Advertisement

ಇಂದಿನ ಗ್ರಹಬಲ: ಬಂಡವಾಳದ ವೈವಾಹಿಟಿನಲ್ಲಿ ಪಾಲುಗಾರನಿಂದ ಮೋಸಕ್ಕೆಡೆಯಿದೆ!

07:40 AM Apr 02, 2021 | Team Udayavani |

02-04-2021

Advertisement

ಮೇಷ: ಧನ ಸಂಗ್ರಹದ ಕೊರತೆ ಆಗಾಗ ಕಾಣಿಸಿಕೊಂಡು ಕಾರ್ಯಾನುಕೂಲಕ್ಕೆ ವಿಳಂಬವಾದೀತು. ವೃತ್ತಿರಂಗದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಲ್ಲಿ ಯಶಸ್ಸು ನಿಮ್ಮದಾಗಲಿದೆ. ಪತ್ನಿಯ ತವರು ಮನೆಯ ವಾಸ ಏಕಾಕಿತನದ ಅನುಭವವಾದೀತು.

ವೃಷಭ: ವಿದ್ಯೆಯಲ್ಲಿ ಮಕ್ಕಳಿಗೆ ಯಶಸ್ಸು ದೊರೆತು ಸಂತಸವಾಗಲಿದೆ. ಶೇರು ಕಮಿಶನ್‌ ವ್ಯವಹಾರ ಗಳಲ್ಲಿ ಹೂಡಿಕೆಗಳು ಉತ್ತಮ ಫ‌ಲ ನೀಡದು. ವ್ಯಾಪಾರ, ವ್ಯವಹಾರಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಆಗಾಗ ಅಸಮಾಧಾನಕ್ಕೆ ಕಾರಣವಾಗಲಿದೆ.

ಮಿಥುನ: ಆದಾಯವನ್ನು ಮೀರಿ ಖರ್ಚು ಕಂಡು ಬರಲಿದೆ. ಹೆಚ್ಚಿನ ಜಾಗ್ರತೆ ವಹಿಸುವುದು. ಗೃಹಿಣಿಗೆ ಸಂಭ್ರಮದ ಸಮಯವಿದು. ವಿಲಾಸೀ ವಸ್ತುಗಳ ಖರೀದಿ, ಬೆಳ್ಳಿ ಬಂಗಾರ, ಒಡವೆ ವಸ್ತುಗಳ ಖರೀದಿ ತಂದೀತು. ಆರೋಗ್ಯವು ಉತ್ತಮ.

ಕರ್ಕ: ಅವಿವಾಹಿತರಿಗೆ ನೂತನ ಸಂಬಂಧದ ಮಾತುಕತೆ ನಾಂದಿಯಾದೀತು. ಹಿರಿಯರ ಆಶೀರ್ವಾದ ಇದೆ. ಆರೋಗ್ಯದ ಕೊರತೆ ಆಗಾಗ ಕಾಣಿಸಿಕೊಂಡರೂ ದೈವಾನುಗ್ರಹದಿಂದ ವಿಶೇಷ ಭೀತಿಗೆ ಕಾರಣವಾಗದು.

Advertisement

ಸಿಂಹ: ಪುರೋಹಿತ, ಅರ್ಚಕ, ದೇವತಾ, ವೈದಿಕ ವೃತ್ತಿ ಯವರಿಗೆ ವಿಶೇಷ ಆದಾಯ ತಂದುಕೊಡಲಿದೆ. ಹಲವು ಅಡೆತಡೆ ಆತಂಕಗಳು ಎದುರಾಗಲಿದೆ. ಬಿಡುವಿಲ್ಲದ ಕಾರ್ಯ ಒತ್ತಡದಿಂದ ಆರೋಗ್ಯವು ಹಾನಿಯಾದೀತು. ಸಾಂಸಾರಿಕವಾಗಿ ಸುಖೀಗಳು.

ಕನ್ಯಾ: ಸಾಂಸಾರಿಕ ಸಮಸ್ಯೆಗಳು ಆಗಾಗ ಕಂಡು ಬಂದು ತಲೆಕೆಡಿಸಲಿದೆ. ನೂತನ ವೃತ್ತಿ, ಉದ್ಯೋಗ ಲಾಭವಾಗಲಿದೆ. ಬಂಡವಾಳದ ವೈವಾಹಿಟಿನಲ್ಲಿ ಪಾಲುಗಾರನಿಂದ ಮೋಸಕ್ಕೆಡೆಯಿದೆ . ಜಾಗ್ರತೆ ಮಾಡಿರಿ. ದೈಹಿಕವಾಗಿ ಆರೋಗ್ಯದ ಕೊರತೆ ಕಾಣಿಸಲಿದೆ.

ತುಲಾ:ವ್ಯಾಪಾರ, ವ್ಯವಹಾರದಲ್ಲಿ ಸಾಲ ವಾಪಾಸಾತಿಯಿಂದ ಸಮಾಧಾನ ತಂದೀತು. ಸರಕಾರೀ ಕೆಲಸ ಕಾರ್ಯ ಗಳು ಸುಗಮವಾಗಿ ನಡೆಯಲಿದೆ. ಧನದ ಚಿಂತೆಗೆ ಅವಕಾಶವಿಲ್ಲ. ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಂಡಾವು.

ವೃಶ್ಚಿಕ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆಯು ಸಮಾಧಾನ ತಂದೀತು. ಆರ್ಥಿಕವಾಗಿ ನಾನಾ ರೀತಿಯ ವಿನಿಯೋಗಕ್ಕಾಗಿ ಹಣ ಖರ್ಚಾಗಲಿದೆಯಾದರೂ ಧನಾಗಮನವು ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗಲಿದೆ.

ಧನು: ಗೃಹದಲ್ಲಿ ವಿಲಾಸೀ ವಸ್ತುಗಳ ಆಗಮನವಿದೆ. ಹಿರಿಯರ ವಿರೋಧದಿಂದ ಬಾಡಿದ್ದ ಪ್ರೇಮಾಂಕುರ ಪುನಃ ಹ ಚಿಗುರಲಿದೆ. ವೈದ್ಯಕೀಯ ವೃತ್ತಿಯವರಿಗೆ ಹೆಚ್ಚಿನ ಸಂಪತ್ತು ಹರಿದು ಬರಲಿದೆ. ದೇವತಾಕಾರ್ಯ ಶುಭಕಾರ್ಯಗಳಿಗಿದು ಸಕಾಲ.

ಮಕರ: ಕಾರ್ಯರಂಗದಲ್ಲಿ ಪ್ರತಿಷ್ಠಿತರ ಸಹಯೋಗದಿಂದ ಪ್ರಗತಿಯಿದೆ. ನೌಕರ ವರ್ಗಕ್ಕೆ ಸಮಾಧಾನದಿಂದ ಮುಂದುವರಿಯುವಂತಾದೀತು. ಆದರೂ ಪ್ರಭಾವೀ ವ್ಯಕ್ತಿಗಳ ಹಸ್ತಕ್ಷೇಪದ ಬಗ್ಗೆ ಜಾಗ್ರತೆ ವಹಿಸಿರಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ.

ಕುಂಭ: ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ. ರಾಜಕೀಯ ವಲಯದ ಕಾರ್ಯಕರ್ತರಿಗೆ ಮುನ್ನಡೆಯುವ ಅವಕಾಶಗಳು ಒದಗಿ ಬರುತ್ತವೆ. ಸಾಂಸಾರಿಕವಾಗಿ ಆಗಾಗ ಸದಸ್ಯರ ಆರೋಗ್ಯದ ಚಿಂತೆ ತಪ್ಪಿದಲ್ಲ .

ಮೀನ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ತೋರಿಬಂದು ಸ್ವಾಭಿಮಾನದ ಪ್ರಶ್ನೆಯಾಗಲಿದೆ. ಅಲೆದಾಟಗಳು ಅಧಿಕವಾಗಿ ದೇಹಾಯಾಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಆಪ್ತರ ಸಲಹೆಗಳಿಗೆ ಗಮನ ನೀಡಿರಿ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next