Advertisement

ಗ್ಯಾಸ್‌ ರಿಫೀಲ್ಲಿಂಗ್‌ ವೇಳೆ ಸಿಲಿಂಡರ್‌ ಸ್ಫೋಟ: ಯುವಕ ಸಾವು

09:54 PM Jul 24, 2022 | Team Udayavani |

ಬೆಂಗಳೂರು: ಗ್ಯಾಸ್‌ ರಿಫೀಲ್ಲಿಂಗ್‌ ವೇಳೆ ಸಿಲಿಂಡರ್‌ ಸ್ಫೋಟಗೊಂಡು ಯುವಕನೊಬ್ಬ ಮೃತಪಟ್ಟಿರುವ ಘಟನೆ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಇಸ್ಲಾಂಪುರ ನಿವಾಸಿ ಕದೀರ್‌ (25) ಮೃತ ಯುವಕ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಕದೀರ್‌, ಇಸ್ಲಾಂಪುರದ ಇಸ್ತಾಕ್‌ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಬುಧವಾರ ಮಧ್ಯಾಹ್ನ ತನ್ನ ಮನೆಯ 15 ಕೆ.ಜಿ. ಸಿಲಿಂಡರ್‌ನಿಂದ 5 ಕೆ.ಜಿ. ಸಿಲಿಂಡರ್‌ಗೆ ಗ್ಯಾಸ್‌ ರಿಫೀಲ್ಲಿಂಗ್‌ ಮಾಡುತ್ತಿದ್ದ. ಈ ವೇಳೆ ಸಿಲಿಂಡರ್‌ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭಾನುವಾರ ಸಂಜೆ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ. ದುರ್ಘ‌ಟನೆ ಸಂಬಂಧ ಮನೆ ಮಾಲೀಕ ಇಸ್ತಾಕ್‌ ಎಂಬವರ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next