Advertisement

ಕಾನನದ ನಡುವೆ ಕವಳಗುಹೆಯ ಬಿನ್ನಾಣ

12:01 AM Jan 30, 2020 | Sriram |

ಒಂದು ಕಡೆ ಬಿದಿರಿನ ಮೆಳೆಗಳ ಓಲಾಟ, ಇನ್ನೊಂದೆಡೆ ಕಾಳಿ ನದಿಯ ಜುಳುಜುಳು ನಿನಾದ, ಅಲ್ಲೇ ಹತ್ತಿರದಲ್ಲಿ ಪಕ್ಷಿಗಳ ಕಲರವ, ಆ ಅರಣ್ಯದಲ್ಲಿ ಅಪರೂಪಕ್ಕೆ ಕಾಣ ಸಿಗುವ ವನ್ಯ ಜೀವಿಗಳು… ಇಂಥ ಪ್ರಾಕೃತಿಕ ಚಿತ್ರಣವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡ ದಾಂಡೇಲಿ ಪ್ರಕೃತಿ ಸೊಬಗನ್ನು ಸವಿಯಲೇಬೇಕು. ಸಾಹಸಮಯ ತಾಣ ವಾದ ದಾಂಡೇಲಿಯಲ್ಲಿರುವ ಸುಂದರ ಚಾರಣ ಸ್ಥಳವೇ ಕವಳ ಗುಹೆ.

Advertisement

ರೋಮಾಂಚನಕಾರಿ ಅನುಭವ ಬೆಟ್ಟ ಕಣಿವೆಗಳ ಅಂಚಿನಲ್ಲಿ ಕಡಿದಾದ ಮಾರ್ಗ ದಲ್ಲಿ ಮೂರು ಕಿ.ಮೀ.ಸಾಗಿದರೆ ದಟ್ಟವಾದ ಅರಣ್ಯ ಸಿಗುತ್ತದೆ. ಈ ಮಾರ್ಗವಾಗಿ ಚಾರಣ ಪ್ರಾರಂಭ ವಾಗಲಿದ್ದು, ಕವಳಗುಹೆ ತಲುಪಲು 2 ಮಾರ್ಗಗಳಿವೆ. ಬೆಟ್ಟದ (ಹಿಂಬದಿ) ಮೇಲಿನ ಮಾರ್ಗವಾಗಿ ತೆರಳಿದರೆ 3 ಕಿ.ಮೀ. ಕಾಲು ದಾರಿ ತುಳಿದು ಸಾಗಿದರೆ 540 ಮೆಟ್ಟಿಲುಗಳನ್ನು ಹತ್ತಬೇಕು. 2 ಮಾರ್ಗಗಳು ರೋಮಾಂಚನಕಾರಿ ಅನುಭವ ನೀಡಲಿದ್ದು, ಆಯಾಸವೆನ್ನಿಸಿ ದಾಗ ವಿರಮಿಸುವುದಕ್ಕೂ ಅವಕಾಶವಿದೆ.

ಶಿವಲಿಂಗ ದರ್ಶನ
ಹೀಗೆ ಕಾಲುದಾರಿಯಾಗಿ ಸಾಗಿದವ ರಿಗೆ ನಾಗಝರಿ ಹಳ್ಳ ಸಿಗುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ತಂಪಾದ ವಾತಾವರಣ ಜತೆಗೆ ಪ್ರಶಾಂತತೆಯ ಅನುಭವವನ್ನು ಬಾನೆತ್ತರಕ್ಕೆ ನಿಂತ ಗುಹೆಗಳು ನೀಡುತ್ತವೆ. ಹೀಗೆ ಕತ್ತಿಯಂತೆ ಜೋತುಬಿದ್ದ ಚೂಪಾದ ಶಿಲೆಗಳು ತಲೆಗೆ ಬಡಿಯದಂತೆ ಎಚ್ಚರಿಕೆ ಯಿಂದ 8 ಮೀಟರ್‌ ಒಳಗೆ ಸಾಗಿದರೆ ಬೃಹತ್‌ ಶಿವಲಿಂಗದ ದರ್ಶನವಾಗುತ್ತದೆ. ಗುಹೆಯೊಳಗೆ ಗೋವಿನ ಕೆಚ್ಚಲಿನಂತೆ ಜೋತು ಬಿದ್ದ ಶಿಲೆಯಿಂದ ಬಸಿಯುತ್ತಿದ್ದ ದ್ರವ್ಯ ಶಿವಲಿಂಗಕ್ಕೆ ಅಭಿಷೇಕ ಮಾಡಿದಂತೆ ಭಾಸವಾಗುವಂತಿದ್ದು, ಇದನ್ನು ಕಣ್ತುಂಬಿಸಿಕೊಂಡವರ ಮನದಲ್ಲಿ ಧನ್ಯತಾ ಅನುಭಾವ ಮೂಡುವುದು ಸುಳ್ಳಲ್ಲ.

ಅನುಮತಿ ಖಡ್ಡಾಯ
ಕವಳಗುಹೆ ಚಾರಣಕ್ಕೆ ಅಲ್ಲಿನ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಚಾರಣಆರಂಭಕ್ಕೆ ಮುನ್ನ 3 ಚೆಕ್‌ಪೋಸ್ಟ್‌ ಗಳಲ್ಲಿ ತಪಾಸಣೆ ನಡೆಯುತ್ತದೆ. ಅಲ್ಲಿನ ಮೇಲಧಿ ಕಾರಿಗಳಿಂದ ಅನುಮತಿ ಖಾತ್ರಿ ಆದ ಅನಂತರವೇ ಚಾರಣದ ಮುಂದಿನ ಮಾರ್ಗ ತೆರವುಗೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next