Advertisement

Dandeli: ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಬಿಡುವಂತೆ ಮನವಿ

04:28 PM Oct 21, 2024 | Team Udayavani |

ದಾಂಡೇಲಿ : ಹಳಿಯಾಳ ಮತ್ತು ದಾಂಡೇಲಿಯ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳು ಬಂಗೂರನಗರ ಪದವಿ ಕಾಲೇಜು, ಅಂಬೇವಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಅಂಬೇವಾಡಿಯಲ್ಲಿರುವ ಜಿಟಿ ಮತ್ತು ಟಿಸಿ, ಐಟಿಐ ಕಾಲೇಜುಗಳಿಗೆ ಹೋಗಲು ಬಸ್ಸಿಗಾಗಿ ನಗರದ ಚೌದರಿ ಗೇಟ್ ಹತ್ತಿರ ಕಾಯುತ್ತಿರುತ್ತಾರೆ.

Advertisement

ಸಕಾಲದಲ್ಲಿ ಸಾರಿಗೆ ಬಸ್ ಬಂದರೂ ಸಹ ಬಸ್ಸಿನಲ್ಲಿ‌ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರುವುದರಿಂದ ಬಸ್ಸನ್ನೇರಲು ಹರಸಾಹಸ ಪಡಬೇಕು. ಒಂದು ವೇಳೆ‌‌ ಬಸ್ಸನ್ನು ಹತ್ತಿದರೂ ಬಸ್ಸಿನ ಮೆಟ್ಟಿಲಲ್ಲೆ ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಏನಾದರೂ ಹೆಚ್ಚು ಕಡಿಮೆಯಾದರೆ ಅಪಾಯ ತಪ್ಪಿದ್ದಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ದಾಂಡೇಲಿ ಬಸ್ ನಿಲ್ದಾಣದಿಂದ ಕೆ.ಸಿ. ವೃತ್ತದ ಮೂಲಕ ಬರ್ಚಿ ರಸ್ತೆಯಿಂದ ಹೆಚ್ಚುವರಿಯಾಗಿ ಸಾರಿಗೆ ಬಸ್ ಒಂದನ್ನು ಬಿಡುವಂತೆ ನಗರದ ಸಾಮಾಜಿಕ ಹೋರಾಟಗಾರರಾದ ಮಾರುತಿ ಹಾದಿಮನಿ ಅವರು ನಗರದಲ್ಲಿ ಸೋಮವಾರ ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.

ಇದನ್ನೂ ಓದಿ: Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

Advertisement

Udayavani is now on Telegram. Click here to join our channel and stay updated with the latest news.

Next