Advertisement

ಇಂದಿ ಗ್ರಹಬಲ: ಅವಿವಾಹಿತರ ವಿವಾಹ ಜೋಡಣೆ ಯೋಜನೆಗಳ ಅನುಷ್ಠಾನಕ್ಕೆ ಇದು ಸಕಾಲ.

07:40 AM Apr 12, 2021 | Team Udayavani |

12-04-2021

Advertisement

ಮೇಷ: ಹಂತಹಂತವಾಗಿ ನಿಮ್ಮ ಅಭಿವೃದ್ಧಿ, ಆತ್ಮವಿಶ್ವಾಸ, ಪ್ರಯತ್ನ ಒಲವು ಹೆಚ್ಚಲಿದೆ. ಆದರೆ ಅತೀ ವಿಶ್ವಾಸ ನಿಮ್ಮಲ್ಲಿ ಅಹಂಕಾರ ತೋರಿಸಲಿದೆ. ತಾಳ್ಮೆ ಸಂಯಮದಿಂದ ವರ್ತಿಸಿದಲ್ಲಿ ಗೊಂದಲ ನಿವಾರಿಸಬಹುದು.

ವೃಷಭ: ವ್ಯವಹಾರಿಕವಾಗಿ ಕೊಂಡು ಕೊಳ್ಳುವುದರಲ್ಲಿ ಲಾಭವನ್ನು ಪಡೆಯಲಿದ್ದೀರಿ. ಕುಟುಂಬದವರ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ತೋರಿಬರುವುದು. ವಿವಾಹ ಸಂಬಂಧಿ, ಉದ್ಯೋಗ ಸಂಬಂಧಿತ ವಿಚಾರದಲ್ಲಿ ಜಯ.

ಮಿಥುನ: ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಇಷ್ಟಾರ್ಥವು ಸಿದ್ಧಿಸಲಿದೆ. ಸಾಮಾಜಿಕವಾಗಿ ನಿಮ್ಮ ಪ್ರಭಾವ ಬೆಳೆಯಲಿದೆ. ಅದೃಷ್ಟ ಒಲವು ನಿಮ್ಮ ಪಾಲಿಗಿದ್ದು ನಿಮ್ಮ ಎಣಿಕೆಗಳೆಲ್ಲ ಈಡೇರಿ ಸಂತೋಷಗೊಳ್ಳುವಿರಿ.

ಕರ್ಕ: ಧೈರ್ಯದಿಂದ ಮುಂದೆ ಹೆಜ್ಜೆ ಇಟ್ಟು ಕಾರ್ಯ ಸಾಧಿಸಿರಿ. ಹೊಸ ವ್ಯವಹಾರದಲ್ಲಿ ನಿಮ್ಮನ್ನು ಹೊಂದಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾದೀತು. ಮನೆಯಲ್ಲಿ ಕುಟುಂಬದವರ ಒಳಜಗಳ ಮನಸ್ಸು ಕೆಡಿಸಲಿದೆ.

Advertisement

ಸಿಂಹ: ದೂರ ಪ್ರಯಾಣದ ಸಾಧ್ಯತೆ ಕಂಡು ಬರುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಉತ್ತಮ ಅವಕಾಶಗಳು ಕಂಡು ಬರುವುದು. ಒಳಜಗಳ, ಹಿತಶತ್ರು ಬಾಧೆ, ಭಿನ್ನಾಭಿಪ್ರಾಯಗಳಿಂದ ಕುಟುಂಬ ಜೀವನ ಗೊಂದಲಮಯವಾದೀತು.

ಕನ್ಯಾ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಅವಕಾಶಗಳು ಕಂಡು ಬರುವುದು. ಉದ್ವೇಗ ಪರಿಸ್ಥಿತಿಯಲ್ಲಿ ಸಿಲುಕಿ ತೊಳಲಾಡುವಿರಿ. ಬಹುಶಃ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳೇ ಕಾರಣವಾಗಬಹುದು.

ತುಲಾ: ವ್ಯಾಪಾರಿ ವರ್ಗದವರಿಗೆ ಜೀವನವು ಮಂದಗತಿಯಲ್ಲಿ ಸಾಗಲಿದೆ. ವಿದ್ಯಾರ್ಥಿ ವರ್ಗಕ್ಕೆ ಹೆಚ್ಚಿನ ಪ್ರಯತ್ನ ಬಲದಿಂದ ಮುಂದುವರಿದಲ್ಲಿ ಉತ್ತಮವಿದೆ. ಅಪಘಾತಗಳ ಬಗ್ಗೆ ಅತೀ ಹೆಚ್ಚಿನ ಜಾಗ್ರತೆ ಮಾಡಿದರೆ ಉತ್ತಮ.

ವೃಶ್ಚಿಕ: ಉದ್ಯೋಗಿಗಳಿಗೆ ವರ್ಗಾವಣೆಯ ಯಾ ಸ್ಥಾನ ಬದಲಾವಣೆ ಯೋಗ ತೋರಿಬರುವುದು. ಕುಟುಂಬ ಸ್ಥಾನದಲ್ಲಿ ಅನಗತ್ಯ ವಿಚಾರದಲ್ಲಿ ಭಿನ್ನಾಭಿಪ್ರಾಯವು ಮೂಡಿಬಂದು ಕಲಹವಾದೀತು. ಜಾಗ್ರತೆ .

ಧನು: ಹಂತಹಂತವಾಗಿ ನಿಮ್ಮ ಆತ್ಮವಿಶ್ವಾಸದ, ಪ್ರಯತ್ನ ಬಲದಿಂದ ಜಾಗೃತಿಯು ಉಂಟಾಗುವುದು. ಉದ್ಯಮ, ವ್ಯಾಪಾರ, ವ್ಯವಹಾರ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಂಡು ಬರುವುದು. ಕೊಟ್ಟುಕೊಳ್ಳುವಿಕೆಯಲ್ಲಿ ಲಾಭವಿದೆ.

ಮಕರ: ಸಂತಸ, ಸಮಾಧಾನದ ಸುದ್ದಿಯನ್ನು ಆಲಿಸಲಿದ್ದೀರಿ. ವಿವಾಹ, ಹುಟ್ಟುಹಬ್ಬ ಇತ್ಯಾದಿಗಳಿಂದ ಉಲ್ಲಾಸಕರ ವಾತಾವರಣ ಕಂಡು ಬರಲಿದೆ. ದೂರ ಪ್ರಯಾಣದಿಂದ ಕಾರ್ಯಾನುಕೂಲವಿದೆ. ಪತ್ನಿ, ಮಕ್ಕಳಿಂದ ಸಂತಸವಿದೆ.

ಕುಂಭ: ವೈಯಕ್ತಿಕ ತಪ್ಪುಗಳಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುವಿರಿ. ಮಿತ್ರ ವರ್ಗದವರಿಂದ ಸಹಕಾರ ಸಿಕ್ಕಿ ನೆಮ್ಮದಿಯಾಗಲಿದೆ. ಅವಿವಾಹಿತರ ವಿವಾಹ ಜೋಡಣೆ ಯೋಜನೆಗಳ ಅನುಷ್ಠಾನಕ್ಕೆ ಇದು ಸಕಾಲ.

ಮೀನ: ನಿರುದ್ಯೋಗಿಗಳಿಗೆ ಅನಿರೀಕ್ಷಿತ ಅವಕಾಶಗಳು ದೊರಕಲಿದೆ. ಅಲ್ಲದೆ ವಿದೇಶ ಯಾನದ ಯೋಗವೂ ಕೂಡಿ ಬಂದೀತು. ಈ ಸಮಯದಲ್ಲಿ ಹೇಗೆ ಉಪಯೋಗಿಸಿಕೊಳ್ಳುವಿರಿ ಎಂಬುದರ ಮೇಲೆ ನಿಮ್ಮ ಯಶಸ್ಸು ಅಡಗಿರುತ್ತದೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next