Advertisement

ಮೊಸರು ಕುಡಿಕೆ ಆಡುವವರಿಗೆ ಕ್ರೀಡಾ ಮೀಸಲಾತಿ!

09:10 PM Aug 18, 2022 | Team Udayavani |

ಮುಂಬೈ: ಮಹಾರಾಷ್ಟ್ರದ ಪ್ರಸಿದ್ಧ ಮೊಸರು ಕುಡಿಕೆ ಆಟವನ್ನು “ಸಾಹಸ ಕ್ರೀಡೆ’ ಎಂದು ಗುರುತಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಗುರುವಾರ ಘೋಷಿಸಿದ್ದಾರೆ.

Advertisement

ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ವಿಶೇಷವಾಗಿ ಆಡುವ ಈ ಆಟದಲ್ಲಿ ಪರಿಣತಿ ಪಡೆದವರು ಕ್ರೀಡಾ ಮೀಸಲಾತಿ ಅಡಿಯಲ್ಲಿ ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು ಎಂದೂ ತಿಳಿಸಿದ್ದಾರೆ.

ಮೊಸರು ಕುಡಿಕೆ ಆಡುವಾಗ ಆಟಗಾರರು ಕೆಳಕ್ಕೆ ಬಿದ್ದು, ಮರಣ ಹೊಂದಿದರೆ ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಂಭೀರವಾಗಿ ಗಾಯಗೊಂಡವರಿಗೆ 7 ಲಕ್ಷ ರೂ. ಹಾಗೂ ಮೂಳೆ ಮುರಿದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಅದಲ್ಲದೆ ಅವರ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next