Advertisement

Daily Horoscope: ದೀರ್ಘ‌ ಕಾಲದಿಂದ ಮಾಡುತ್ತಿರುವ ಪ್ರಯತ್ನವು ಫ‌ಲಿಸುವ ಕಾಲ ಸನ್ನಿಹಿತ

07:34 AM Sep 19, 2023 | Team Udayavani |

ಮೇಷ: ಬಹುಮಟ್ಟಿಗೆ ಸಂತೋಷದ ದಿನ. ಹಬ್ಬದ ಸಡಗರದ ನಡುವೆ ವ್ಯವಹಾರ ಸುಧಾರಣೆಯ ಬಗ್ಗೆ ಚಿಂತನೆ. ಆಪ್ತ ವಲಯಗಳಲ್ಲಿ ಸಕ್ರಿಯ ಪಾಲುದಾರಿಕೆ. ಹಿರಿಯ ನಾಗರಿಕರಿಂದ ನೆಮ್ಮದಿಯ ನಿಟ್ಟುಸಿರು. ಹತ್ತಿರದ ದೇವತಾಕ್ಷೇತ್ರಕ್ಕೆ ಸಂದರ್ಶನ ಸಂಭವ. ಗೃಹಿಣಿಯರಿಗೆ ನೆಮ್ಮದಿ.

Advertisement

ವೃಷಭ: ಉದ್ಯೋಗಸ್ಥರಿಗೆ ನಿಶ್ಚಿಂತೆ.ವ್ಯವಹಾರ ಕ್ಷೇತ್ರ ವಿಸ್ತರಣೆ ಸಂಭವ. ವಧೂ – ವರಾನ್ವೇಷಿಗಳಿಗೆ ಶುಭವಾರ್ತೆ. ಹವಾಮಾನ ವೈಪರೀತ್ಯ ದಿಂದ ಹಿರಿಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ. ಗೃಹಿಣಿಯರ ಸ್ವಾವಲಂಬನೆ ಆದಾಯ ವೃದ್ಧಿ.

ಮಿಥುನ: ಸರಿಯಾದ ನಿರ್ಧಾರಕ್ಕೆ ಬಂದಿರುವುದರಿಂದ ಆತಂಕ ಬೇಡ.ಉದ್ಯೋಗ ಅರಸುತ್ತಿರುವವರಿಗೆ ಶುಭ ಸೂಚನೆ. ಆಪ್ತರಿಂದ ನಿರೀಕ್ಷಿತ ಸಹಾಯ ಪ್ರಾಪ್ತಿ. ಸ್ವಂತ ವ್ಯವಹಾರದ ಯೋಚನೆ ಬಿಟ್ಟು ಬಿಡಿ. ಪಾಲುದಾರಿಕೆ ವ್ಯವಹಾರ ಸಲ್ಲದು.

ಕರ್ಕಾಟಕ: ಮಿಶ್ರಫ‌ಲಗಳ ದಿನ. ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರಿ.ಮನೆಯಲ್ಲಿ ಉಳಿದ ಎಲ್ಲರ ಆರೋಗ್ಯ ಉತ್ತಮ. ಮಕ್ಕಳ ಭವಿಷ್ಯ ಚಿಂತನೆ.ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ.

ಸಿಂಹ: ಎಲ್ಲ ರಂಗಗಳಲ್ಲೂ ಶುಭಫ‌ಲಗಳನ್ನು ಕಾಣುವ ದಿನ. ಹಳೆಯ ಬಾಕಿಯಾಗಿರುವ ದೊಡ್ಡ ಮೊತ್ತ ಅನಿರೀಕ್ಷಿತವಾಗಿ ಕೈಸೇರಿ ನೆಮ್ಮದಿ. ವಿಳಂಬವಾಗುತ್ತಿದ್ದ ಸರಕಾರಿ ಕಚೇರಿ ಕೆಲಸಗಳು ಕ್ಷಿಪ್ರವಾಗಿ ಮುಕ್ತಾಯಗೊಂಡು ಹರ್ಷ. ಮನೆಯಲ್ಲಿ ಎಲ್ಲರೂ ಕ್ಷೇಮ.

Advertisement

ಕನ್ಯಾ: ದೇವತಾ ಕಾರ್ಯವೊಂದರ ನೇತೃತ್ವ ವಹಿಸುವ ಸಾಧ್ಯತೆ. ಸೇವಾಕಾರ್ಯಗಳಿಂದ ಜನಪ್ರಿಯತೆ ವೃದ್ಧಿ. ಸದುದ್ದೇಶಕ್ಕಾಗಿ ಬೇರೆಬೇರೆ ಸ್ಥಳಗಳಿಗೆ ಭೇಟಿ ಸಂಭವ.ಭವಿಷ್ಯತ್ತಿನ ಉದ್ದೇಶದ ದೀರ್ಘಾವಧಿ ಹೂಡಿಕೆ ಯೋಜನೆಯಲ್ಲಿ ಸೇರಿಕೊಳ್ಳುವ ಯೋಚನೆ.

ತುಲಾ: ದೇವತಾ ಕಾರ್ಯದಲ್ಲಿ ಸಕ್ರಿಯ ಪಾಲುಗೊಳ್ಳವಿಕೆ. ಪರಿಸರ ಸ್ವತ್ಛತೆಯ ಕಾರ್ಯದಲ್ಲಿ ಆಸಕ್ತಿ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಮುದ ನೀಡುವ ಸನ್ನಿವೇಶ ಸೃಷ್ಟಿಯಾಗಲಿದೆ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ.

ವೃಶ್ಚಿಕ: ನೊಂದವರಿಗೆ ಸಾಂತ್ವನ ಹೇಳಿ ಸಮಾಧಾನ ಹೊಂದುವಿರಿ. ವಸ್ತ್ರಾಭರಣ ಖರೀದಿ ಸಂಭವ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಹವಾಮಾನ ವೈಪರೀತ್ಯದಿಂದ ಹಿರಿಯರ ಹಾಗೂ ಮಕ್ಕಳ ಆರೋಗ್ಯದಲ್ಲಿ ಕೊಂಚ ಏರುಪೇರು.

ಧನು: ವ್ಯವಹಾರದಲ್ಲಿ ವೃದ್ಧಿ. ಸರಕಾರಿ ಉದ್ಯೋಗಸ್ಥರಿಗೆ ಶುಭ ಸಮಾಚಾರ ನಿರೀಕ್ಷೆ. ಉಳಿತಾಯ ಯೋಜನೆಗಳ ಏಜೆಂಟರಾಗಿ ದುಡಿಯು ತ್ತಿರುವರಿಗೆ ವೃದ್ಧಿ ಯೋಗ.ಅಲ್ಪಾವಧಿ ಹೂಡಿಕೆಗಳಲ್ಲಿ ತೊಡಗಿಸಿಕೊಳ್ಳದಿರಿ.

ಮಕರ: ದೀರ್ಘ‌ ಕಾಲದಿಂದ ಮಾಡುತ್ತಿರುವ ಪ್ರಯತ್ನವು ಫ‌ಲಿಸುವ ಕಾಲ ಸನ್ನಿಹಿತ. ಕಾರ್ಯರಂಗದಲ್ಲಿ ಸಹನೆಯು ದಕ್ಷತೆಯಷ್ಟೇ ಪ್ರಧಾನ ವಾಗಲಿದೆ. ಮಕ್ಕಳ ಭವಿಷ್ಯ ಚಿಂತನೆ.ಸಂಗೀತ ಶ್ರವಣ, ಸತYಂಗದಿಂದ ಮನಸ್ಸಿಗೆ ನೆಮ್ಮದಿ. ಶಸ್ತ್ರವೈದ್ಯರಿಗೆ ಕೀರ್ತಿ.

ಕುಂಭ: ಎಂದಿನಂತೆ ನಿಮ್ಮನ್ನು ಅರಸಿಕೊಂಡು ಬಂದಿರುವ ಸೇವಾಕಾರ್ಯಗಳಲ್ಲಿ ಕುಗ್ಗದ ಉತ್ಸಾಹದಿಂದ ಪಾಲುಗೊಳ್ಳುವಿರಿ. ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನ ಏರಿಕೆಯ ಸಾಧ್ಯತೆ. ಬಂಧು ಬಳಗದವರಿಂದ ವಿಶೇಷ ಪ್ರೇಮ ಪ್ರಕಟ.

ಮೀನ: ಶನಿ ಮಹಾತ್ಮನ ಪ್ರೇರಣೆಯಿಂದ ಸತ್ಕಾರ್ಯಗಳಲ್ಲಿ ಪಾಲುಗೊಂಡು ನೆಮ್ಮದಿ ಹೊಂದುವಿರಿ.ಸಾಮಾಜಿಕ ಕಾರ್ಯದಿಂದ ಜನಾಭಿಮಾನಕ್ಕೆ ಗುರಿಯಾಗುವಿರಿ. ಗುರುಹಿರಿಯರ ಆಶೀರ್ವಾದದಿಂದ ಹಿಡಿದ ಕಾರ್ಯವು ತಡವಾಗಿಯಾದರೂ ಕೈಗೂಡುವುದರಲ್ಲಿ ಸಂಶಯವಿಲ್ಲ. ಮನೆಯಲ್ಲಿ ಒಳ್ಳೆಯ ಸಹಕಾರ, ಸೌಜನ್ಯದ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next