Advertisement

ಮೈಸೂರಿನಲ್ಲಿ ಸೋನಿಯಾ ಗಾಂಧಿ ಅವರನ್ನು ಸ್ವಾಗತಿಸಿದ ಡಿ.ಕೆ. ಶಿವಕುಮಾರ್

04:57 PM Oct 03, 2022 | Team Udayavani |

ಮೈಸೂರು : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಬರಮಾಡಿಕೊಂಡರು.

Advertisement

ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1 ಗಂಟೆಗೆ ಆಗಮಿಸಿದ ಸೋನಿಯಾ ಗಾಂಧಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.ಸಂಸದ ಡಿ.ಕೆ. ಸುರೇಶ್  ಇತರ ನಾಯಕರು ಹಾಜರಿದ್ದರು.

ಇದನ್ನೂ ಓದಿ : ಕ್ರಿಟಿಕಲ್ ಕೇರ್ ಯೂನಿಟ್ ನಲ್ಲಿ ಮುಲಾಯಂ: ತಜ್ಞರ ತಂಡದಿಂದ ಚಿಕಿತ್ಸೆ

ಕೊಡಗು ಭೇಟಿ ವಿಳಂಬ

ಹೆಲಿಕ್ಯಾಪ್ಟರ್ ಮೂಲಕ ಕೊಡಗಿಗೆ ತೆರಳಿ ಮಡಿಕೇರಿಯ ಕೂರ್ಗ್ ವೈಲ್ಡ್ ರೆಸಾರ್ಟ್‌ ನಲ್ಲಿ ಉಳಿದು ಕೊಳ್ಳಬೇಕಾಗಿತ್ತು. ಹವಾಮಾನ ವೈಪರೀತ್ಯದಿಂದಾಗಿ ಸೋನಿಯಾ ಗಾಂಧಿ ಅವರು ಕಬಿನಿ ಬಳಿಯಿರುವ ವಿಂಡ್‌ ಫ್ಲವರ್‌ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದಾರೆ.

Advertisement

ಹವಾಮಾನ ಅನುಕೂಲವಾದರೆ ಹೆಲಿಕ್ಯಾಪ್ಟರ್ ಮೂಲಕ ಮಡಿಕೇರಿಗೆ ತೆರಳಲಿದ್ದು, ಪಾಂಡವಪುರದಲ್ಲಿ ಇಂದು ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಅವರೂ ಅಲ್ಲಿನ ರೆಸಾರ್ಟ್ ಗೆ ಇಲ್ಲವಾದರೆ ವಿಂಡ್‌ ಫ್ಲವರ್‌ ರೆಸಾರ್ಟ್ ಗೆ ಬರಲಿದ್ದಾರೆ ಎಂದು ಮೂಲಗಳು ಹೇಳಿವೆ.

ನಾಳೆ ಮಂಗಳವಾರ ನವಮಿ ಮತ್ತು ಬುಧವಾರ ವಿಜಯದಶಮಿ ಹಬ್ಬದ ಕಾರಣಕ್ಕಾಗಿ ಭಾರತ್ ಜೋಡೋ ಯಾತ್ರೆಗೆ ಬಿಡುವು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next