Advertisement

ದಾಂಡೇಲಿ : ಬಸ್ ಮಾರ್ಗ ಬದಲಾಯಿಸದಂತೆ ದಾಂಡೇಲಿಯಲ್ಲಿ ಮನವಿ

07:37 PM Nov 13, 2021 | Team Udayavani |

ದಾಂಡೇಲಿ: ದಾಂಡೇಲಿ ಮತ್ತು ಹಳಿಯಾಳದಿಂದ ಧಾರವಾಡಕ್ಕೆ ಹೋಗುವ ಬಸ್ಸುಗಳು ಧಾರವಾಡ ನಗರದ ಕಲಾಭವನದ ಮೂಲಕ ಹೊಸ ಬಸ್ ನಿಲ್ದಾಣಕ್ಕೆ ಸಂಚರಿಸುತ್ತಿದ್ದ ಬಸ್ಸಿನ ಮಾರ್ಗವನ್ನು ಬದಲಾಯಿಸಲಾಗಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ.

Advertisement

ಆದ್ದರಿಂದ ಈ ಹಿಂದೆ ಇದ್ದಂತೆ ಕಲಾಭವನದ ಮೂಲಕವೆ ಬಸ್ ಸಂಚಾರವನ್ನು ಮುಂದುವರೆಸಬೇಕೆಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯು ಶನಿವಾರ ನಗರದ ಸಾರಿಗೆ ಬಸ್ ನಿಲ್ದಾಣದ ಸಂಚಾರ ನಿರೀಕ್ಷಕರ ಮೂಲಕ ಸಾರಿಗೆ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಲಿಖಿತ ಮನವಿ ನೀಡಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್, ಸಮಿತಿಯ ಉಪಾಧ್ಯಕ್ಷ ರಾಮಲಿಂಗ ಜಾಧವ್, ಸಮಿತಿಯ ಪ್ರಮುಖರುಗಳಾದ ರವಿ ಚೌವ್ಹಾಣ್ ಮತ್ತು ಶ್ಯಾಮ್ ಬೆಂಗಳೂರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪೂಜಾರ ಹಾಗೂ ಕಾಂಗ್ರೆಸ್ ಯುವ ಮುಖಂಡ ಜಾಫರ್ ಮಸನಗಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಕರ್ನಾಟಕದಲ್ಲಿ ಇಂದು 245 ಹೊಸ ಕೋವಿಡ್ ಪ್ರಕರಣಗಳು, 3 ಸಾವು

Advertisement

Udayavani is now on Telegram. Click here to join our channel and stay updated with the latest news.

Next