Advertisement

ವಲ್ಲಭ್‌ ಭಾಯ್‌ ಫೋಟೋ: ಸಿದ್ದು- ಡಿಕೆಶಿ ಗುಸುಗುಸು

11:44 PM Nov 23, 2021 | Team Udayavani |

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಅ. 31ರಂದು ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಸರ್ದಾರ್‌ ವಲ್ಲಭ ಬಾಯ್‌ ಪಟೇಲ್‌ ಜನ್ಮದಿನ ಕಾರ್ಯಕ್ರಮದಲ್ಲಿ ವಲ್ಲಭ ಬಾಯ್‌ ಫೋಟೋ ಇಡುವ ವಿಚಾರದಲ್ಲಿ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವಿನ ಸಂಭಾಷಣೆ ವೈರಲ್‌ ಆಗಿದೆ.

Advertisement

ಸಿದ್ದರಾಮಯ್ಯ ಅವರು ವಲ್ಲಭಬಾಯ್‌ ಪಟೇಲ್‌ ಫೋಟೋ ಇಡುವಂತೆ ಶಿವಕುಮಾರ್‌ ಕಿವಿಯಲ್ಲಿ ಹೇಳುತ್ತಾರೆ. ಅಂಥ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ ಎಂದು ಡಿ.ಕೆ.ಶಿ. ಹೇಳುತ್ತಾರೆ.

ಆಗ ಸಿದ್ದರಾಮಯ್ಯ, ಬಿಜೆಪಿ ಇದರ ಲಾಭ ತೆಗೆದು ಕೊಂಡೀತು ಎಂದಾಗ ಶಿವ ಕುಮಾರ್‌ ಪೋಟೋ ಇಡಲು ಸೂಚಿಸು ತ್ತಾರೆ. ಈ ಸಂದ ರ್ಭದ ಆಡಿಯೋ ಹಾಗೂ ವೀಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ:ಬೆಂಗಳೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ: ಡಿಕೆಶಿ

ಇದನ್ನು ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಬಿಜೆಪಿ ಟ್ವೀಟ್‌ ಮೂಲಕ ಟೀಕಿಸಿ, ಸರ್ದಾರ್‌ ವಲ್ಲಭ ಬಾಯ್‌ ಬಗ್ಗೆ ಕಾಂಗ್ರೆಸ್ಸಿಗೆ ಗೌರವ ಇಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next