Advertisement

ಈ ರಾಶಿಯವರಿಗೆ ವೃತ್ತಿರಂಗದಲ್ಲಿ ಯಾವುದೇ ನಿರ್ಣಯಗಳಿಗೆ ಇದು ಉತ್ತಮ ಕಾಲವಲ್ಲ

07:39 AM Apr 06, 2021 | Team Udayavani |

06-04-2021

Advertisement

ಮೇಷ: ಕೆಟ್ಟ ಕೆಲಸಗಳ ಬಗ್ಗೆ ಪ್ರಚೋದಿತರಾಗದಿರಿ. ಕಾಂಟ್ರಾಕ್ಟ್ದಾರರಿಗೆ, ಕಮಿಶನ್‌ ವ್ಯಾಪಾರಿಗಳಿಗೆ ಅಧಿಕ ರೀತಿಯಲ್ಲಿ ಲಾಭಾಂಶ ತಂದು ಕೊಡಲಿದೆ. ವೃತ್ತಿರಂಗದಲ್ಲಿ ಯಾವುದೇ ನಿರ್ಣಯಗಳಿಗೆ ಇದು ಉತ್ತಮ ಕಾಲವಲ್ಲ.

ವೃಷಭ: ಯೋಗ್ಯ ವಯಸ್ಕರಿಗೆ ಸಂಗಾತಿಯ ಬಗ್ಗೆ ಹೆಚ್ಚಿನ ಪ್ರಯತ್ನ ಬಲ ಹಾಗೂ ಹುಡುಕಾಟ ತೋರಿ ಬರುತ್ತದೆ. ದಾಯಾದಿಗಳಿಂದ ಶತ್ರುತ್ವ ಏರ್ಪಡುವ ಸಂಭವವಿದೆ. ಪತ್ನಿಯಿಂದ ಸುಖ, ಸಮಾಧಾನಗಳಿದ್ದು ನೆಮ್ಮದಿ ಇದೆ.

ಮಿಥುನ: ಕೋರ್ಟು ಕಚೇರಿಗಳ ಕಾರ್ಯಭಾಗದಲ್ಲಿ ಹಿನ್ನಡೆಯ ಸಾಧ್ಯತೆ ಕಂಡುಬರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ನಿರಾಸಕ್ತಿ ಕಂಡುಬರಲಿದೆ. ಸಾಂಸಾರಿಕವಾಗಿ ಹಾಗೂ ವೃತ್ತಿರಂಗದಲ್ಲಿ ಕೂಡಾ ಸಮಸ್ಯೆಗಳು ಉಪಶಮನವಾಗಲಿದೆ.

ಕರ್ಕ: ದಾಂಪತ್ಯದಲ್ಲಿ ಸಮಾಧಾನವಿರುತ್ತದೆ. ಗೃಹಿಣಿಯ ಆಕಾಂಕ್ಷೆಗಳು ಪೂರೈಕೆಯೊಂದಿಗೆ ಶಾಂತಿ ಸಮಾಧಾನ ನೆಲೆಸಲಿದೆ. ಸಂತಸ, ಸಮಾಧಾನದ ಕಾಲವಿದು. ಭಾವೋದ್ವೇಗಕ್ಕೆ ಅನಾವಶ್ಯಕವಾಗಿ ಒಳಗಾಗುವುದು ಅಗತ್ಯವಿಲ್ಲ.

Advertisement

ಸಿಂಹ: ಮಾನಸಿಕವಾಗಿ ಆತ್ಮವಿಶ್ವಾಸ ಹಾಗೂ ಧೈರ್ಯ ಅತೀ ಇರುವ ನಿಮಗೆ ಎಲ್ಲಾ ಕಾರ್ಯದಲ್ಲೂ ಜಯ ಸಿಗಲಿದೆ. ಆರ್ಥಿಕವಾಗಿ ಅಭಿವೃದ್ಧಿಯ ಕಾಲವಿದು. ಹಂತಹಂತವಾಗಿ ಸಮಸ್ಯೆಗಳಿಂದ ಪಾರಾಗಲಿದ್ದೀರಿ. ಅಭಿವೃದ್ಧಿ ಇದೆ.

ಕನ್ಯಾ: ಸಾಂಸಾರಿಕವಾಗಿ ಮಕ್ಕಳು ಪತ್ನಿಯಿಂದ ಸುಖ ಹಾಗೂ ಸಮಾಧಾನಗಳಿರುತ್ತದೆ. ಯೋಗ್ಯ ವಯಸ್ಕರಿಗೆ ಕಂಕಣಬಲವು ಕೂಡಿ ಬಂದು ಅವಕಾಶಗಳು ಒದಗಿ ಬರಲಿದೆ. ಆರ್ಥಿಕವಾಗಿ ಗಟ್ಟಿಗೊಳ್ಳಲಿದ್ದೀರಿ. ಖರ್ಚು ಇದೆ.

ತುಲಾ: ಆರ್ಥಿಕವಾಗಿ ಸ್ಥಿರತೆ ಇಲ್ಲವಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ವ್ಯಾಪಾರ, ವ್ಯವಹಾರಸ್ಥರಿಗೆ ಲಾಭಾಂಶವಿರುತ್ತದೆ. ಆದರೂ ಖರ್ಚು ವೆಚ್ಚಗಳಲ್ಲಿ ಮಿತಿ ಇದ್ದರೆ ಉತ್ತಮ. ಕೋರ್ಟುಕಚೇರಿಯಲ್ಲಿ ಮುನ್ನಡೆ ಇದೆ.

ವೃಶ್ಚಿಕ: ನಿಮ್ಮ ಪ್ರಯತ್ನಬಲಕ್ಕೆ ಯಶಸ್ಸು ಹಿಂಬಾಲಿಸಲಿದೆ. ವಿದ್ಯಾರ್ಥಿಗಳಿಗೆ ವಿದೇಶ ಯಾನವು ಕೂಡಿಬರುವುದು. ಸ್ಥಗಿತಗೊಂಡ ಕೆಲಸಕಾರ್ಯಗಳು ಪುನಃ: ಚಾಲನೆಗೆ ಬರಲಿದೆ. ಆಗಾಗ ಮಾನಸಿಕ ಕ್ಷೋಭೆ ಕಂಡುಬಂದೀತು.

ಧನು: ಸಾಹಿತಿ, ಕಲಾವಿದರಿಗೆ ಸ್ಥಾನಮಾನ, ಗೌರವ ಗಳು ಲಭಿಸಲಿದೆ. ಋಣಾತ್ಮಕ ಚಿಂತೆನೆಗೆ ಗುರಿಯಾಗ ದಿದ್ದಲ್ಲಿ ಉತ್ತಮ. ಆಗಾಗ ಆರ್ಥಿಕವಾಗಿ ಒತ್ತಡವನ್ನು ಅನುಭವಿಸುವಂತಾದೀತು. ದುಡುಕು ವರ್ತನೆ ಪಶ್ಚಾತ್ತಾಪ ತಂದೀತು.

ಮಕರ: ವಯಸ್ಕರಿಗೆ ಚಿಂತೆಯು ಕಾಡಲಿದೆ. ಸ್ವಾಭಿಮಾನವನ್ನು ಬದಿಗೊತ್ತಿ ಮೇಲಾಧಿಕಾರಿಗಳ ಕೃಪೆ ಪಡೆಯಿರಿ. ನಿಮ್ಮಿಂದ ಪಡೆದ ಹಣವನ್ನು ಮರಳಿ ಪಡೆಯಲು ಕಷ್ಟ ಕಂಡುಬಂದೀತು. ಅತಿ ಹೆಚ್ಚಿನ ಜಾಗ್ರತೆ ಮಾಡಿರಿ.

ಕುಂಭ: ಆತ್ಮಾಭಿಮಾನವನ್ನು ಸಂರಕ್ಷಿಸುವ ಅದೃಷ್ಟಬಲವನ್ನು ಕಾಯದೆ ಪ್ರಯತ್ನ ಬಲದಿಂದ ಕ್ರಿಯಾಶೀಲರಾದ ನಿಮಗೆ ಉತ್ತಮ ಪ್ರತಿಫ‌ಲ ದೊರಕಲಿದೆ. ಆಗಾಗ ಎಣಿಸಿದ ಕಾರ್ಯಗಳು ಅಡೆತಡೆಯಿಂದ ನಡೆದೀತು.

ಮೀನ: ಉದ್ಯೋಗರಂಗದಲ್ಲಿ ಒತ್ತಡಗಳಿಂದ ತಪ್ಪುಗಳು ಘಟಿಸಬಹುದು. ಸ್ವಲ್ಪ ಸವಾಧಾನದಿಂದ ಯೋಚಿಸಿ ಮುನ್ನಡೆಯಿರಿ. ಧನಾಗಮನ ಅಧಿಕ ರೂಪದಲ್ಲಿದ್ದರೂ ಖರ್ಚುವೆಚ್ಚಗಳು ಕಂಡುಬರುವುದು. ಶುಭವಿದೆ.

 

ಎನ್.ಎಸ್. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next