Advertisement

Horoscope: ಈ ರಾಶಿಯವರು ಸತ್ಯ ಹೇಳಿದರೆ ನಿಷ್ಠುರಕ್ಕೆ ಗುರಿಯಾಗುವ ಭೀತಿ

07:21 AM Mar 01, 2024 | Team Udayavani |

ಮೇಷ: ಕಳೆದ ತಿಂಗಳ ಸಾಧನೆಗಳ  ಕಡೆಗೆ  ಹಿನ್ನೋಟ ಬೀರಿ ಸಮಾಧಾನ. ನೌಕರರಿಗೆ ಹೊಸ ವ್ಯವಸ್ಥೆಯಿಂದ ಸಂತೋಷ. ಮಹಿಳೆಯರ  ಸ್ವಾವಲಂಬನೆ ಯೋಜನೆ ಮುನ್ನಡೆ. ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ  ಹೆಚ್ಚಳ.

Advertisement

ವೃಷಭ: ಆರಂಭದಲ್ಲಿದ್ದ ದೊಡ್ಡ ಪ್ರಮಾಣದ ಪ್ರಗತಿಯ ನಿರೀಕ್ಷೆ  ಮುಂದುವರಿಕೆ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫ‌ಲ. ಸತ್ಯ ಹೇಳಿದರೆ ನಿಷ್ಠುರಕ್ಕೆ ಗುರಿಯಾಗುವ ಭೀತಿ. ಗೃಹದಲ್ಲಿ ಸಂತೃಪ್ತಿಯ ವಾತಾವರಣ.

ಮಿಥುನ: ಧೈರ್ಯ, ಸಾಹಸದ ಪ್ರವೃತ್ತಿ ಕೊಂಚ ಕ್ಷೀಣಿಸಿದ್ದರೂ  ಕಾರ್ಯದಲ್ಲಿ  ಪ್ರಗತಿ. ಉದ್ಯೋಗ ದಲ್ಲಿ  ಜವಾಬ್ದಾರಿಗಳ ಸಮರ್ಥ ನಿರ್ವಹಣೆ. ವ್ಯಾಪಾರಿಗಳ ಆದಾಯ ತೆರಿಗೆ ವಿವರ ಸಲ್ಲಿಕೆ. ಮನೆ ಯಲ್ಲಿ  ಹಿರಿಯರ ಆರೋಗ್ಯದ ಕಡೆ ಗಮನಹರಿಸಿ.

ಕರ್ಕಾಟಕ:   ಶೀಘ್ರ  ಉತ್ಕರ್ಷ ಹೊಂದುವ ಆಕಾಂಕ್ಷೆಗೆ ಇಂಬು ಕೊಡುವ ಸನ್ನಿವೇಶ. ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ. ಅಕಸ್ಮಾತ್‌ ಧನಾಗಮ ಯೋಗ. ಆಪ್ತಮಿತ್ರನಿಂದ  ಶುಭವಾರ್ತೆ.ಕುಟುಂಬದ ಹಿರಿ ಮನೆಯಲ್ಲಿ ವಿವಾಹ ಸಮಾರಂಭ.

ಸಿಂಹ: ಶುಭ ಶುಕ್ರವಾರದಂದು ಸಮೃದ್ಧವಾದ  ಕಾರ್ಯಶಕ್ತಿ ಯೊಂದಿಗೆ  ರಂಗಪ್ರವೇಶ.ಉದ್ಯೋಗ ಕ್ಷೇತ್ರದಲ್ಲಿ ಅಗ್ರಪಂಕ್ತಿಯ ಸ್ಥಾನಮಾನ. ಉದ್ಯಮಕ್ಕೆ ಸರ್ವತೋಮುಖ  ಪ್ರಗತಿ. ಹಿರಿಯರು, ಗೃಹಿಣಿಯರು ಮಕ್ಕಳಿಗೆ ಸಮಾಧಾನದ ಅನುಭವ.

Advertisement

ಕನ್ಯಾ: ಪರಿಣತಿ ಹೊಂದಿರುವ ವೃತ್ತಿಯಲ್ಲಿ ಸ್ಥಿರವಾಗುವ ಪ್ರಯತ್ನ. ಸಹೋದ್ಯೋಗಿ ಗಳಿಂದ ಪ್ರತಿಭೆಗೆ ಗೌರವ. ಕುಟುಂಬದ ಹಿರಿಯ ವ್ಯಕ್ತಿಯಿಂದ ಸಹಾನುಭೂತಿಯ  ಸಹಕಾರ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ  ಪೂರಕ ವಾತಾವರಣ.

ತುಲಾ: ಡಾಂಭಿಕರ ಕಪಟ ನಾಟಕದೆದುರು ಸೋಲಬೇಡಿ. ದೇವತಾ ಸಾನ್ನಿಧ್ಯ ದರ್ಶನ. ಉದ್ಯೋಗ ಸ್ಥಾನದಲ್ಲಿ  ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ.  ಹಿತಶತ್ರುಗಳ ಸಂಚಿಗೆ ಸೋಲು. ಗುರು ಸ್ಥಾನ ದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ.

ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಮುಂದುವರಿಕೆ. ಉದ್ಯಮಿಗಳಿಗೆ ಎದುರಾಳಿಗಳಿಂದ ಹೊಸ ಬಗೆಯ ಪೈಪೋಟಿ.  ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಸಹಕಾರಿ ಸಂಸ್ಥೆಗಳ  ಸ್ಥಿತಿ ಸುಧಾರಣೆ.

ಧನು: ಕಠಿನ ಮಾರ್ಗದಲ್ಲಿ ಸಂಪಾದನೆ ವೃದ್ಧಿ. ಸಹೋ ದ್ಯೋಗಿಗಳಿಂದ  ಸಂಪೂರ್ಣ ಸಹಕಾರ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಮಹಿಳೆಯರ ಉಸ್ತುವಾರಿಯ ಖಾದ್ಯ ಪದಾರ್ಥಗಳ  ಘಟಕಕ್ಕೆ ದಾಖಲೆಯ ಲಾಭ.

ಮಕರ: ಆತ್ಮವಿಶ್ವಾಸದೊಂದಿಗೆ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ  ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ ಗುಣಮಟ್ಟ ಸುಧಾರಣೆ ಯಿಂದಾಗಿ ಮಾರಾಟ ವೃದ್ಧಿ.  ಪ್ರಾಪ್ತ ವಯಸ್ಕ ಕನ್ಯೆಯರಿಗೆ ವಿವಾಹ ಯೋಗ.

ಕುಂಭ: ಆಯೋಜಿತ ಸೇವಾ ಕಾರ್ಯಗಳಲ್ಲಿ ಮುಂದುವರಿಕೆ. ಟೈಲರಿಂಗ್‌ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ. ಹೊಸಬರ ಸಂಪರ್ಕ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಮುಕ್ತಾಯ.

ಮೀನ: ಹೊಸ ತಿಂಗಳು ಬಂದೊಡನೆ   ಇನ್ನಷ್ಟು  ಕಾರ್ಯಗಳ  ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಆಹ್ವಾನ.  ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ  ಸಾರ್ವಜನಿಕರಿಂದ ಪ್ರಶಂಸೆ.

Advertisement

Udayavani is now on Telegram. Click here to join our channel and stay updated with the latest news.

Next