Advertisement

ಧಮ್ಕಿ ಹಾಕುವ ತಾಲಿಬಾನ್ ಮಾದರಿ ಈ ರಾಜ್ಯದಲ್ಲಿ ನಡೆಯಲ್ಲ: SDPI ವಿರುದ್ಧ ಸಿ.ಟಿ ರವಿ ಕಿಡಿ

08:06 PM Mar 28, 2023 | Team Udayavani |

ಚಿಕ್ಕಮಗಳೂರು: ಮೀಸಲಾತಿ ವಿಚಾರದ ಬಗ್ಗೆ ಸಿಎಂ ವಿರುದ್ಧ ಎಸ್ ಡಿ ಪಿ ಐ ಮುಖಂಡ ನೀಡಿರುವ ಹೇಳಿಕೆಗೆ ಶಾಸಕ ಸಿ.ಟಿ. ರವಿ ಕಿಡಿಕಾರಿದ್ದಾರೆ.

Advertisement

ಹಕ್ಕನ್ನ ವಾಪಸ್ ಕೊಡದಿದ್ರೆ ಸಿಎಂ ಬೊಮ್ಮಾಯಿ ಚಡ್ಡಿ ಬಿಚ್ಚುಸ್ತೀವಿ ಎಂದು ಚಿತ್ರದುರ್ಗ ಎಸ್.ಡಿ.ಪಿ.ಐ. ಮುಖಂಡನ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ ಅದೇನು ಹೋಗುತ್ತೋ… ತಲೆ ತಗೀತಿಯೋ… ನಿನ್ನ ತಾಖತ್ತು ತೋರ್ಸು ಆಮೇಲೆ ನಾವು ಅದಕ್ಲೆ ಏನ್ ಉತ್ತರ ಕೋಡ್ಬೇಕು ಕೊಡುತ್ತೇವೆ ಎಂದು ಕಿಡಿಕಾರಿದ್ದಾರೆ.

ನೀವು ಮಾಡಿದ್ದೇಲ್ಲ ಸಹಿಸಿಕೊಂಡು ಬಿರಿಯಾನಿ ಹಾಕಲು ಇದು ಇದು1947 ರ ಭಾರತವಲ್ಲ, ನಿಮ್ಮ ಮೇಲಿನ ಕೇಸ್ ಗಳನ್ನ ಹಿಂಪಡೆದು ಮೆರೆಯಲು ಅವಕಾಶ ನೀಡುವ ಸರ್ಕಾರವೂ ಈಗಿಲ್ಲ, ಈಗ ಇರುವ ಸರ್ಕಾರ ಬಾಲ‌ ಉದ್ದ ಮಾಡಿದ್ರೆ ಕಟ್ ಮಾಡುವುದು ಹೇಗೆಂದು ತೋರಿಸುವ ಸರಕಾರ, ಬಾಂಬ್ ಹಾಕುವವರ ತಲೆ ಮೇಲೆಯೇ ಬಾಂಬ್ ಹಾಕುವ ತಾಕತ್ತಿರುವ ಸರಕಾರ, ಭಯೋತ್ಪಾದನೆ ಮಾಡುವವರಿಗೆ ಸರ್ಜಿಕಲ್ ಸ್ಟೈಕ್ ಮಾಡಿ ತಲೆ ಎತ್ತದಂತೆ ಮಾಡುವ ತಾಕತ್ತಿನ‌ ಸರ್ಕಾರ ಎಂದು ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಎಸ್.ಡಿ.ಪಿ.ಐ.‌ಹುಟ್ಟಿದೆ ಕೇರಳದಲ್ಲಿ, ಅಲ್ಲಿಯೇ ಮೀಸಲಾತಿ‌ ಇಲ್ಲ ಕೋಮು ಆಧಾರಿತ, ಮತ ಆಧಾರಿತ ಮೀಸಲಾತಿ ಕೇರಳದಲ್ಲೇ ಇಲ್ಲ, ಆಂಧ್ರದಲ್ಲಿ ಕೊಟ್ಟಿದ್ರು, ಸಂವಿಧಾನ ಬಾಹಿರ ಎಂದು 7 ಜನರ ಲಾರ್ಜರ್ ಬೆಂಚ್ ಕ್ಯಾನ್ಸಲ್ ಮಾಡ್ತು ಎಂದು ಹೇಳಿದರು.

ಕರ್ನಾಟಕದಲ್ಲಿ ಸಂವಿಧಾನ ಬಾಹಿರ ಮೀಸಲಾತಿ ಯಾರಿಗೂ ಕೊಡುವುದಿಲ್ಲ‌, ಸಂವಿಧಾನ ಬಾಹಿರವಾಗಿರುವರ ಸಮರ್ಥನೆಗೆ ಯಾರು ನಿಲ್ಲುತ್ತಾರೋ ಅವರು ನಿಲ್ಲಲಿ, ಧಮ್ಕಿ ಹಾಕುವ ತಾಲಿಬಾನ್ ಮಾದರಿ ಇಲ್ಲಿ ನಡೆಯಲ್ಲ, ಆ ಸರ್ಕಾರ ಈಗಿಲ್ಲ, ತಾಲಿಬಾನ್ ಆಡಳಿತವಿರುವ ರಾಜ್ಯ ಎಂದು ಭಾವಿಸಿದ್ರೆ ಇದು ತಾಲಿಬಾನ್ ಆಡಳಿತದ ರಾಜ್ಯ ಅಲ್ಲ ಎಂದು ಕಿಡಿಕಾರಿದ್ದಾರೆ.

Advertisement

ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಪ್ರಕರಣ: ಉದ್ಧವ್, ಆದಿತ್ಯ ಠಾಕ್ರೆ, ಸಂಜಯ್ ರಾವತ್ ಗೆ ಕೋರ್ಟ್ ಸಮನ್ಸ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next