Advertisement

ಆಡಂಬರದ ಮದುವೆಗೆ ಕಡಿವಾಣ ಹಾಕಿ; ಸಚಿವ ಎಂಟಿಬಿ

05:44 PM May 26, 2022 | Team Udayavani |

ದೊಡ್ಡಬಳ್ಳಾಪುರ: ಸಮಾಜದಲ್ಲಿ ಆಡಂಬರದ ಮದುವೆಗಳು ಕಡಿಮೆಯಾಗಿ, ಇದಕ್ಕೆ ಬಳಸುವ ಹಣ ದಂಪತಿಗಳ ಜೀವನ ನಿರ್ವರ್ಹಣೆಗೆ ನೀಡಬಹುದಾಗಿದೆ. ಮುಂದೆ ನನ್ನ ಮೊಮ್ಮಕ್ಕಳಿಗೂ ಸಾಮೂಹಿಕ ವಿವಾಹದಲ್ಲೇ ಧಾರೆ ಎರೆದು ಕೊಡುವ ಅಭಿಲಾಷೆಯಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಹೇಳಿದರು.

Advertisement

ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ತಾಲೂಕಿನ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ವಧುವರರಿಗೆ ಶುಭ ಹಾರೈಸಿ ನಂತರ ಮಾತನಾಡಿದ ಅವರು, ಈ ಹಿಂದೆ ಮದುವೆಗಳಲ್ಲಿ ಆಡಂಬರವಿರಲಿಲ್ಲ. ನನಗೂ ಕೂಡ ಮನೆ ಮುಂದೆ ದೇವರ ಫೋಟೊ ಇಟ್ಟು ಮದುವೆ ಮಾಡಿಸಿದ್ದರು. ಸರಳವಾಗಿ ದೇವಾಲಯದಲ್ಲಿ ಮದುವೆಯದವರು ಸುಖವಾಗಿ ಬದುಕಿ ಬಾಳುತ್ತಿದ್ದಾರೆ ಎಂದರು.

ಆರ್ಥಿಕವಾಗಿ ದುರ್ಬಲರಾಗಿರುವವರು, ಗ್ರಾಮೀಣ ಪ್ರದೇಶದಲ್ಲಿರುವವರು, ಬಡವರಿಗೆ ಸಾಮೂಹಿಕ ವಿವಾಹ ನೆರವಾಗುತ್ತಿದ್ದು, ಈ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿರುವುದು ನಮಗೆ ಅತೀವ ಸಂತೋಷವಾಗಿದೆ ಎಂದು ತಿಳಿಸಿದರು.

ಬಡವರಿಗೆ ಅನುಕೂಲ: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಹಿಂದೆ ಕೋವಿಡ್‌ ಕಾರಣದಿಂದ ಸಾಮೂ ಹಿಕ ವಿವಾಹಗಳು ಮುಂದೂಡಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿರುವುದರಿಂದ ಮತ್ತೆ ಸಾಮೂಹಿಕ ವಿವಾಹಗಳನ್ನು ಆರಂಭಿಸಿರುವುದು ಸಂತಸ ವಾಗಿದ್ದು, ಇದರಿಂದ ಕೂಲಿಕಾರ್ಮಿಕರು, ದೀನ ದಲಿತರು ಹಾಗೂ ದುರ್ಬಲರಿಗೆ ಅನುಕೂಲ ಕರ ವಾಗಿವೆ ಎಂದರು.

ಊಟೋಪಚಾರದ ವ್ಯವಸ್ಥೆ: ಸಾಮೂಹಿಕ ವಿವಾಹಕ್ಕೆ ಆಗಮಿಸುವ ವಧು-ವರ ಮತ್ತು ಅವರ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಅಪರ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್‌, ಉಪವಿಭಾಗಾಧಿಕಾರಿ ತೇಜಸ್‌ ಕುಮಾರ್‌, ಮುಜರಾಯಿ ಇಲಾಖೆಯ ಜಿಲ್ಲಾ ಸಹಾಯಕ ಆಯುಕ್ತರಾದ ಜಿ. ಜೆ.ಹೇಮಾವತಿ, ಘಾಟಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜು, ಪ್ರಧಾನ ಆರ್ಚಕ ಸುಬ್ಬುಕೃಷ್ಣಶಾಸ್ತ್ರಿ ,
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್‌.ಅಪ್ಪಯ್ಯಣ್ಣ, ರಾಜ್ಯ ತೆಂಗಿನ ಸಹಕಾರ ಮಹಾಮಂಡಳದ ಅಧ್ಯಕ್ಷ ವೆಂಕಟೇಶ್‌ ಬಾಬು, ಕೆಪಿಸಿಸಿ ಸದಸ್ಯ ಎಸ್‌.ಆರ್‌. ಮುನಿರಾಜು, ತೂಬಗೆರೆ ಹೋಬಳಿ ಜೆಡಿಎಸ್‌ ಅಧ್ಯಕ್ಷ ಜಗನ್ನಾಥಾಚಾರಿ ಹಾಗೂ ಇತರರು ಇದ್ದರು.

Advertisement

ನವ ಜೀವನಕ್ಕೆ ಕಾಲಿಟ್ಟ 16 ಜೋಡಿಗಳು
ಬುಧವಾರ ಬೆಳಗ್ಗೆ 10.50ರಿಂದ 11.40ರ ಒಳಗೆ ಕಟಕ ಲಗ್ನದಲ್ಲಿ ನಡೆದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಈ ಮೊದಲೇ ನೋಂದಣಿಯಾಗಿದ್ದ 16 ಜೋಡಿಗಳು, ಹಿಂದೂ ಸಂಪ್ರದಾಯದಂತೆ, ಪೌರೋಹಿತರ ವೇದ ಮಂತ್ರ ಘೋಷದೊಂದಿಗೆ ವಿವಾಹವಾಗಿ ಹೊಸ ಬಾಳಿಗೆ ಕಾಲಿರಿಸಿದರು. ವಿವಾಹದಲ್ಲಿ ಪಾಲ್ಗೊಂಡಿದ್ದ ವರನಿಗೆ 5 ಸಾವಿರ ರೂ. ಹಾಗೂ ವಧುವಿಗೆ 10 ಸಾವಿರ ರೂ. ಮತ್ತು ಚಿನ್ನದ ತಾಳಿ ಹಾಗೂ ಎರಡು ಚಿನ್ನದ ಗುಂಡು(ಒಟ್ಟು 40 ಸಾವಿರ ರೂ ಮೌಲ್ಯ) ಒಟ್ಟು 55 ಸಾವಿರ ರೂ.ಗಳನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next