Advertisement

ದಲಿತರ ಕುಂದುಕೊರತೆ ಸಭೆ

05:56 PM Jun 13, 2022 | Shwetha M |

ಇಂಡಿ: ಪೊಲೀಸ್‌ ಇಲಾಖೆಯಿಂದ ಪ್ರತಿ ತಿಂಗಳು ನಡೆಯುವ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಎಲ್ಲ ಇಲಾಖೆ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಅಹ್ವಾನಿಸಬೇಕೆಂದು ದಲಿತ ಮುಖಂಡ, ಸಮನ್ವಯ ಸಮಿತಿ ತಾಲೂಕಾಧ್ಯಕ್ಷ ಶಿವಾನಂದ ಮೂರಮನ ವಿನಂತಿಸಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ನಡೆದ ದಲಿತ ಕುಂದು ಕೊರತೆ ನಿವಾರಣೆ ಸಭೆಯಲ್ಲಿ ಮಾತಮಾಡಿದ ಅವರು, ದಲಿತ ಮಕ್ಕಳಲ್ಲಿ ಶಿಕ್ಷಣದ ಕೊರತೆ ಕಂಡು ಬರುತ್ತಿದ್ದು ಪಾಲಕರು ಅದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳನ್ನು ಶಿಕ್ಷಣದ ಕಡೆಗೆ ಗಮನ ಹರಿಸಬೇಕೆಂದು ಹೇಳಿದರು.

ಸಿಪಿಐ ಭೀಮನಗೌಡ ಬಿರಾದಾರ ಮಾತನಾಡಿದರು. ಸಿಬ್ಬಂದಿ ಪಾಂಡು ರಾಠೊಡ, ಮಹೇಶ ಕೋಳಿ, ಈರಣ್ಣ ವಾಲೀಕಾರ, ಮುಖಂಡರಾದ ಜಯರಾಮ ರಾಠೊಡ, ರಮೇಶ ಧರೆಣ್ಣನವರ, ಭೀಮಾಶಂಕರ ಮೂರಮನ, ನಾಗೇಂದ್ರ ಮೇತ್ರಿ, ಕಾಶೀನಾಥ ರಾಠೊಡ ಸೇರಿದಂತೆ ಅನೇಕರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next