Advertisement

ಸೈನಿಕನೆಂದು ಪರಿಚಯಿಸಿ ವಂಚನೆ: ಪ್ರಕರಣ ದಾಖಲು

11:36 PM May 16, 2023 | Team Udayavani |

ಮಂಗಳೂರು: ಸೈನಿಕನೆಂದು ನಂಬಿಸಿ ಬಾಡಿಗೆಗೆ ಫ್ಲ್ಯಾಟ್‌ ಪಡೆಯುವುದಾಗಿ ಹೇಳಿ ವಂಚಿಸಿರುವ ಬಗ್ಗೆ ಮನೆ ಮಾಲಕರೊಬ್ಬರು ಮಂಗಳೂರಿನ ಸೆನ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಮನೆ ಮಾಲಕರು “ಬೆಂಗಳೂರಿನಲ್ಲಿ ಬಾಡಿಗೆಗೆ ಫ್ಲ್ಯಾಟ್‌ ಇದೆ’ ಎಂದು ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದರು. ಇದನ್ನು ನೋಡಿದ ವ್ಯಕ್ತಿಯೋರ್ವ ತನ್ನನ್ನು ಸೈನಿಕ ದೀಪಕ್‌ ಪವಾರ್‌ ಎಂದು ಪರಿಚಯಿಸಿಕೊಂಡು ಬೆಂಗಳೂರಿಗೆ ವರ್ಗಾವಣೆಯಾಗಿರುವುದಾಗಿ ತಿಳಿಸಿ ಫ್ಲ್ಯಾಟ್‌ ಖರೀದಿಸಲು ಆಸಕ್ತಿ ಇದೆ ಎಂದು ಹೇಳಿದ್ದ. ಮೇ 15ರಂದು ಸಂಜೆ ಮುಂಗಡವಾಗಿ 50 ಸಾ.ರೂ. ಪಾವತಿಸುವುದಾಗಿ ತಿಳಿಸಿದ್ದ. ಅಲ್ಲದೆ ಈ ಬಗ್ಗೆ ಶಿಬಿರದ ಮೇಲಧಿಕಾರಿಗಳು ಕರೆ ಮಾಡುತ್ತಾರೆ ಎಂದೂ ಹೇಳಿದ್ದ. ಅನಂತರ ಮನೆ ಮಾಲಕರಿಗೆ ಅಧಿಕಾರಿಯೆಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕರೆ ಮಾಡಿ ಅವರ ಬ್ಯಾಂಕ್‌ ಖಾತೆಗೆ ಸಂಪರ್ಕಗೊಂಡಿರುವ ಗೂಗಲ್‌ ಪೇ ಅಪ್ಲಿಕೇಷನ್‌ ತೆರೆಯಲು ಹೇಳಿದ್ದ. ಮನೆ ಮಾಲಕರು ಅಪರಿಚಿತ ವ್ಯಕ್ತಿ ಸೂಚಿಸಿದಂತೆಯೇ ಮಾಡಿದ್ದರು.

ಅಪರಿಚಿತ ವ್ಯಕ್ತಿ ಖಾತೆಗೆ ಹಣ ಸಂದಾಯ ಮಾಡಿದಂತೆ ತೋರಿಸಿ ವಹಿವಾಟು ವಿಫ‌ಲವಾಗಿದೆ ಎಂದು ತೋರಿಸಿದ್ದ. ಈ ವೇಳೆ ದೂರುದಾರರ ಖಾತೆಯಿಂದ 50,000 ರೂ. ಮತ್ತು 49,000 ರೂ.ಗಳು ವಂಚಕನ ಖಾತೆಗೆ ವರ್ಗಾವಣೆಯಾಗಿದೆ ಎಂದು ಮನೆ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next