Advertisement

ಆಂಧ್ರಕ್ಕೆ ಅಪ್ಪಳಿಸಿದ ಪೆಥಾಯ್‌: ಇಬ್ಬರ ಸಾವು

06:00 AM Dec 18, 2018 | Team Udayavani |

ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗೆ ಸೋಮವಾರ ಮಧ್ಯಾಹ್ನ “ಪೆಥಾಯ್‌’ ಚಂಡಮಾರುತ ಅಪ್ಪಳಿಸಿದ್ದು, ವಿಜಯವಾಡ ನಗರದಲ್ಲಿ ಉಂಟಾದ ಭೂ ಕುಸಿತಕ್ಕೆ ಒಬ್ಬ ವ್ಯಕ್ತಿ ಮೃತಪಟ್ಟರೆ, ಪಲ್ಲೆಪಾಲಂನಲ್ಲಿ 68 ವರ್ಷದ ಮಹಿಳೆಯೊಬ್ಬರು ಅಸುನೀಗಿದ್ದಾರೆ.
 
ಚಂಡಮಾರುತದಿಂದಾಗಿ ಆಂಧ್ರದಲ್ಲಿ ಭಾರೀ ಮಳೆಯಾದ ಕಾರಣ, ಜನಜೀವನ ಅಸ್ತವ್ಯಸ್ತ ವಾಗಿದೆ. ಕನಿಷ್ಠ 50 ಪ್ರಯಾಣಿಕರ ರೈಲುಗಳ ಸಂಚಾರ ರದ್ದಾಗಿದ್ದು, ಕೆಲವು ರೈಲುಗಳ ಸಂಚಾ ರದ ಸಮಯವನ್ನು ಬದಲಿಸಲಾಗಿತ್ತು.

Advertisement

ಬೆಳಗ್ಗೆ 11.30ರಿಂದ ಮಧ್ಯಾಹ್ನ 2.30ರ ಅವಧಿಯಲ್ಲಿ ಚಂಡಮಾರುತವು ಕಾಕಿನಾಡ ಮತ್ತು ಮಚಲಿ ಪಟ್ಟಣಂ ಕರಾವಳಿಯನ್ನು ಹಾದುಹೋಗಿದ್ದು, ಸುಮಾರು 300 ಗ್ರಾಮಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿತ್ತು. ಪೆಥಾಯ್‌ ಪ್ರಭಾವದಿಂದಾಗಿ ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಒಡಿಶಾದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಮಂಗಳವಾರದವರೆಗೂ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next