Advertisement

Daily Horoscope: ಹಲವು ಕಾಲದಿಂದ ಕಾಡುತ್ತಿರುವ ಜಟಿಲ ಸಮಸ್ಯೆಗೆ ಪರಿಹಾರ

07:30 AM Jan 27, 2024 | Team Udayavani |

ಮೇಷ: ಸ್ಥಿರವಾದ ಆರೋಗ್ಯ. ಉದ್ಯೋಗಸ್ಥರ ಕೆಲವು ನಿರೀಕ್ಷೆಗಳು ಈಡೇರುವ ಸೂಚನೆ. ಉದ್ಯಮಿ ಗಳಿಂದ ಇನ್ನಷ್ಟು ಅವಕಾಶಗಳಿಗಾಗಿ ಹುಡುಕಾಟ. ಹಲವು ಕಾಲದಿಂದ ಕಾಡುತ್ತಿರುವ ಜಟಿಲ ಸಮಸ್ಯೆಗೆ ಪರಿಹಾರ.

Advertisement

ವೃಷಭ: ಅರಸಿಕೊಂಡಿರುವ ವೃತ್ತಿಯ ಭವಿಷ್ಯದ ಕುರಿತು ಚಿಂತೆ ಬೇಡ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿ ಗಳಿಂದ ಸಹಜ ಸ್ಪರ್ಧೆ. ಉತ್ಪನ್ನಗಳ ಗುಣಮಟ್ಟದ ಕಡೆಗೆ ಗಮನವಿರಲಿ. ಗುರುಸಮಾನರ ಅಕಸ್ಮಾತ್‌ ಭೇಟಿ.

ಮಿಥುನ: ಒಳಗಿನಿಂದಲೇ ಕೊರೆಯುವ ಚಿಂತೆಯನ್ನು ದೂರವಿಡಿ. ಉದ್ಯೋಗದಲ್ಲಿ ಪ್ರತಿಭೆಗೆ ಗೌರವ. ದೇವತಾ ರಾಧನೆಯ ಮೂಲಕ ವಿಘ್ನ ನಿವಾರಣೆ. ಶುಭ ಕಾರ್ಯ ನಡೆಸುವ ಬಗ್ಗೆ ಚಿಂತನೆ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಕರ್ಕಾಟಕ: ನಿಮ್ಮ ಕಾರ್ಯ ದಕ್ಷತೆ ಪ್ರಕಟನೆಗೆ ಖನ್ನತೆ ಅಡ್ಡಿಯಾಗದಿರಲಿ. ಉದ್ಯೋ ಗದಲ್ಲಿ ತೃಪ್ತಿಯ ದಿನ. ವ್ಯವಹಾರ ಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸಿಗಾಗಿ ಸಮಾಜದಲ್ಲಿ ಗೌರವ. ವೈವಾಹಿಕ ಜೀವನದಲ್ಲಿ ಸಂತೃಪ್ತಿ.

ಸಿಂಹ: ಸಕಾಲದಲ್ಲಿ ಕ್ರಿಯೆಗೆ ಇಳಿಯುವ ಗುಣದಿಂದಾಗಿ ಮೇಲಿನವರ ಪ್ರಶಂಸೆಗೆ ಗುರಿಯಾಗುತ್ತೀರಿ. ಉದ್ಯಮದಲ್ಲಿ ಹೊಸ ಅವಕಾಶಗಳ ಅನ್ವೇಷಣೆ. ಗೆಳೆಯರಿಂದ ಸಹಕಾರ. ಅನಿರೀಕ್ಷಿತ ಧನಾಗಮ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ.

ಕನ್ಯಾ: ಉದ್ಯೋಗ ನಿರ್ವ ಹಣೆಯಲ್ಲಿ ಉತ್ಸಾಹ. ಆವಶ್ಯಕತೆಗೆ ಸರಿಯಾಗಿ ಧನಾಗಮ. ಸಣ್ಣ ಉದ್ಯಮ ಆರಂಭಿಸುವ ಯೋಚನೆ. ದೂರದಿಂದ ಶುಭವಾರ್ತೆ. ನೂತನ ವಾಹನ ಖರೀದಿ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಲಾಭ.

Advertisement

ತುಲಾ: ನಿಮ್ಮ ರಾಶಿಗೆ ಸಹಜವಾದ ಚಿತ್ತ ಚಾಂಚ ಲ್ಯಕ್ಕೆ ಎಡೆಗೊಡದಿರಿ. ಉದ್ಯೋಗ ಸ್ಥಾನದಲ್ಲಿ ಹೊಸ ಬಗೆಯ ಅವಕಾಶಗಳು. ಪಾಲುದಾರಿಕೆ ವ್ಯವಹಾರಗಳಲ್ಲಿ ಆದಾಯ ವೃದ್ಧಿ. ದಾಂಪತ್ಯ ಜೀವನದಲ್ಲಿ ಸೌಖ್ಯ.

ವೃಶ್ಚಿಕ: ಎಂದೋ ಮಾಡಿದ ಸತ್ಕಾರ್ಯಗಳಿಗೆ ಸೂಕ್ತ ಪ್ರತಿಫಲ ಲಭಿಸುವ ಸಮಯ. ಉದ್ಯೋಗದಲ್ಲಿ ಪದೋನ್ನತಿ. ಉದ್ಯಮ ಕ್ಷೇತ್ರದಲ್ಲಿ ಜಯಭೇರಿ. ಹಿರಿಯರಿಗೆ ಉತ್ತಮ ದೇಹಾರೋಗ್ಯ. ತಾಳ್ಮೆಯಿಂದ ಕಾರ್ಯದಲ್ಲಿ ಯಶಸ್ಸು.

ಧನು: ಸಮತೋಲನ ಕಾಯ್ದುಕೊಂಡ ಮನಸ್ಸಿನ ಮಾರ್ಗ ದರ್ಶನದಂತೆ ನಡೆದು ಕೊಂಡರೆ ಸಕಲ ಕಾರ್ಯಸಿದ್ಧಿ. ವಸ್ತ್ರೋದ್ಯಮಿಗಳಿಗೆ ಮತ್ತು ಸ್ವರ್ಣೋದ್ಯಮಿಗಳಿಗೆ ಅಮಿತ ಲಾಭ. ಉದ್ಯೋಗ ಸ್ಥರಿಗೆ ಮಂದಗತಿಯಲ್ಲಿ ಮುನ್ನಡೆ.

ಮಕರ: ಉದ್ಯೋಗ ಸ್ಥಾನದಲ್ಲಿ ತಾಳ್ಮೆ ಕಳೆದುಕೊಳ್ಳದಿರಿ. ಅಭಿಪ್ರಾಯ ವ್ಯಕ್ತಪಡಿಸಲು ಆತುರ ಬೇಡ. ದೈನಂದಿನ ವ್ಯವಹಾರದಲ್ಲಿ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ ಲಾಭ. ಧ್ಯಾನ, ದೇವತಾರ್ಚನೆಯಲ್ಲಿ ಆಸಕ್ತಿ.

ಕುಂಭ: ಉದ್ಯೋಗಸ್ಥರಿಗೆ ಹುದ್ದೆಯಲ್ಲಿ ಪದೋನ್ನತಿ ಸಂಭವ. ಮುದ್ರಣ ಸಾಮಗ್ರಿ, ಸ್ಟೇಶನರಿ, ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ಗೃಹಿಣಿಯರಿಗೆ ದ್ರವ್ಯಲಾಭ. ಉನ್ನತ ವ್ಯಾಸಂಗಾಸಕ್ತರಿಗೆ ಅನುಕೂಲದ ಸಮಯ.

ಮೀನ: ಉದ್ಯೋಗದ ಸಂಬಂಧ ದೂರದ ಸ್ಥಳಕ್ಕೆ ಭೇಟಿ ಸಂಭವ. ಇಲಾಖೆ ಗಳಿಂದ ಉತ್ತಮ ಸ್ಪಂದನ.ಹೊಸ ಕಾರ್ಯಾರಂಭಕ್ಕೆ ತಾತ್ಕಾಲಿಕ ವಿಘ್ನ. ಹಳೆಯ ಆಸ್ತಿ ಸಂಬಂಧ ವಿವಾದ ಸೌಹಾರ್ದ ಪೂರ್ಣವಾಗಿ ಪರಿಹಾರ.

Advertisement

Udayavani is now on Telegram. Click here to join our channel and stay updated with the latest news.

Next