Advertisement

ಬುಧವಾರದ ರಾಶಿಫಲ: ಈ ರಾಶಿ ಅವರಿಗಿಂದು ಪಾಲುದಾರಿಕಾ ವ್ಯವಹಾರಗಳಲ್ಲಿ  ಅನಿರೀಕ್ಷಿತ ಅಭಿವೃದ್ಧಿ

07:20 AM Mar 15, 2023 | Suhan S |

ಮೇಷ:  ಆರೋಗ್ಯ ಗಮನಿಸಿ. ಮಾಡುವಂತಹ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಿನ ಆದ್ಯತೆ ನೀಡುವುದರಿಂದ ನಿರೀಕ್ಷಿತ ಸಫ‌ಲತೆ. ಧನಾರ್ಜನೆ ಉತ್ತಮ. ಏನೋ ಒಂದು ವಿಧದ ಅತೃಪ್ತಿ ತೋರೀತು. ಸಂದರ್ಭಕ್ಕೆ ಸರಿಯಾಗಿ  ಸಹಾಯ ಒದಗಿಬರುವುದು.

Advertisement

ವೃಷಭ: ಪಾಲುದಾರಿಕಾ ವ್ಯವಹಾರಗಳಲ್ಲಿ  ಅನಿರೀಕ್ಷಿತ ಅಭಿವೃದ್ಧಿ. ಮಾಡುವ ಉದ್ಯೋಗದಲ್ಲಿ  ಹೆಚ್ಚಿನ ಗೌರವ ಮನ್ನಣೆ ಪ್ರಾಪ್ತಿ. ಹಣಕಾಸಿನ ವಿಚಾರದಲ್ಲಿ  ಸರಿಯಾದ ದಾಖಲಾತಿಗೆ ಆದ್ಯತೆ ನೀಡಿ.  ಆರೋಗ್ಯ ವೃದ್ಧಿ.

ಮಿಥುನ:  ನಿರೀಕ್ಷಿತ ಸ್ಥಾನ ಸುಖಕ್ಕಾಗಿ ಹೆಚ್ಚಿದ ಶ್ರಮ. ಉದ್ಯೋಗ ವ್ಯವಹಾರಗಳಲ್ಲಿ  ಜವಾಬ್ದಾರಿ. ಸಹೋದ್ಯೋಗಿಗಳಿಂದ ಸಹಕಾರ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಪುರಸ್ಕಾರದ ಅವಕಾಶ. ದಾಂಪತ್ಯ ಸುಖ ವೃದ್ಧಿ.

ಕರ್ಕ:  ಆರೋಗ್ಯದಲ್ಲಿ  ಸುಧಾರಣೆ. ಸಣ್ಣ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ  ಹೊಂದಾಣಿಕೆ ಅಗತ್ಯ. ಭೂಮಿ ಆಸ್ತಿ ಇತ್ಯಾದಿ ವಿಚಾರಗಳಲ್ಲಿ  ತಾಳ್ಮೆಯ ನಿರ್ಣಯ ಫ‌ಲಿಸೀತು. ಮಿತ್ರರಲ್ಲಿ  ಗೊಂದಲಕ್ಕೆ ಅವಕಾಶ ನೀಡದಿರಿ.

ಸಿಂಹ: ಆರೋಗ್ಯ ವಿಚಾರದಲ್ಲಿ  ಉದಾಸೀನತೆ ತೋರದಿರಿ. ದೀರ್ಘ‌ ಸಂಚಾರಗಳಲ್ಲಿ  ವಿಳಂಬ ಎದುರಾದೀತು. ದೇವತಾ ಪ್ರಾರ್ಥನೆಯಿಂದ ವಿಘ್ನ ಪರಿಹಾರ. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸುಖ ಸಂಭವ. ಧನಾರ್ಜನೆಗೆ ಸರಿಸಮವಾದ ಖರ್ಚು.

Advertisement

ಕನ್ಯಾ: ಅಧಿಕ ದೈಹಿಕ ಶ್ರಮದಿಂದ ನಿರೀಕ್ಷಿತ ಸ್ಥಾನ ಪ್ರಾಪ್ತಿ. ಉತ್ತಮ ಧನಸಂಪಾದನೆ. ಪರರ ಸಹಾಯ ನಿರೀಕ್ಷೆ ಮಾಡದೆ ಸ್ವಂತ ನಿರ್ಣಯಗಳಲ್ಲಿ  ಕಾರ್ಯ ತತ್ಪರತೆ. ಭೂಮಿ, ವಾಹನ, ಆಸ್ತಿ ಇತ್ಯಾದಿ ವಿಚಾರಗಳಲ್ಲಿ  ಮುನ್ನಡೆ. ದಾಂಪತ್ಯ ಸುಖ ತೃಪ್ತಿಕರ.

ತುಲಾ: ಧಾರ್ಮಿಕ ಕಾರ್ಯಗಳಲ್ಲಿ  ನೇತೃತ್ವ. ದೀರ್ಘ‌ ಪ್ರಯಾಣ. ಮಾನಸಿಕ ಒತ್ತಡದಿಂದ ಕೂಡಿದ ಜವಾಬ್ದಾರಿ. ಚತುರತೆಯಿಂದ ಮಾಡುವ ಕಾರ್ಯಗಳಲ್ಲಿ ಧನಸಂಪತ್ತು ವೃದ್ಧಿ.  ಗುರುಹಿರಿಯರಿಂದ ಸಂತೋಷ.  ಆಸ್ತಿ ವಿಚಾರಗಳಲ್ಲಿ  ಪ್ರಗತಿ.

ವೃಶ್ಚಿಕ: ದಂಪತಿಗಳಿಗೆ ಪರಸ್ಪರರಿಂದ ಲಾಭ.  ಸರಕಾರಿ ಕೆಲಸ ಕಾರ್ಯಗಳಲ್ಲಿ  ಪ್ರಗತಿ. ಜವಾಬ್ದಾರಿಯುತ ಕಾರ್ಯ ವೈಖರಿ. ಆಸ್ತಿ ವಿಚಾರಗಳಲ್ಲಿ  ಪ್ರಗತಿಯಿಂದ ಕೂಡಿದ ಬದಲಾವಣೆ. ಬಹು ಸಂಪತ್ತು ವೃದ್ಧಿ. ಕೈಗೊಂಡ ಕಾರ್ಯಗಳಲ್ಲಿ  ಯಶಸ್ಸು ಲಭಿಸಿದ ತೃಪ್ತಿ.

ಧನು: ಗೃಹೋಪಕರಣ ವಸ್ತುಗಳ ಸಂಗ್ರಹ. ಹೆಚ್ಚಿದ ಜನ ಸಂಪರ್ಕ. ಗಣ್ಯರ ಭೇಟಿ. ದೂರದ ಬಂಧುಮಿತ್ರರ ಸಹಕಾರ. ಅವಿವಾಹಿತರಿಗೆ ವಿವಾಹ ಯೋಗ. ಮನೆಯಲ್ಲಿ  ಸಂಭ್ರಮದ ವಾತಾವರಣ. ತಾಳ್ಮೆ ಸಹನೆಯಿಂದ ನಿರ್ವಹಿಸಿದ ಕಾರ್ಯದಿಂದ ಕೀರ್ತಿ.

ಮಕರ: ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಸರಕಾರೀ ಕೆಲಸಗಳಲ್ಲಿ  ಪ್ರಗತಿ. ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿ. ಸತ್ಕರ್ಮಕ್ಕೆ ಧನವ್ಯಯ.  ಸಂಸಾರದಲ್ಲಿ  ಚರ್ಚೆಗೆ ಅವಕಾಶ ನೀಡದಿರಿ. ಗುರುಹಿರಿಯರಲ್ಲಿ  ತಾಳ್ಮೆ ಸಮಾಧಾನದಿಂದ ವರ್ತಿಸಿ.

ಕುಂಭ: ಆಸ್ತಿ ವಿಚಾರಗಳಲ್ಲಿ  ಪ್ರಗತಿ.ಗೃಹೋಪವಸ್ತುಗಳ ಸಂಗ್ರಹ. ಸಾಂಸಾರಿಕ ಸುಖ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ  ಬಂಧುಮಿತ್ರರ ಸಹಾಯ ಸಹಕಾರದಿಂದ ಅಭಿವೃದ್ಧಿ. ಹೆಚ್ಚಿದ ವರಮಾನ. ವಿದ್ಯಾರ್ಥಿಗಳಿಗೆ  ಶ್ರಮವಹಿಸಿದರಿಂದ ಕೀರ್ತಿ ಗೌರವ ಲಭ್ಯ.

ಮೀನ:  ಆಭರಣಾದಿ ಖರೀದಿಗಳು. ಮನೆಗೆ ಸಂಬಂಧಿಸಿದ ವಸ್ತು ಸಂಗ್ರಹ. ಗೃಹದಲ್ಲಿ  ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ  ಸಂತೋಷ ವೃದ್ಧಿ. ನಿರೀಕ್ಷೆಗೂ ಮೀರಿದ ಧನಾರ್ಜನೆ. ದಾನ ಧರ್ಮದಲ್ಲಿ  ಆಸಕ್ತಿ. ವಿದ್ಯಾರ್ಥಿಗಳಿಗೆ ಸರ್ವ ವಿಧದ ಸೌಲಭ್ಯ ಪ್ರಾಪ್ತಿ. ಅವಿವಾಹಿತರಿಗೆ ವಿವಾಹ ಯೋಗ.

Advertisement

Udayavani is now on Telegram. Click here to join our channel and stay updated with the latest news.

Next