Advertisement

ತುಂಬಿದ ಕೊಡ ತುಳುಕಲ್ಲ,ಅರ್ಧಂಬರ್ಧ ಕೊಡಗಳೇ ತುಳುಕೋದು: ಸಿದ್ದುಗೆ ಸಿಟಿ ರವಿ ಟಾಂಗ್

06:53 PM May 18, 2022 | Team Udayavani |

ಚಿಕ್ಕಮಗಳೂರು: ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಕೊಡುಗೆಗಳನ್ನು ಕೊಟ್ಟೆ ಕೊಟ್ಟೆ ಅಂಥ ಹೇಳುತ್ತಿದ್ದರು. ತುಂಬಿದ ಕೊಡ ಯಾವತ್ತೂ  ತುಳುಕಲ್ಲ,ಅರ್ಧಂಬರ್ಧ ಕೊಡಗಳೇ ತುಳುಕೋದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

Advertisement

ನಗರದಲ್ಲಿ ಮಾತಾನಾಡಿದ ಅವರು, ಎರಡೂವರೆ ವರ್ಷದಲ್ಲಿ 84 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ಕೊಟ್ಟ ನರೇಂದ್ರ ಮೋದಿ ಅವರು ಎಂದಾದರೂ ನಾನು ಕೊಟ್ಟೆ ಎಂದು ಎದೆ ಬಡ್ಕಂಡಿದಾರಾ ? ಅನ್ನಭಾಗ್ಯ ಯೋಜನೆಗೆ ಕೇಂದ್ರ 90% ಹಣ ಕೊಡ್ತಿತ್ತು. 10% ಹಣ ಮಾತ್ರ ರಾಜ್ಯ ಸರ್ಕಾರದ್ದು 32 ರೂಪಾಯಿಯಲ್ಲಿ 29 ರೂಪಾಯಿ ಕೇಂದ್ರ ಕೊಡುತ್ತಿತ್ತು. 3 ರೂಪಾಯಿ ಮಾತ್ರ ರಾಜ್ಯ ಸರ್ಕಾರ ಹಾಕುತ್ತಿತ್ತು. 29 ರೂಪಾಯಿ ಕೊಟ್ಟ ಮೋದಿ ಯಾವತ್ತೂ ನಾನು ಕೊಟ್ಟೆ ಎಂದು ಹೇಳಿಲ್ಲ. 3 ರೂಪಾಯಿ ಕೊಟ್ಟವರು ಮಾತ್ರ ಪ್ರಚಾರಕ್ಕಾಗಿ ನಾನು ಕೊಟ್ಟೆ ಎಂದು ಹೇಳುತ್ತಲೇ ಇದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.

ಇದನ್ನೂ ಓದಿ: ಚಿಕ್ಕಮಗಳೂರಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ: ಸಿಎಂ ಬೊಮ್ಮಾಯಿ

ಜಗತ್ತಿನ ಯಾವ ದೇಶವೂ ಉಚಿತವಾಗಿ ಲಸಿಕೆ ಹಾಕಿಸಿಲ್ಲ ಆದರೆ ನಮ್ಮ ದೇಶದಲ್ಲಿ ನಾವು ಅದನ್ನು ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next