Advertisement

ಜನರನ್ನು ಭಯಭೀತ ಮಾಡಲು ಬಿಜೆಪಿಯವರು ಹೊರಟಿದ್ದಾರೆ: ಡಿಕೆ ಸುರೇಶ್

01:40 PM May 17, 2022 | Team Udayavani |

ಬೆಂಗಳೂರು: ಆರ್ ಎಸ್ ಎಸ್ ಸಮಾಜವನ್ನು ಒಡೆಯಲು ಹೊರಟಿದೆ. ದೇಶ ಬಹುಭಾಷೆ ಮೇಲೆ ನಿಂತಿದೆ. ಅಶಾಂತಿ ಮೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಆಚಾರ ವಿಚಾರ ದಿನನಿತ್ಯದ ಸಂಗತಿಗಳಲ್ಲೂ ಜನರನ್ನು ಭಯಭೀತ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಹೇಳಿದರು.

Advertisement

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಮಾತ್ರವಲ್ಲ ಯುನಿವರ್ಸಿಟಿಗಳಲ್ಲಿ, ಜೆಇಇ ನೇಮಕಾತಿಯಲ್ಲೂ ಅಕ್ರಮವಾಗಿದೆ. ಹಗರಣಗಳ ಮುಚ್ಚಿ ಹಾಕುವುದಕ್ಕೆ ಸರ್ಕಾರ ಹೊರಟಿದೆ. ಯುವಕರ ಭವಿಷ್ಯ ಹಾಳು ಮಾಡುವ ಕೆಲಸ ಮಾಡ್ತಿದ್ದಾರೆ ಎಂದರು.

ಇದನ್ನೂ ಓದಿ:ಹೊರಟ್ಟಿ ಪಕ್ಷ ಸೇರ್ಪಡೆಗೆ ತಾಂತ್ರಿಕ ಅಡ್ಡಿ; ಹಂಗಾಮಿ ಸಭಾಪತಿ ನೇಮಕಕ್ಕೆ ಮುಂದಾದ ಬಿಜೆಪಿ

ಹಗರಣಗಳಲ್ಲಿ ಮುಖ್ಯಮಂತ್ರಿಗಳೇ ಇದರಲ್ಲಿ ಪಾಲುದಾರರು. ಸಿಎಂಗೆ ಯುವಕರ ರಕ್ಷಣೆ ಜವಾಬ್ದಾರಿ ಇರಬೇಕು. ನ್ಯಾಯಸಮ್ಮತ ತನಿಖೆ ಮಾಡಲಿ. ನಮ್ಮ ಕಾಲದಲ್ಲಿ ಅಕ್ರಮವಾಗಿದ್ದರೂ ತನಿಖೆ ಮಾಡಲಿ. ಆದರೆ ಸರ್ಕಾರ ತನಿಖೆಯನ್ನೇ ಮಾಡ್ತಿಲ್ಲ. ಒಎಂಆರ್ ಶೀಟ್ ಇಡುವ ಕೀ ಬಂಚ್ ಯಾರದ್ದೋ ಮನೆಯಲ್ಲಿ ಸಿಗುತ್ತದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳೇ ರಾಜೀನಾಮೆ ಕೊಡಬೇಕು. ಮಂತ್ರಿ ಮಂಡಲದ ಅನೇಕರು ಇದರಲ್ಲಿ ಪಾಲುದಾರರಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next