Advertisement

ನಿಮ್ಮ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ.

07:46 AM Mar 15, 2021 | Team Udayavani |

15-03-2021

Advertisement

ಮೇಷ:ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಶುಭ ಸೂಚನೆ ಸಿಗಲಿದೆ. ದೊರಕಿದ ಉದ್ಯೋಗಕ್ಕೆ ಒಗ್ಗಿ ಕೊಳ್ಳಿರಿ . ಅವಿವಾಹಿತರ ವಿವಾಹ ಪ್ರಸ್ತಾಪಗಳು ಮುಂದುವರಿಯಲಿದೆ. ಹೊಂದಿಕೊಂಡು ಹೋದರೆ ಉತ್ತಮ

ವೃಷಭ: ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆ ಸಲಹೆ ಸೂಚನೆಗಳಿಗೆ ಭಂಗ ಬಂದೀತು. ವೈವಾಹಿಕ ಭಾಗ್ಯ ಯೋಗ್ಯ ವಯಸ್ಕರಿಗೆ ಮಾತ್ರ ಕೂಡಿ ಬಂದೀತು. ದಾಂಪತ್ಯದಲ್ಲಿ ಕೆಲವೊಂದು ಬದಲಾವಣೆಗೆ ಸಿದ್ಧರಾಗಬೇಕಾದೀತು.

ಮಿಥುನ: ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿಯು ಏರುಪೇರಾಗುತ್ತಲೇ ಮುಂದುವರಿಯುವುದು. ಇಂತಹ ಪರಿಸ್ಥಿತಿಯಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸುವುದು ನಿಮಗೆ ಅಗತ್ಯವಿದೆ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಕರ್ಕ: ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಗಾಗ ವ್ಯಾಕುಲ ಹಾಗೂ ಉದ್ವೇಗದಿಂದ ಕ್ಷುಲ್ಲಕ ವಿಚಾರಗಳು ತೋರಿ ಬಂದು ಅಸಮಾಧಾನ ಹೊಂದುವಿರಿ. ನೂತನ ಕಾರ್ಯಾರಂಭ, ವ್ಯಾಪಾರವ್ಯವಹಾರಗಳ ಚಿಂತನೆ ಕಾರ್ಯಗತವಾಗಲಿದೆ.

Advertisement

ಸಿಂಹ: ಸಾಂಸಾರಿಕವಾಗಿ ಗೃಹಿಣಿಯ ಸಹಕಾರ ಸುಪ್ರಸನ್ನತೆ ಹಾಗೂ ಸುಖ- ಶಾಂತಿ ಅನುಭವಕ್ಕೆ ಬರಲಿದೆ. ವಿದ್ಯಾರ್ಥಿ ಗಳ ಮನೋಕಾಮನೆಗಳು ಪೂರ್ಣಗೊಳ್ಳುವುದು. ಆರ್ಥಿಕವಾಗಿ ಎಷ್ಟೇ ಖರ್ಚುವೆಚ್ಚಗಳಿದ್ದರೂ ಸಂಭಾಳಿಸಿಕೊಂಡು ಹೋಗಿರಿ.

ಕನ್ಯಾ: ಧನಾಗಮನಕ್ಕೆ ವಿಪುಲ ಅವಕಾಶಗಳಿದ್ದರೂ ನಿಮ್ಮ ಕಠಿಣ ಪ್ರಯತ್ನಬಲ ಆತ್ಮ ವಿಶ್ವಾಸ ಕೂಡ ಅಷ್ಟೇ ಅಗತ್ಯವಿರುತ್ತದೆ. ಗೃಹದಲ್ಲಿ ಮಂಗಲ ಕಾರ್ಯ ನಡೆದು ಸಂತಸವಾಗಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ.

ತುಲಾ: ಮಾತಿಗಿಂತ ಕಾರ್ಯವು ಲೇಸೆನಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಯೋಗದಿಂದ ಮುಂದುವರಿಯಿರಿ. ಹಿತಶತ್ರುಗಳ ಸಮಯ ಸಾಧಕತನ ಆಗಾಗ ಘಾಸಿಗೊಳಿಸೀತು. ತಾಳ್ಮೆ, ಸಹನೆಯಿಂದ ಕಾರ್ಯಸಾಧನೆ.

ವೃಶ್ಚಿಕ: ಆಗಾಗ ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸುವಂತಾಗುತ್ತದೆ. ಋಣಬಾಧೆ ಕಾಡಲಿದೆ. ಕೆಲವೊಂದು ಸಮಸ್ಯೆಗಳು ಬಹಿರಂಗಗೊಂಡು ರಾದ್ದಾಂತವಾದೀತು. ಪಿತ್ತ, ವಾಯು ಪ್ರಕೋಪದಿಂದ ಅನಾರೋಗ್ಯವು ತೋರಿಬರಲಿದೆ.

ಧನು: ರಾಜಕೀಯ ವರ್ಗದವರಿಗೆ ಉನ್ನತ ಸ್ಥಾನ ಗಿಟ್ಟಿತು. ಶತ್ರುಗಳು ಇದ್ದಕ್ಕಿದ್ದಂತೆ ನಿಮ್ಮ ಹೆಚ್ಚುತ್ತಿರುವ ಪ್ರಭಾವದಿಂದಾಗಿ ತಣ್ಣಗಾಗುವರು. ವ್ಯಾಪಾರಿ ವರ್ಗದವರಿಗೆ ಚೇತರಿಕೆಯ ದಿನಗಳು. ಸ್ವಂತ ದುಡಿಮೆಯವರಿಗೆ ಎಚ್ಚರ ಅಗತ್ಯ.

ಮಕರ: ಅನಿರೀಕ್ಷಿತ ಕಾರ್ಯಸಾಧನೆ ನಿಮಗೇ ಅಚ್ಚರಿ ತಂದೀತು. ಅವಿವಾಹಿತರ ವೈವಾಹಿಕ ಸಂಘಟನೆಗೆ ಪೂರಕವಾದ ಪ್ರಚೋದನೆ ಲಭಿಸೀತು. ಆಕಸ್ಮಿಕ ಧನಾನುಕೂಲವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ. ಚಿಂತೆ ಅನಾವಶ್ಯಕ

ಕುಂಭ: ಎಲ್ಲಾ ಕಾರ್ಯಗಳಲ್ಲೂ ಅಡೆತಡೆಗಳು ಕಂಡು ಬಂದಾವು. ಪ್ರಯತ್ನಪಟ್ಟ ಕೆಲಸ ಕಾರ್ಯದಲ್ಲಿ ಜಯವಿದೆ. ಕೊಟ್ಟ ಸಾಲ ಮರಳುವಿಕೆ ಇತ್ಯಾದಿಗಳು ವೃತ್ತಿರಂಗದ ಮಜಲನ್ನು ಬದಲಿಸಲಿದೆ. ನಿರುದ್ಯೋಗಿಗಳಿಗೆ ಪ್ರಯತ್ನ ಬೇಕು.

ಮೀನ: ನಿಮ್ಮ ಎಲ್ಲಾ ಕಾರ್ಯದಲ್ಲಿ ಅಡೆತಡೆಗಳು ಕಂಡು ಬಂದರೂ ಬೇಸರಪಡದಿರಿ. ಕಾರ್ಯಜಯವಿದೆ. ಸದಾಕಾಲ ಕಾರ್ಯ ಪ್ರವೃತ್ತರಾಗಿ ದುಡಿಯುತ್ತಿರುವ ನಿಮಗೆ ಉತ್ತಮ ಫ‌ಲಗಳು ಗೋಚರಕ್ಕೆ ಬರುತ್ತವೆ. ಆತ್ಮ ವಿಶ್ವಾಸ ಅಗತ್ಯ.

ಎನ್.ಎಸ್,ಭಟ್

Advertisement

Udayavani is now on Telegram. Click here to join our channel and stay updated with the latest news.

Next