ಬೆಂಗಳೂರು: ‘ನಮ್ಮ ನೀರು ನಮ್ಮ ಹಕ್ಕು’ ಪಾದಯಾತ್ರೆಯ ವೇಳೆ ನೂಕು ನುಗ್ಗಲು ಉಂಟಾಗಿ, ಕಾರ್ಯಕರ್ತರ ನೂಕಾಟ ತಪ್ಪಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹರಸಾಹಸ ಪಡೆಬೇಕಾಯಿತು.
ಪಾದಯಾತ್ರೆ ವೇಳೆ ಡಿ.ಕೆ ಶಿವಕುಮಾರ್ ಬಸವಳಿದರು. ಐದು ಕಿಮೀ ಪಾದಯಾತ್ರೆ ಸಾಗುತ್ತಿದ್ದಂತೆ ಸುಸ್ತಾದರು. ನಂತರ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ವಿಶ್ರಾಂತಿ ಪಡೆದರು. ಮನೆ ಮುಂದೆ ಕುಳಿತು, ಕಾರ್ಯಕರ್ತರು ತಂದುಕೊಟ್ಟ ಬೋಂಡ ಸವಿಯುತ್ತಾ ವಿಶ್ರಾಂತಿ ಪಡೆದರು.
ಇದನ್ನೂ ಓದಿ:ಕಾಂಗ್ರೆಸ್ ನವರು ನೀರಿನಲ್ಲಿ ಕಿವಿ ಹಿಡಿದು ಕೂತು ತಪ್ಪಾಯ್ತೆಂದು ಕ್ಷಮೆ ಕೇಳಬೇಕು: ಆರಗ
ಪಾದಯಾತ್ರೆ ವೇಳೆ ಆರೋಗ್ಯ ತಪಾಸಣೆಗೆ ಸಜ್ಜಾಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಡಿ.ಕೆ ಶಿವಕುಮಾರ್ ಅವರ ಬಿಪಿ, ಶುಗರ್ ಪರೀಕ್ಷೆಗೆ ಬಂದರೂ, ಈಗಲೇ ಬೇಡ, ಮುಂದೆ ಮಾಡಿಸೋಣ ಎಂದು ಡಿಕೆಶಿ ಮತ್ತೆ ಪಾದಯಾತ್ರೆ ಆರಂಭಿಸಿದರು.
ಸರ್ಕಾರಕ್ಕೆ ಸವಾಲ್: ಪಾದಯಾತ್ರೆ ಕೈಗೊಂಡ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸರ್ಕಾರದ ನಡೆಯನ್ನು ಖಂಡಿಸಿದ ಡಿ ಕೆ ಶಿವಕುಮಾರ್, 30 ಜನರ ಮೇಲೆ ದೂರು ದಾಖಲಿಸಲಾಗಿದೆ. ಯಾಕೆ ಕೇವಲ 30 ಜನರು, ಪಾದಯಾತ್ರೆಗೆ ಬಂದಿರುವ ಸಾವಿರಾರು ಜನರ ಮೇಲೆ ದೂರು ದಾಖಲಿಸಿ ನೋಡೋಣ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನರು ಬಂದಿದ್ದಾರೆ. ಎಷ್ಟು ಉದ್ದ ಪಾದಯಾತ್ರೆ ಸಾಗುತ್ತಿದೆ ಎಂದು ನೀವೇ ನೋಡಿದ್ದೀರಿ. ನಮ್ಮ ಹೋರಾಟ ನಡೆಯುತ್ತಿರುವುದು ನೀರಿಗಾಗಿ, ಸರ್ಕಾರ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.