Advertisement

ಈ ರಾಶಿಯವರಿಗಿಂದು ಯಾವುದೇ ಕಾರಣಕ್ಕೂ ಇತರರಿಗೆ ಬುದ್ಧಿ ಹೇಳಲು ಹೋಗದಿರಿ!

08:16 AM Mar 06, 2021 | Team Udayavani |

06-03-2021

Advertisement

ಮೇಷ: ಏಕಾಂತದಲ್ಲಿ ಕುಳಿತು ಏಕಾಂಗಿಯಾಗಿ ಯೋಚಿಸುವಾಗ ನಿಮಗೆ ನಿಮ್ಮ ಮೌಲ್ಯದ ಅರಿವಾಗ ಲಿದೆ. ಮುಖ್ಯವಾಗಿ ಮನೆಯಲ್ಲಿ ಪತ್ನಿಯಿಂದ ಕಿರಿಕಿರಿ ಕಂಡುಬರಲಿದೆ. ಮನಸ್ಸು ಕೆಟ್ಟು ಹೋದೀತು. ಅತೀ ಚಿಂತೆ ಒಳ್ಳೆಯದಲ್ಲ.

ವೃಷಭ: ಹೃದಯದ ಭಾವವೇ ಆದ್ಯತೆ ಪಡೆಯುತ್ತದೆ. ಆಪ್ತರೊಬ್ಬರ ಕುರಿತಂತೆ ಯೋಚಿಸಿ ಅತೀ ಭಾವುಕರಾಗಿ ವರ್ತಿಸುವಿರಿ. ಇದರ ಅವಶ್ಯಕತೆ ಇವರಿಗೆ ಇರದು. ನಿಮ್ಮ ಯೋಚನೆಗಳು ನಿಮಗೆ ಸೀಮಿತವಾಗಿದ್ದರೆ ಉತ್ತಮ.

ಮಿಥುನ: ಸುಗಮ ದಿನ ಇಂದು. ಸಣ್ಣ ಪ್ರಮಾಣದ ಪ್ರಯಾಣ ಕೂಡಿಬರಲಿದೆ. ಸಂತೋಷದ ವಾತಾವರಣವಿರುತ್ತದೆ. ಇತರರೊಂದಿಗೆ ಉತ್ತಮ ಸಂವಹನ ಸಾಧಿಸುವುದರಲ್ಲಿ ವಿಫ‌ಲರಾಗುವಿರಿ. ಆರೋಗ್ಯ ಸಮಸ್ಯೆಯು ಕಾಡಲಿದೆ.

ಕರ್ಕ: ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ಒದಗಬಹುದು. ಬದಲಾವಣೆಗೆ ಹೊಂದಿಕೊಳ್ಳಲು ಕಲಿಯಿರಿ. ಪ್ರೇಮಿಗಳ ಪಾಲಿಗೆ ಮಹತ್ತರ ಬೆಳವಣಿಗೆ ಕಂಡುಬರಲಿದೆ. ಯಾರ ಮಾತಿಗೂ ಹೆಚ್ಚು ತಲೆ ಕೊಡದಿರಿ. ಕರ್ತವ್ಯ ಮುಖ್ಯ.

Advertisement

ಸಿಂಹ: ಅನಿರೀಕ್ಷಿತ ವರ್ತನೆಯ ಮೂಲಕ ಇತರರಲ್ಲಿ ಅಸಹನೆ ಮೂಡಿಸುವಿರಿ. ಯಾರೊಂದಿಗೂ ಅತೀ ಸಲುಗೆ ಬೇಡ. ಶಾಂತಿ ಕಾಯ್ದುಕೊಳ್ಳಿರಿ. ಇತರರೊಂದಿಗೆ ಸ್ನೇಹಪೂರ್ವಕವಾಗಿ ಬೆರೆಯಲು ಕಲಿಯಿರಿ. ನಿಷ್ಠೆ ಇರಲಿ.

ಕನ್ಯಾ: ಬಿಡುವಿಲ್ಲದ ದಿನವಾಗಿದೆ. ಆರ್ಥಿಕ ಸ್ಥಿತಿಯು ಏರುಪೇರಾಗಲಿದೆ. ಬದುಕಿನ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಿರಿ. ಆರ್ಥಿಕ ಪರಿಸ್ಥಿತಿಯು ಸಂಕೀರ್ಣವಾಗಬಹುದು. ಕೌಟುಂಬಿಕವಾಗಿ ಸೌಹಾರ್ದ ಕೆಡಬಹುದು.

ತುಲಾ: ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕಾನೂನಿನ ಚೌಕಟ್ಟು ನಿಮ್ಮನ್ನು ತೊಡಕಿಗೆ ಸಿಲುಕಿಸಬಹುದು. ಅಸಹನೆಯ ವರ್ತನೆಯು ನಿಮ್ಮಿಂದ ಹೊರಹೊಮ್ಮಿತು ಜಾಗ್ರತೆ. ಗೃಹ ನಿವೇಶನ ಖರೀದಿ ಇದೆ.

ವೃಶ್ಚಿಕ: ಪ್ರಮುಖ ವಿಷಯಗಳನ್ನು ಇತ್ಯರ್ಥ ಪಡಿಸಲು ಸೂಕ್ತದಿನವಲ್ಲ . ಆರ್ಥಿಕ ಸಂಕಷ್ಟ ತೋರಿಬರಬಹುದು.ಖರ್ಚುವೆಚ್ಚದಲ್ಲಿ ಹೆಚ್ಚಳ ಕಂಡುಬರಲಿದೆ. ಸಂಬಂಧಗಳು ಗಟ್ಟಿಯಾಗಿ ಮನಸ್ಸು ಪ್ರಪುಲ್ಲವಾಗಲಿದೆ.

ಧನು: ಕೌಟುಂಬಿಕವಾಗಿ ಸ್ವಲ್ಪ ಏರುಪೇರುಗಳು ಕಂಡು ಬಂದಾವು. ಅದನ್ನು ಜಾಣತನದಿಂದ ಸುಧಾರಿಸುವುದು ಅಗತ್ಯವಿದೆ. ಪತ್ನಿಯ ಮನಸ್ಸು ಅರಿತು ಮುನ್ನಡೆಯಿರಿ. ಸುಖ, ಶಾಂತಿ, ಸಹನೆ, ತಾಳ್ಮೆ ಸಂಸಾರದಲ್ಲಿ ಅಗತ್ಯ.

ಮಕರ: ಯಾವುದೇ ಕಾರಣಕ್ಕೂ ಸಹನೆ ಕಳೆದು ಕೊಳ್ಳದಿರಿ. ಇತರರಿಗೆ ಬುದ್ಧಿ ಹೇಳಲು ಹೋಗದಿರಿ. ನಿಮ್ಮ ಮೇಲೆ ಅಪವಾದ ಹೊರಿಸಿಯಾರು. ಗೆಳೆಯರೊಂದಿಗೆ ಅತೀ ಸಲುಗೆ ಬೇಡ. ಹಾಗೆಯೇ ಅವರನ್ನು ಕಡೆಗಣಿಸದಿರಿ.

ಕುಂಭ: ವೃತ್ತಿಪರರಿಗೆ ಯಶಸ್ಸು ಕಂಡುಬರಲಿದೆ. ಕೌಟುಂಬಿಕವಾಗಿ ಅಸಹನೆ ಮೂಡಿ ಬರಲಿದೆ. ಗೊಂದಲದ ಪರಿಸ್ಥಿತಿ ಕಂಡುಬಂದೀತು. ಸಂಬಂಧದಲ್ಲಿ ಸುಧಾರಣೆ ಕಂಡುಬರಲಿದೆ. ಪರಸ್ಪರರೊಳಗೆ ಸೌಹಾರ್ದವಿದೆ.

ಮೀನ: ನೀವು ನಂಬಿದ ವ್ಯಕ್ತಿಯೊಬ್ಬರು ನಿಜ ಬಣ್ಣ ತೋರಿಸಲಿದ್ದಾರೆ. ಅವರ ಕುಟಿಲತೆ ಅರಿವಿಗೆ ಬರಲಿದೆ. ಯಾವ ವಿಷಯಕ್ಕೂ ಸಂಘರ್ಷಕ್ಕೆ ಇಳಿಯದಿರಿ. ಗೊಂದಲದ ಸ್ಥಿತಿಗೆ ಒಳಗಾಗುವಿರಿ. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಿರಿ.

ಎನ್ ಎಸ್ ಭಟ್

Advertisement

Udayavani is now on Telegram. Click here to join our channel and stay updated with the latest news.

Next