Advertisement

Dandeli: ಗೆಳೆಯರೊಂದಿಗೆ ಈಜಲು ತೆರಳಿದ್ದ ಬಾಲಕ ನೀರುಪಾಲು

07:29 PM Jun 05, 2023 | Team Udayavani |

ದಾಂಡೇಲಿ : ತನ್ನ ಗೆಳೆಯರೊಂದಿಗೆ ಈಜಲು ತೆರಳಿದ್ದ ಬಾಲಕನೊರ್ವ ನೀರನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ದಾಂಡೇಲಿ ನಗರ ಸಮೀಪದಲ್ಲಿರುವ ಸಂಗಮ್ ಮಾಳಂಗಿಯಲ್ಲಿರುವ ಕಾಳಿ ನದಿಯಲ್ಲಿ ಸೋಮವಾರ ನಡೆದಿದೆ.

Advertisement

ಹಳೆದಾಂಡೇಲಿಯ ರಾವುಫ್ ಮಹಮ್ಮದ್ ರಫೀಕ್ ಪಟೇಲ್(15) ಎಂಬಾತನೇ ಮೃತಪಟ್ಟ ಬಾಲಕ. ಈತ ತನ್ನ ಗೆಳೆಯರೊಂದಿಗೆ ಕೂಡಿಕೊಂಡು ಸಂಗಮ್ ಮೌಳಂಗಿಗೆ ತೆರಳಿದ್ದಾನೆ. ಅಲ್ಲಿ ಹೋದವನು ಗೆಳೆಯರ ಜೊತೆಗೆ ಕಾಳಿ ನದಿಯಲ್ಲಿ ಈಜಾಡಲು ಇಳಿದಿದ್ದಾನೆ. ಈ ಸಮಯದಲ್ಲಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ. ನದಿಯಲ್ಲಿ ಮುಳುಗಿದ್ದ ಈತನನ್ನು ತಕ್ಷಣವೆ ಅಲ್ಲೆ ಮೀನು ಹಿಡಿಯಲು ಬಂದಿದ್ದ ಒಬ್ಬರು ನದಿಗೆ ಧುಮುಕಿ ರಕ್ಷಿಸಿದರೂ, ಅಷ್ಟೋತ್ತಿಗಾಗುವಾಗಲೆ ಬಾಲಕ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.

ಘಟನೆ ನಡೆದ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರ, ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.

ಹಳೆದಾಂಡೇಲಿಯ ಬಾಡಿಗೆ ಮನೆಯೊಂದರಲ್ಲಿ ತಾಯಿ, ತಮ್ಮ ಮತ್ತು ತಂಗಿಯ ಜೊತೆ ವಾಸವಿದ್ದ ಈ ಬಾಲಕ ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿದು ಬಂದಿದೆ. ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next