Advertisement

ಇಂದಿನ ಗ್ರಹಬಲ: ಮನೆಯಲ್ಲಿ ಶುಭಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲಿದೆ

07:46 AM Apr 04, 2021 | Team Udayavani |

04-04-2021

Advertisement

ಮೇಷ: ಆಗಾಗ ಇಷ್ಟಮಿತ್ರರ ಆಗಮನದಿಂದ ಹರುಷ ತರಲಿದೆ. ಮುಖ್ಯವಾಗಿ ಉದರ ಸಂಬಂಧಿತ ಸಮಸ್ಯೆ ಗಳು, ಸಿಟ್ಟಿನ ನಿರ್ಣಯದಿಂದ ಅನಾವಶ್ಯಕ ತೊಂದರೆಗಳನ್ನು ಎದುರಿಸುವಂತಾದೀತು. ಉದ್ವೇಗ ಕಡಿಮೆ ಮಾಡಿರಿ.

ವೃಷಭ: ಆರ್ಥಿಕವಾಗಿ ಅಧಿಕರೂಪದಲ್ಲಿ ಖರ್ಚುವೆಚ್ಚಗಳು ತೋರಿಬರುವುದರಿಂದ ಅದಷ್ಟು ಜಾಗ್ರತೆ ಮಾಡಬೇಕಾಗುತ್ತದೆ. ಆದರೂ ಈ ಮಧ್ಯೆ ಆಕರ್ಷಕ ದುಡಿಮೆಯಿಂದ ಆದಾಯವು ನಿಮ್ಮ ಪ್ರಯತ್ನಬಲಕ್ಕೆ ತಕ್ಕ ಸಲ್ಲಲಿದೆ.

ಮಿಥುನ: ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆಯ ಯೋಗವಿದೆ. ಸಂಸಾರದ ಖರ್ಚಿನ ನಿಭಾವಣೆ ಆತಂಕ ತರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ದೂರ ಪ್ರಯಾಣವು ತೋರಿ ಬರಲಿದೆ. ಅಜೀರ್ಣದ ಉಪದ್ರವ ಕಾಡಲಿದೆ.

ಕರ್ಕ: ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಇದ್ದರೂಶತ್ರುಗಳ ಸ್ಪರ್ಧಾತ್ಮಕ ರೀತಿಯಿಂದ ಆತಂಕಕ್ಕೆ ಕಾರಣವಾಗಲಿದೆ. ಮಕ್ಕಳ ಮೋಜು ಮಾನಹಾನಿಗೆ ಕಾರಣವಾದೀತು. ಪ್ರೀತಿಯ ಮಡದಿಯ ಸಲಹೆಗಳಿಗೆ ಸ್ಪಂದಿಸಿದರೆ ಉತ್ತಮ.

Advertisement

ಸಿಂಹ: ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಗೆಜವಾಬ್ದಾರಿಯು ಹೆಚ್ಚಲಿದ್ದು ದೇಹಾಯಾಸಕ್ಕೆ ಕಾರಣ ವಾಗಲಿದೆ. ಉದ್ದಿಮೆದಾರರಿಗೆ ನೌಕರ ವರ್ಗದ ಸತ್ಯಾಗ್ರಹದಿಂದ ಕ್ಲೇಶ ಕಂಡುಬಂದೀತು. ರಾಜಕೀಯದವರಿಗೆ ತಲೆಬಿಸಿ ಕಂಡು ಬರಲಿದೆ.

ಕನ್ಯಾ: ಹಂತಹಂತವಾಗಿ ಮುನ್ನಡೆ ಕಂಡುಬಂದು ಸಮಾಧಾನವಾಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯದಲ್ಲಿ ಸಂತಾನಫ‌ಲದ ಸೂಚನೆ ಕಂಡು ಬಂದು ಸಂತಸವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ.

ತುಲಾ: ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಯೋಗ ಕಂಡು ಬರಲಿದೆ. ಎಲ್ಲಕ್ಕೂ ನಿಮ್ಮ ಪ್ರಯತ್ನ ಬಲ, ಕ್ರಿಯಾಶೀಲತೆಯು ಪೂರಕವಾಗಲಿದೆ. ನಿಮ್ಮ ವೈಯಕ್ತಿಕ ಗೌರವ, ಘನತೆ ಕಾಪಾಡಿಕೊಂಡು ಬನ್ನಿರಿ. ಶುಭ ಫ‌ಲವಿದೆ.

ವೃಶ್ಚಿಕ: ಎಲ್ಲಾ ರೀತಿಯ ಕ್ಷೇತ್ರದಲ್ಲೂ ಅಭಿವೃದ್ಧಿ ಕಂಡು ಬರಲಿದೆ. ಸಾಮಾಜಿಕವಾಗಿ ಪ್ರಶಂಸೆ ಪಡೆಯಲಿದ್ದೀರಿ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋದರೂ ಉದಾಸೀನ ಮಾಡದಿರಿ. ಶಾಂತಿ, ಸಮಾಧಾನ, ಪ್ರಯತ್ನ ಅಗತ್ಯವಿದೆ.

ಧನು: ಸಂಸಾರದಲ್ಲಿ ಆಗಾಗ ಏರುಪೇರು ತೋರಿ ಬಂದೀತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವರು ಹಂತ ಹಂತವಾಗಿ ಗುಣಮುಖರಾಗುತ್ತಾರೆ. ಕೋರ್ಟು ಕೇಸುಗಳಿಂದ ಮುಕ್ತರಾಗುವ ಸಾಧ್ಯತೆ ಇದೆ. ಯಾರನ್ನೂ ನಂಬಿ ಮೋಸ ಹೋಗದಿರಿ.

ಮಕರ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರಿ. ವಿದೇಶಯಾನದ ಭಾಗ್ಯ ಆಗಾಗ ಒದಗಿ ಬಂದೀತು. ಮನೆಯಲ್ಲಿ ಶುಭಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲಿದೆ. ಹಿತಶತ್ರುಗಳಿಂದ ದೂರವಿದ್ದರೆ ಒಳ್ಳೆಯದು.

ಕುಂಭ: ಜ್ಞಾನದಾಹಿಗಳಿಗೆ ಇದು ಉತ್ತಮ ಕಾಲ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಕೀರ್ತಿ ಪಡೆಯಲಿ ದ್ದಾರೆ. ಸರಕಾರೀ ಉದ್ಯೋಗಿಗಳಿಗೆ ಯೋಗ್ಯ ಪುರಸ್ಕಾರ ಸಿಗಲಿದೆ. ಅಧಿಕಾರಿ ವರ್ಗಕ್ಕೆ ಮುಂಭಡ್ತಿ ಯೋಗವು ಕಂಡುಬರುವುದು.

ಮೀನ: ಶ್ರಮವು ಹೆಚ್ಚಿದ್ದರೂ ದುಡಿಮೆ ಲಾಭದಾಯಕವಾಗಲಿದೆ. ಎಲ್ಲಾ ವಿಚಾರದಲ್ಲಿ ಜಾಗ್ರತೆ ವಹಿಸಬೇಕಾಗುವುದು. ನೀಚ ಜನರಿಂದ ದೂರವಿರಿ. ಅವರಿಂದ ಕೆಟ್ಟ ಮಾತು ಕೇಳಬೇಕಾದೀತು. ದೂರ ಸಂಚಾರ ಆಯಾಸ ತರಲಿದೆ.

ಎನ್‌.ಎಸ್‌. ಭಟ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next