Advertisement

Darshan vs indrajit.. ನಾನು ದಲಿತನಲ್ಲ ಎಂದ ಗಂಗಾಧರ್ : ಇಂದ್ರಜಿತ್ ಗೆ ಹಿನ್ನಡೆ!

02:47 PM Jul 16, 2021 | Team Udayavani |

ಬೆಂಗಳೂರು: ನಟ ದರ್ಶನ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದು, ಇದೇ ಹಿನ್ನೆಲೆಯಲ್ಲಿ ದರ್ಶನ್​ ಅವರಿಗೆ ಇದೀಗ ಬಿಗ್​ ರಿಲೀಫ್ ಸಿಕ್ಕಿದೆ.

Advertisement

ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದು,  ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ದಲಿತ ವ್ಯಕ್ತಿಗೆ ದರ್ಶನ್ ಹೊಡೆದಿದ್ದಾರೆ ಎಂದಿದ್ದರು. ಈ ಸಂಬಂಧ ರಾಜ್ಯ ಸರ್ಕಾರ ದರ್ಶನ್ ಅಂಡ್​ ಟೀಂ ವಿರುದ್ಧ ತನಿಖೆಗೆ ಆದೇಶ ಮಾಡಿತ್ತು. ಅದರಂತೆ ಮೈಸೂರು ಪೊಲೀಸ್ ಅಧಿಕಾರಿಗಳ ತಂಡ ಗಲಾಟೆ ನಡೆದಿರುವ ಹೋಟೆಲ್​ ಸಂದೇಶ್ ಪ್ರಿನ್ಸ್​ಗೆ ಭೇಟಿ ನೀಡಿತ್ತು.

ದರ್ಶನ್ ಅವರಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಎನ್ನಲಾದ ಗಂಗಾಧರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು,​ ನಾನು ದಲಿತ ಅಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಇದರಿಂದ ಇಂದ್ರಜಿತ್ ಲಂಕೇಶ್ ಅವರಿ ಸುಳ್ಳು ಹೇಳಿದ್ರ ಎನ್ನಾಲಾಗುತ್ತಿದೆ.

ಪೊಲೀಸರಿಗೆ ಹೇಳಿಕೆ ನೀಡಿರುವ ಗಂಗಾಧರ್,  ನಾನು ಕಳೆದ 20 ವರ್ಷಗಳಿಂದ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. 10 ವರ್ಷದಿಂದ ರೂಂ ಸರ್ವೀಸ್ ಮ್ಯಾನೇಜರ್ ಆಗಿ ಕೆಲಸ‌ ಮಾಡುತ್ತಿದ್ದೇನೆ. ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 10ರವರೆಗೆ ನನ್ನ ಕೆಲಸ. ಹೋಟೆಲ್​ಗೆ ಬರುವ ಗ್ರಾಹಕರನ್ನ ಪಿಆರ್‌ಓ ಪವಿತ್ರ ಅಥವಾ ಶಿವಶಂಕರ್ ಬರಮಾಡಿಕೊಳ್ತಾರೆ. ಕೊಠಡಿ ಪ್ರವೇಶದ ಬಳಿಕ ಅವರಿಗೆ ಅಗತ್ಯವಾದ ಆಹಾರ ಪದಾರ್ಥ ಕಿಚನ್‌ನಲ್ಲಿ ಸಿದ್ಧಪಡಿಸಲಾಗುತ್ತೆ. ಇದನ್ನ ಗ್ರಾಹಕರಿಗೆ ತಲುಪಿಸುವ ಕರ್ತವ್ಯ ನನ್ನದು ಎಂದಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next