Advertisement

ದಾದಾ ಸ್ಮರಿಸಿದ ದರ್ಶನ್

11:10 AM Dec 30, 2018 | |

ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್‌ ಅವರ 9ನೇ ಪುಣ್ಯ ತಿಥಿ ಇಂದು ಬೆಂಗಳೂರಿನ ಅಭಿಮಾನ್​ ಸ್ಟುಡಿಯೋದಲ್ಲಿ ನಡೆಯಿತು. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ ಹೃದಯವಂತ ನಮ್ಮನ್ನೆಲ್ಲ ಅಗಲಿ ಇಂದಿಗೆ 9 ವರ್ಷ ಕಳೆದಿದೆ.

Advertisement

ರಾಮಾಚಾರಿಯನ್ನು ಸ್ಮರಿಸಲು ಹಲವು ಜಿಲ್ಲೆಗಳಿಂದ ಅಪಾರ ಅಭಿಮಾನಿಗಳ ದಂಡೇ ವಿಷ್ಣು ಸಮಾಧಿಯತ್ತ ಆಗಮಿಸಿತ್ತು. ಅಲ್ಲದೇ ಸ್ಯಾಂಡಲ್‍ವುಡ್‍ನ ಹಲವಾರು ತಾರಾ ಮಂದಿ ಕೋಟಿಗೊಬ್ಬನನ್ನು ಸ್ಮರಿಸಿದ್ದು, ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಷ್ಣುದಾದರನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.

ಹೌದು, ಸ್ಯಾಂಡಲ್‍ವುಡ್‍ನ ಡಿ ಬಾಸ್ ದರ್ಶನ್ ತಮ್ಮ ಟ್ವೀಟರ್ ಖಾತೆಯಲ್ಲಿ “ಇಂದು ಅಭಿನಯ ಭಾರ್ಗವ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ 9ನೇ ಪುಣ್ಯತಿಥಿ. ತಮ್ಮ ಹೃದಯವಂತಿಕೆ ಹಾಗೂ ಕಲಾಸೇವೆಯಿಂದ ಕೋಟ್ಯಾಂತರ ಕನ್ನಡಿಗರ ಮನಸ್ಸಲ್ಲಿ ಅಜರಾಮರವಾಗಿ ನೆಲೆಸಿರುವ ವಿಷ್ಣು ಸರ್ ಗೆ ಭಾವಪೂರ್ಣ ನಮನಗಳು’ ಎಂದು ಬರೆದುಕೊಂಡು ಸಾಹಸಸಿಂಹನಿಗೆ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next