Advertisement

ಶ್ರೀಗಂಧದ ಮರ ಕಡಿದ ಆರೋಪಿ ಸೆರೆ; ಮತ್ತೊಬ್ಬ ಪರಾರಿ

10:05 PM Aug 14, 2022 | Team Udayavani |

ಮಡಿಕೇರಿ: ಶ್ರೀಗಂಧದ ಮರವನ್ನು ಬುಡದಿಂದ ಕಡಿದ ಪ್ರಕರಣವನ್ನು ಪತ್ತೆ ಹಚ್ಚಿರುವ ಸೋಮವಾರಪೇಟೆ ಅರಣ್ಯ ವಲಯದ ಅಧಿಕಾರಿಗಳು ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

Advertisement

ಮಾದಪುರ ವ್ಯಾಪ್ತಿಯ ಐಗೂರು ಎಡವಾರೇ ಗ್ರಾಮದ ಗೋಟವಾಳ ಮಂಟಿಯಲ್ಲಿ ಅನಧಿಕೃತವಾಗಿ ಗಂಧದ ಮರವನ್ನು ಕತ್ತರಿಸುತ್ತಿದ್ದ ಸಜ್ಜಳ್ಳಿ ಎಡವಾರೆ ಗ್ರಾಮದ ಜೆ.ಕೆ. ರವಿ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ನೇಗಳ್ಳಿ ಗ್ರಾಮದ ಮದನ್‌ ತಲೆಮರೆಸಿಕೊಂಡಿದ್ದಾನೆ.

ಅರಣ್ಯ ಅಧಿಕಾರಿ ಎಚ್‌.ಪಿ. ಚೇತನ್‌ ಅವರ ಮಾರ್ಗದರ್ಶನದಲ್ಲಿ ಅಧಿಕಾರಿ ಜಗದೀಶ್‌, ಅರಣ್ಯ ರಕ್ಷಕರಾದ ಭರಮಪ್ಪ, ಚೇತನ್‌, ವೀರಪ್ಪ, ಸಿಬಂದಿ ನಂದೀಶ್‌, ವಿನು, ಹರ್ಷಿತ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next