Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕೆಲವೊಂದು ಸಮಸ್ಯೆಗಳು ಕಂಡುಬಂದು ಬೇಸರವಾದೀತು!

07:13 AM Apr 30, 2021 | Team Udayavani |

30-04-2021

Advertisement

ಮೇಷ: ಉದ್ಯೋಗ ರಂಗದಲ್ಲಿ ನಿಮ್ಮ ದುಡಿಮೆ ಸಲಹೆ, ಸೂಚನೆಗಳಿಗೆ ಭಂಗ ಬಂದೀತು. ಯೋಗ್ಯ ವಯಸ್ಕರಿಗೆ ಪರಿಶ್ರಮದಿಂದಲೇ ವೈವಾಹಿಕ ಯೋಗವು ಒದಗಿ ಬರಲಿದೆ. ಸಾಂಸಾರಿಕವಾಗಿ ಜೀವನದಲ್ಲಿ ಸಂಯಮ ವಹಿಸಿರಿ. ಶುಭವಿದೆ.

ವೃಷಭ: ಜೀವನದಲ್ಲಿ ಏನು ಬಂದರೂ ಸ್ವೀಕರಿಸುವ ಮನೋಗುಣ ಬೆಳೆಸಿಕೊಳ್ಳಿರಿ. ನಿರಾಶಾ ಮನೋಭಾವವು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸೀತು. ಹಾಗಾಗಿ ಧನಾತ್ಮಕವಾಗಿ ಆಲೋಚಿಸಿ ಮುನ್ನಡೆಯಿರಿ. ಪರಿಣಾಮಕಾರಿ ಫ‌ಲಿತಾಂಶ ಸಿಗಲಿದೆ.

ಮಿಥುನ: ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಗಾಗ ಉದ್ವೇಗದಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರುವುದು, ಕುಟುಂಬದಲ್ಲಿ ಕ್ಷುಲ್ಲಕ ವಿಚಾರದಲ್ಲಿ ಭಿನ್ನಾಭಿಪ್ರಾಯ ತೋರಿ ಬರಲಿದೆ. ನೂತನ ಕಾರ್ಯಾರಂಭಕ್ಕೆ ಉತ್ತಮ ಕಾಲವಾಗಿದೆ.

ಕರ್ಕ: ಸಾಂಸಾರಿಕವಾಗಿ ದಾಂಪತ್ಯದಲ್ಲಿ ಪ್ರೀತಿ, ವಿಶ್ವಾಸಗಳು ಮೂಡಿಬರಲಿದೆ. ವ್ಯಾಪಾರ ವ್ಯವಹಾರಗಳ ಚಿಂತನೆ ಕಾರ್ಯಗತವಾಗುತ್ತದೆ. ಸಾಂಸಾರಿಕವಾಗಿ ಗೃಹಿಣಿಯ ಸಹಕಾರ, ಸುಪ್ರಸನ್ನತೆ ನಿಮ್ಮನ್ನು ಸಮಾಧಾನವಾಗಿಡಲಿದೆ.

Advertisement

ಸಿಂಹ: ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಂಡಾವು. ಆದಾಯಕ್ಕಿಂತ ಖರ್ಚುಗಳೇ ಹೆಚ್ಚು ಕಂಡು ಬರುವುದು. ಶುಭಮಂಗಲ ಕಾರ್ಯನಿಮಿತ್ತ ಪ್ರಯಾಣವು ಒದಗಿ ಬರಲಿದೆ. ದಿನೇ ದಿನೇ ಅಭಿವೃದ್ಧಿ ಕಂಡುಬಂದೀತು.

ಕನ್ಯಾ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರವು ಒದಗಿ ಬಂದೀತು. ಹಿತಶತ್ರುಗಳ ಬಗ್ಗೆ ಜಾಗ್ರತೆ ಮಾಡಿರಿ. ನಿಮ್ಮ ಕೋಪ, ಹಠ, ಸಿಡುಕು ಸ್ವಲ್ಪ ಬಿಟ್ಟು ಮುಂದುವರಿದಲ್ಲಿ ಎಲ್ಲಾ ಹಾದಿಯು ಸುಗಮವಾಗಿ ತೆರೆದೀತು.

ತುಲಾ: ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಕಂಡು ಬರುವುದು. ಪ್ರೀತಿ, ವಿಶ್ವಾಸದಿಂದ ಇತರರ ಗಮನ ನಿಮ್ಮತ್ತ ಸೆಳೆಯಿರಿ. ಜೀವನವು ಅಸ್ತವ್ಯಸ್ತವಾದೀತು.

ವೃಶ್ಚಿಕ: ರಾಜಕೀಯದವರಿಗೆ ತಲೆಚಿಟ್ಟು ಹಿಡಿಯುವ ಪರಿಸ್ಥಿತಿಯು ಕಂಡುಬಂದೀತು. ಕೆಲವೊಂದು ಸಮಸ್ಯೆಗಳು ಕಂಡುಬಂದು ಬೇಸರವಾದೀತು. ಶತ್ರುಗಳ ಪ್ರಭಾವವು ಹೆಚ್ಚಾದೀತು. ಜಾಗ್ರತೆಯಿಂದ ಮುಂದುವರಿಯಿರಿ.

ಧನು: ಅನಿರೀಕ್ಷಿತವಾಗಿ ಅತಿಥಿಗಳು ಬಂದು ಅಚ್ಚರಿ ನೀಡಿಯಾರು. ಅವಿವಾಹಿತರ ವೈವಾಹಿಕ ಸಂಘಟನೆಗೆ ಪ್ರಚೋದನೆ ಲಭಿಸೀತು. ಆಕಸ್ಮಿಕ ಧನಾನುಕೂಲವಿದೆ. ಕೊಟ್ಟ ಸಾಲ ಮರಳಿ ಬಂದು ಸಂತೋಷ ಲಭಿಸಲಿದೆ.

ಮಕರ: ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡು ಬಂದರೂ, ನಿಮ್ಮ ಕೆಲಸವು ನಿಧಾನವಾಗಿ ಸಾಗಲಿದೆ. ಸಾಂಸಾರಿಕವಾಗಿ ಆಂತರಿಕ ಸ್ಥಿತಿ-ಗತಿಗಳು ನಿರೀಕ್ಷಿತ ರೀತಿಯಲ್ಲಿ ಸಮಾಧಾನ ತಂದುಕೊಡಲಿದೆ.

ಕುಂಭ: ಕುಟುಂಬದಲ್ಲಿ ಹಲವು ತರಹದ ಎಡರುತೊಡರುಗಳು ಕಂಡುಬಂದರೂ, ಸನಿ¾ತ್ರರ ಸಹಕಾರದಿಂದ ಪ್ರಗತಿ ಹಾಗೂ ಸಮಾಧಾನ ದೊರೆಯುವುದು. ಆಗಾಗ ಕೆಲವೊಂದು ವಿಚಾರಗಳು ನಿಮ್ಮ ಮನಸ್ಸನ್ನು ಕೆಡಿಸಲಿದೆ.

ಮೀನ: ಮನಸ್ಸಿಗೆ ಸಮಾಧಾನವಿರದು. ಆಂತರಿಕ ಹಾಗೂ ಬಾಹ್ಯವಾಗಿ ಹಲವು ಗೊಂದಲದ ಗೂಡಾದೀತು. ನಿಮ್ಮ ಮನಸ್ಸು ಆದಷ್ಟು ಸ್ಥಿಮಿತದಲ್ಲಿಟ್ಟುಕೊಳ್ಳಿರಿ. ದೂರ ಸಂಚಾರದಿಂದ ನಿರೀಕ್ಷಿತ ಕಾರ್ಯಸಿದ್ಧಿಯಾಗಲಿದೆ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next