Advertisement

Cup ನಮ್ದೆ; ದೋಟಿಹಾಳ ಜಾತ್ರೆಯಲ್ಲೂ ಆರ್ ಸಿಬಿ ಹವಾ!

09:48 PM Mar 10, 2024 | Team Udayavani |

ಕುಷ್ಟಗಿ: ಈ ಭಾಗದ ಪ್ರಸಿದ್ದ ಜಾತ್ರೆ ಕುಷ್ಟಗಿ ತಾಲೂಕಿನ ದೋಟಿಹಾಳ ಶ್ರೀ ಅವಧೂತ ಶುಕಮುನಿ ರಥೋತ್ಸವ ಭಾನುವಾರ ಸಂಜೆ ವೈಭವದಿಂದ ಜರುಗಿತು.

Advertisement

ಈ‌ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಸಾಕ್ಷಿಯಾದರು. ಈ ಜಾತ್ರಾ‌ ಮಹೋತ್ಸವ ಸಂದರ್ಭದಲ್ಲಿ ಸಾಗುವ ರಥೋತ್ಸವಕ್ಕೆ‌ಉತ್ತತ್ತಿ, ಬಾಳೆ ಹಣ್ಣು ಎಸೆಯುವ ಪದ್ದತಿ ಇದೆ. ಆರ್ ಸಿ‌ಬಿ‌ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬ ”ಈ ಸಲ್ ಕಪ್ ನಮ್ದೆ…” ಕನ್ನಡದಲ್ಲಿ ”’ಜೈ ಆರ್ ಸಿಬಿ”ಎಂದು ಇಂಗ್ಲಿಷ್ ನಲ್ಲಿ ಬಾಳೆ ಹಣ್ಣಿನ ಮೇಲೆ‌ ಬರೆದು ಸಾಗಿದ ರಥಕ್ಕೆ‌‌ ಎಸೆದಿದ್ದಾನೆ.

ಈ ರೀತಿಯಾಗಿ ಎಸೆದ ಬಾಳೆಹಣ್ಣು ಕುಷ್ಟಗಿಯ ಆದಾಯ ತೆರಿಗೆ ಸಲಹೆಗಾರ ಮಲ್ಲಿಕಾರ್ಜುನ ಬಳಿಗಾರ ಅವರಿಗೆ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next