Advertisement

ಮುಸ್ಲಿಂ ಯುವತಿ, ದಲಿತ ಯುವಕನ ಲವ್‌: ತಂದೆ,ತಮ್ಮನಿಗೆ ಥಳಿಸಿದ್ದೇಕೆ?

10:53 AM Jun 28, 2017 | |

ವಿಜಯಪುರ: ಜಿಲ್ಲೆಯ ಸಿಂಧಗಿಯ ಹಾಳಗುಂಡನಹಾಳದಲ್ಲಿ ಅಂತರ್ಧರ್ಮೀಯ ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿ ದಲಿತ ವ್ಯಕ್ತಿಗಳಿಬ್ಬರನ್ನು ಮರಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ನಿಂಗಪ್ಪ ಎಂಬ ಯುವಕ ಮುಸ್ಲಿಂ ಧರ್ಮದ ಯುವತಿಯನ್ನು ಪ್ರೇಮ ವಿವಾಹವಾಗಿ ಊರು ಬಿಟ್ಟು ತೆರಳಿರುವುದು ಹಲ್ಲೆ ನಡೆಸಲು ಕಾರಣವಾಗಿದೆ. ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲದ ಅಮಾಯಕರಾದ ನಿಂಗಪ್ಪನ ತಂದೆ ಮರೆಪ್ಪ ಮತ್ತು ಸಹೋದರ ರಮೇಶ್‌ನನ್ನು ಯುವತಿಯ ಕಡೆಯವರು ಮರಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇಬ್ಬರನ್ನು ವಿನಾಕಾರಣ ಅಮಾನವೀಯವಾಗಿ ಥಳಿಸುತ್ತಿದ್ದರೂ ಸ್ಥಳೀಯರು ಯಾರೂ ನೆರವಿಗೆ ಬರಲಿಲ್ಲ. ಇದೀಗ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿರುವ ಮರೆಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ಸಂಬಂಧ ರಮೇಶ್‌ ಅವರು ಕಲ್ಕೇರಿ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಗ್ಗೆಯಾಗಲಿ, ಥಳಿಸಿದ ಆರೋಪಿಗಳನ್ನು ವಶಕ್ಕೆ ಪಡೆದ ಬಗ್ಗೆ ಇದುವರೆಗೆ ವರದಿಯಾಗಿಲ್ಲ. 

Advertisement

ಯುವತಿಯ ಅಣ್ಣ ಮಾಬು ಸಾಬ್‌ ಮತ್ತು ಅಲ್ಲಾ ಭಕ್ಷ್‌ ಎನ್ನುವವರು ಬೆಂಬಲಿಗರೊಂದಿಗೆ ಬಂದು ಹಲ್ಲೆ ನಡೆಸಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ತಾಣಗಳು,ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next