Advertisement

ಈ ರಾಶಿಯವರಿಂದು ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ

08:45 AM Dec 09, 2021 | Team Udayavani |

09-12-2021

Advertisement

ಮೇಷ: ರಾಜಕೀಯ ಕಾರ್ಯ ಕ್ಷೇತ್ರದವರಿಗೆ ಅಭಿವೃದ್ಧಿ. ಕ್ರಯ ವಿಕ್ರಯದಲ್ಲಿ ತಾಳ್ಮೆ ಸಹನೆ ಅಗತ್ಯ. ಸ್ವಪ್ರಯತ್ನದಿಂದ ಧನಾಗಮ. ಸಹೋದರಾದಿ ವರ್ಗದಲ್ಲಿ ಪ್ರೋತ್ಸಾಹ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿ. ಅರಣ್ಯ ಪ್ರದೇಶ ಸಂಚಾರ ದೇವತಾ ಸ್ಥಳ ಸಂದರ್ಶನ.

ವೃಷಭ: ಬಂಧುಗಳಿಂದ ಪ್ರೋತ್ಸಾಹ. ಗಂಟಲು ಸಂಬ,ಧ ಆರೋಗ್ಯ ಗಮನಿಸಿ. ಗೌರವದಿಂದ ಕೂಡಿದ ಸ್ಥಾನಮಾನ ಧನಾರ್ಜನೆ. ಕುಟುಂಬ ಸಮೇತ ಸಂಚಾರ. ಹಿರಿಯರ ಆರೋಗ್ಯದ ಬಗ್ಗೆ ಆಲೋಚಿಸಿ. ಧಾರ್ಮಿಕ ವಿಚಾರದಲ್ಲಿ ದ್ವಂದ್ವ.

ಮಿಥುನ: ಬಹು ಮಾತನಾಡಿ ತೊಂದರೆಗೊಳಗಾಗದಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ. ವಿದ್ಯಾರ್ಥಿಗಳು ಪರಿಶ್ರಮಿಸಿದರೆ ಉತ್ತಮ ನಿರೀಕ್ಷಿತ ಫ‌ಲ. ಹಿರಿಯರ ಆರೋಗ್ಯ ಉತ್ತಮ.

ಕರ್ಕ: ಪ್ರಯಾಣದಿಂದ ಸುಖ ಸಂತೋಷ. ಬರಬೇಕಾದ ಸಂಪತ್ತಿಗೆ ಪ್ರಯತ್ನಿಸಿದರೆ ಸಿಗುವ ಅವಕಾಶ. ಪರೋಪಕಾರದಿಂದ ಸುಖ ಸಂತೋಷ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಹಿರಿಯರ ಆರೋಗ್ಯ ಉತ್ತಮ.

Advertisement

ಸಿಂಹ: ಕೆಲಸ ಕಾರ್ಯಗಳ ಗುಣದೋಷ ಅರಿಯದೇ ಉತ್ಸಾಹದಿಂದ ದುಮುಕದಿರಿ. ಸಮುದ್ರೋತ್ಪನ್ನ ವಸ್ತುಗಳಲ್ಲಿ ಆಸಕ್ತಿ. ದೇವತಾ ಕಾರ್ಯಕ್ಕೆ ಧನವ್ಯಯ. ಮಕ್ಕಳಿಂದ ಸಂತೋಷ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ ಗೃಹೋಪವಸ್ತು ಸಂಗ್ರಹ.

ಕನ್ಯಾ: ನೀರಿನಿಂದ ಉದ್ಭವಿಸಿದ ಪದಾರ್ಥಗಳ ಕ್ರಯವಿಕ್ರಯದಲ್ಲಿಯೂ, ವಿದೇಶ ವ್ಯವಹಾರದಲ್ಲಿಯೂ ಉತ್ತಮ ಲಾಭದಾಯಕ. ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಅತ್ಯುತ್ತಮ ದಿನ ದೇವತಾ ಕಾರ್ಯದಲ್ಲಿ ಶ್ರೇಯ. ಆರೋಗ್ಯ ಉತ್ತಮ.

ತುಲಾ: ಆರೋಗ್ಯದಲ್ಲಿ ನಿರ್ಲಕ್ಷತೆ ಸಲ್ಲದು. ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ದಂಪತಿಗಳಲ್ಲಿ ಸಂಸಾರದಲ್ಲಿ ಅನ್ಯೋನ್ಯತೆ, ಸಂತೋಷದ ವಾತಾವರಣ. ಭೂ-ವಾಹನಾದಿ ಖರೀದಿ ವಿಚಾರಗಲ್ಲಿ ಪ್ರಗತಿ.

ವೃಶ್ಚಿಕ: ನೂತನ ಮಿತ್ರರ ಸಮಾಗಮ. ಗುರುಹಿರಿಯರ ಆಶೀರ್ವಾದ. ಬಹಳ ಸಮಯ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಗೌರವದಿಂದ ಕೂಡಿದ ಧನಾರ್ಜನೆ.

ಧನು: ಉತ್ತಮ ವ್ಯಕ್ತಿಗಳ ಒಡನಾಟದಿಂದ ಆತ್ಮಸ್ಥೈರ್ಯವೃದ್ಧಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ನಿರೀಕ್ಷಿತ ಧನ ಪ್ರಾಪ್ತಿ. ವಿದ್ಯಾರ್ಥಿಗಳು ಅಧಿಕ ಶ್ರಮ ವಹಿಸಿ ಕಾರ್ಯ ಸಾಧಿಸಿಕಕೊಳ್ಳಬೇಕಾದ ಪರಿಸ್ಥಿತಿ. ದಾಂಪತ್ಯ ತೃಪ್ತಿ.

ಮಕರ: ಪರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ತಾಳ್ಮೆ ವಿವೇಕತೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಉತ್ತಮಧನಾರ್ಜನೆ ಇದ್ದರೂ ಖರ್ಚಿಗೆ ಹಲವು ದಾರಿ. ಗೃಹದಲ್ಲಿ ಸಂತಸದ ವಾತಾವರಣ. ಆರೋಗ್ಯ ವೃದ್ಧಿ.

ಕುಂಭ: ಅನ್ಯರ ಸಹಾಯವನ್ನು ಅಪೇಕ್ಷಿಸದೆ ಸ್ವಂತ ಪ್ರಯತ್ನದಿಂದ ನಿರೀಕ್ಷಿತ ಕಾರ್ಯ ಸಾಧಿಸಿಕೊಳ್ಳಿ. ಉತ್ತಮ ಧನಾರ್ಜನೆ. ಭೂಮಿ ಕಡದಾರಿ ವ್ಯವಹಾರದಲ್ಲಿ ಪ್ರಗತಿ. ಬಂಧುಗಳ ಮಿಲನ. ಸಾಂಸಾರಿಕ ಸುಖ ವೃದ್ಧಿ. ಗುರು ಹಿರಿಯರ ಆರೋಗ್ಯ ತೃಪ್ತಿದಾಯಕ.

ಮೀನ: ಪಾಲುದಾರಿಕಾ ವ್ಯವಹಾರದಲ್ಲಿ ತಾಳ್ಮೆ ಸಹನೆಯಿಂದ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಆಲೋಚಿಸಿ ನಿರ್ಣಯ ಮಾಡುವುದರಿಂದ ಯಶಸ್ಸು. ಧನಾರ್ಜನೆ ಅತ್ಯುತ್ತಮ. ಹಿರಿಯರ ಪ್ರೋತ್ಸಾಹ ಆಶೀರ್ವಾದದಿಂದ ಅಭಿವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next