿದೆ.

ಬಸ್‌ಗೆ ಮುಂಗಡ ಕಾಯ್ದಿರಿಸಲು //www.ksrtc.in ನಲ್ಲಿ ಆನ್‌ಲೈನ್‌ ಮುಂಗಡ ಬುಕ್ಕಿಂಗ್‌ ಸೌಲಭ್ಯ ಇದೆ. ಪ್ರತೀ ಪ್ರಯಾಣಿಕರಿಗೆ ವಯಸ್ಕರಿಗೆ 450 ರೂ. ಮತ್ತು ಮಕ್ಕಳಿಗೆ (6 ವರ್ಷದಿಂದ 12 ವರ್ಷದೊಳಗೆ) 400 ರೂ. ದರ ನಿಗದಿಪಡಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next