Advertisement

ಉದಯವಾಣಿ ವರದಿಗಾರ ಸಿ.ವೈ.ಮೆಣಶಿನಕಾಯಿಯವರಿಗೆ ಕೌಜಲಗಿ ನಿಂಗಮ್ಮ ಪ್ರಶಸ್ತಿ

05:53 PM Jul 29, 2022 | Team Udayavani |

ಬೈಲಹೊಂಗಲ: ಉದಯವಾಣಿ ತಾಲೂಕ ವರದಿಗಾರರಾದ ಸಿ.ವೈ.ಮೆಣಶಿನಕಾಯಿಯವರಿಗೆ ಬ್ಯಾಕೂಡ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘದ ಕೌಜಲಗಿ ನಿಂಗಮ್ಮ ಪ್ರಶಸ್ತಿ ಲಭಿಸಿದೆ.

Advertisement

30 ರಂದು ಮಹಾಲಿಂಗಪೂರದ ಕೌಜಲಗಿ ನಿಂಗಮ್ಮ ರಂಗಮಂದಿರದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ನಾಡು,ನುಡಿ ಸಾಹಿತ್ಯ, ಪತ್ರಿಕೋದ್ಯಮ ರಂಗದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗಮನಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮಹಾಲಿಂಗಪೂರದ ಸಹಜಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ತೇರದಾಳ ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಮಠ, ಕಸಾಪ ಅಧ್ಯಕ್ಷ ಬಸವರಾಜ ಮೇಟಿ, ಬಿಡಿಸಿಸಿ ಬ್ಯಾಂಕ ನಿರ್ದೆಶಕ ಬಸನಗೌಡ ಪಾಟೀಲ, ಬಾಗಲಕೋಟೆ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಕರಣಕುಮಾರ ಜೈನಾಪೂರ, ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಸಂಘಟನೆ ಅಧ್ಯಕ್ಷ ಸಿದ್ರಾಮ ನಿಲಜಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next