Advertisement

ಮಾಂಸ ತಿಂದಿದ್ದು ನಿಜ, ಗುಡಿಗೆ ಹೋಗಲಿಲ್ಲ: ಸಿ.ಟಿ.ರವಿ ಸ್ಪಷ್ಟನೆ

07:52 PM Feb 23, 2023 | Team Udayavani |

ಬೆಂಗಳೂರು : “ನಾನು ನಾನ್‌ ವೆಜ್‌ ತಿಂದಿದ್ದು ಹೌದು. ಆದರೆ ದೇವಸ್ಥಾನದ ಗರ್ಭಗುಡಿಗೆ ಹೊಗಲಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ.

Advertisement

ನಾನ್‌ವೆಜ್‌ ವಿವಾದದ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇವಸ್ಥಾನದ ಪ್ಯಾಸೇಜ್‌ ಬಳಿ ಮಾತ್ರ ಹೋಗಿದ್ದು ಸತ್ಯ. ನಾನು ಗರ್ಭಗುಡಿಯ ಹೊರಭಾಗದಲ್ಲಿ ಇದ್ದೆ. ದೇವಸ್ಥಾನದ ಆವರಣದಲ್ಲಿ ಕಟ್ಟಡ ಕಟ್ಟಲು ಮುಸ್ಲಿಮರು ಅವಕಾಶ ಕೊಟ್ಟಿರಲಿಲ್ಲ. ಅದರ ವೀಕ್ಷಣೆಗೆ ತೆರಳಿದ್ದೆ. ಅಲ್ಲಿಯ ಸ್ಥಳೀಯರೇ ಕರೆದುಕೊಂಡು ಹೋಗಿದ್ದು. ಎಲ್ಲವನ್ನೂ ಎದೆ ಬಗೆದು ತೊರಿಸಲು ನಾನು ಹನುಮಂತ ಅಲ್ಲ ಎಂದು ಸ್ಪಷ್ಟನೆ ನೀಡಿದರು.

ಕಾಂಗ್ರೆಸ್‌ನವರಂತೆ ನಾನೂ ತಿಂದು ಹೋಗಿದ್ದೆ ಏನೀಗ ಅಂತ ನಾನು ಹೇಳುವುದಿಲ್ಲ. ಕೆಲವು ವೆಜ್‌ ಮತ್ತು ನಾನ್‌ ವೆಜ್‌ ದೇವಸ್ಥಾನಗಳಿರುತ್ತವೆ. ಅಲ್ಲಿಗೆ ಮಾಂಸಹಾರಿ ನೈವೇದ್ಯ ಮಾಡಲಾಗುತ್ತದೆ. ಅಂಥ ದೇವಸ್ಥಾನಗಳಿಗೆ ಹೊಗಬಹುದು. ಆದರೆ ನಾನು ನಾನ್‌ ವೆಜ್‌ ತಿಂದಿದ್ದೆ ಅನ್ನೋದನ್ನ ಮರೆತಿದ್ದೆ ಎಂದರು.

ಅದು ನನ್ನ ಭೇಟಿಯ ಉದ್ದೇಶವಾಗಿರಲಿಲ್ಲ. ಅಲ್ಲಿನ ಸ್ಥಳೀಯರ ಅಪೇಕ್ಷೆ ಮೇರೆಗೆ ಹೋಗಿದ್ದೆ. ಹೀಗಾಗಿ ನಾನು ದೇವಸ್ಥಾನ ಪ್ಯಾಸೇಜ್‌ ಬಳಿ ಮಾತ್ರ ಹೋಗಿದ್ದೆ ಎಂದು ಸ್ಪಷ್ಟ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next