Advertisement

Daily horoscope; ಈ ರಾಶಿಯವರಿಗಿಂದು ಹೊಸಬರೊಂದಿಗೆ ಮೈತ್ರಿ ಸಂಪಾದನೆ

07:24 AM Jun 27, 2024 | Team Udayavani |

27-06-2024

Advertisement

ಮೇಷ: ಉದ್ಯೋಗ ಸ್ಥಾನದಲ್ಲಿ ಸಾಮಾನ್ಯ ತೃಪ್ತಿ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಹಣದ ಬೆಳೆಗಳಿಗೆ ಯೋಗ್ಯ ಬೆಲೆ. ವಾಹನ ದುರಸ್ತಿಗೆ ಧನವ್ಯಯ. ಹಳೆಯ ಗೆಳೆಯನಿಂದ ಹೊಸ ವ್ಯವಹಾರದ ಪ್ರಸ್ತಾವ.

ವೃಷಭ: ಉದ್ಯೋಗ ಸ್ಥಾನದಲ್ಲಿ ಖಾತೆಗಳ ಬದಲಾವಣೆ. ವ್ಯವಹಾರ ಸುಧಾರಣೆಗೆ ಅನಿರೀಕ್ಷಿತ ನೆರವು. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಅಸಹಾಯಕ ವೃದ್ಧರಿಗೆ ನೆರವು. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷದ ಅನುಭವ.

ಮಿಥುನ: ವೃದ್ಧಿಯಾದ ಆತ್ಮವಿಶ್ವಾಸ. ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ. ಮನೆಯವರಿಗೋಸ್ಕರ ವೈದ್ಯರ ಭೇಟಿ. ವಸ್ತ್ರ, ಉಡುಪು ವ್ಯಾಪಾರಿಗಳಿಗೆ ಲಾಭ. ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿಯ ದಿನ.

ಕರ್ಕಾಟಕ: ಉದ್ಯೋಗದಲ್ಲಿ ಸ್ಥಿರವಾಗುವ ಸಾಧ್ಯತೆ. ದೂರದಲ್ಲಿರುವ ಆಪ್ತರಿಂದ ಸಕಾಲಿಕ ಸಹಾಯ. ವ್ಯವಹಾರ ಸಂಬಂಧ ಸಂವಾದ ಫ‌ಲಪ್ರದ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮಾರ್ಗದರ್ಶನ. ದಿನವಿಡೀ ಶುಭಫ‌ಲಗಳ ಅನುಭವ.

Advertisement

ಸಿಂಹ: ಸಮಯೋಚಿತ ಪ್ರಯತ್ನಗಳಿಂದ ಯಶಸ್ಸು. ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಕಟ್ಟಡ ನಿರ್ಮಾಪಕರಿಗೆ ಕೆಲಸ ಮುಗಿಸುವ ಭರವಸೆ. ಹಿರಿಯರ ಆರೋಗ್ಯ ಸುಧಾರಣೆ.

ಕನ್ಯಾ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಹೊಲಿಗೆ, ಮರದ ಕೆಲಸ ಬಲ್ಲವರಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ. ಗೃಹಿಣಿಯರ ಸ್ವ ಉದ್ಯೋಗ ಯೋಜನೆ ಪ್ರಗತಿ.

ತುಲಾ: ಉದ್ಯೋಗದಲ್ಲಿ ಯಥಾಸ್ಥಿತಿ. ಉತ್ಪನ್ನಗಳ ವಿತರಕರ ಜಾಲ ವಿಸ್ತರಣೆ. ಮಕ್ಕಳ ವಿದ್ಯಾರ್ಜನೆ ಆಸಕ್ತಿ ವೃದ್ಧಿಯತ್ತ ಗಮನ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಕೈಗೊಳ್ಳಲು ಆಸಕ್ತಿ. ವ್ಯವಹಾರದ ಸಂಬಂಧ ಪ್ರಯಾಣ ಸಂಭವ.

ವೃಶ್ಚಿಕ: ತಾಳ್ಮೆಯ ವರ್ತನೆಯಿಂದ ಹಿರಿಯರ ಒಲವು ಗಳಿಕೆ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆ. ನ್ಯಾಯಾಲಯ ಸಂಬಂಧಿ ವ್ಯವಹಾರಗಳಲ್ಲಿ ಜಯ. ಸಫ‌ಲ. ಹಿರಿಯರ ಆರೋಗ್ಯ ಪ್ರಕೃತಿ ಚಿಕಿತ್ಸೆಯಿಂದ ಸುಧಾರಣೆ.

ಧನು: ಅಕಸ್ಮಾತ್‌ ಸಹಾಯದಿಂದ ಸಮಸ್ಯೆ ಪರಿಹಾರ. ದಂಪತಿ ನಡುವೆ ಅನುರಾಗ ವೃದ್ಧಿ. ಕುಶಲಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಹೈನುಗಾರಿಕೆ, ತೋಟಗಾರಿಕೆ ಅಭಿವೃದ್ಧಿಗೆ ಪ್ರಯತ್ನ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತಸ.

ಮಕರ: ಮಾತಿನಲ್ಲಿ ಸಂಯಮ ಇರಲಿ. ಸಣ್ಣ ಉದ್ಯಮಿಗಳ ಆದಾಯ ಹೆಚ್ಚಳ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಪ್ರಮಾಣದ ಲಾಭ. ಮಹಿಳೆಯರ ಗೃಹೋದ್ಯಮ ಯೋಜನೆಗೆ ಪ್ರಚಂಡ ಯಶಸ್ಸು. ಬಂಧುಗಳೊಂದಿಗೆ ಪ್ರೀತಿಯ ವಿನಿಮಯ.

ಕುಂಭ: ಸಹಾಯ ಮಾಡಿ ಸಾರ್ಥಕತೆಯ ಭಾವ. ಕಿರಿಯರಿಗೆ ಮಾರ್ಗದರ್ಶನ, ಹಿರಿಯರಿಗೆ ಸಂದರ್ಭೋಚಿತ ಸಲಹೆ. ಪ್ರಾಮಾಣಿಕತೆಯಿಂದ ಗೌರವ ಮತ್ತು ಜನಪ್ರಿಯತೆ ವೃದ್ಧಿ. ಹೊಸಬರೊಂದಿಗೆ ಮೈತ್ರಿ ಸಂಪಾದನೆ.

ಮೀನ: ಉದ್ಯೋಗದಲ್ಲಿ ಸಾಧನೆ ತೃಪ್ತಿಕರ, ವ್ಯವಹಾರದಲ್ಲಿ ಅಪರಿಮಿತ ಮುನ್ನಡೆ. ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಿಂದ ಅಪೇಕ್ಷಿತ ಸಹಾಯ. ಬಾಕಿ ಕೆಲಸಗಳನ್ನು ಮುಗಿಸುವ ಪ್ರಯತ್ನ.

ಜಯತೀರ್ಥ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next