Advertisement

CT Ravi ಕುತಂತ್ರ ರಾಜಕಾರಣದ ಮಾಸ್ಟರ್‌ ಮೈಂಡ್‌: ಸಚಿನ್‌ ಮೀಗಾ

09:31 PM Aug 15, 2023 | Team Udayavani |

ಚಿಕ್ಕಮಗಳೂರು:ಕುತಂತ್ರ ರಾಜಕಾರಣದ ಮಾಸ್ಟರ್‌ ಮೈಂಡ್‌ ಯಾರಾದರೂ ಇದ್ದರೆ ಅದು ಸಿ.ಟಿ.ರವಿ ಎಂದು ಕಿಸಾನ್‌ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸಚಿನ್‌ ಮೀಗಾ ಆರೋಪಿಸಿದ್ದಾರೆ. ಮಂಗಳವಾರ ಕೊಪ್ಪ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಅವರು ಹಲವರನ್ನು ಬಲಿ ಕೊಟ್ಟಿದ್ದಾರೆ.

Advertisement

ಗೋರಿ, ದರ್ಗಾಗಳನ್ನು ಸಂಚು ನಡೆಸಿ ಧ್ವಂಸ ಮಾಡಿದ್ದಾರೆ. ಮಹೇಂದ್ರ ಕುಮಾರ್‌ ಅವರನ್ನು ಬಳಸಿಕೊಂಡು ಗೋರಿ, ದರ್ಗಾ, ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಾರೆ. ಪದೇ ಪದೇ ತಮ್ಮ ನಾಲಿಗೆಯನ್ನು ಹರಿಬಿಡುತ್ತಿದ್ದು, ಈ ಹಿಂದೆ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್‌ ಅಂದಿದ್ದರು. ನಂಜೇಗೌಡ, ಉರಿಗೌಡ ಅವರನ್ನು ಮುನ್ನೆಲೆಗೆ ತಂದು ಒಕ್ಕಲಿಗ ಸಮುದಾಯದವರನ್ನು ಅವಮಾನಿಸಿದ್ದರು. ಈಗ ಮತ್ತೆ ಡಿಸಿಎಂ ಡಿಕೆಶಿ ಹೆಸರಿಗೆ ಕೊತ್ವಾಲ್‌ ಹೆಸರನ್ನು ಸೇರಿಸಿದ್ದಾರೆ.

ಈಗಾಗಲೇ ಚಿಕ್ಕಮಗಳೂರಿನ ಜನ ಅವರನ್ನು ಮನೆಗೆ ಕಳಿಸಿದ್ದಾರೆ. ಆದರೂ ಇಂತಹ ವಿಕೃತ ಹೇಳಿಕೆಗಳಿಂದ ಖುಷಿ ಪಡುತ್ತಲೇ ಇದ್ದಾರೆ. ಇಂತಹ ಹೇಳಿಕೆ ಪದೇ ಪದೇ ನೀಡಿ ವಿಕೃತಾನಂದ ಪಡುವುದನ್ನು ಬಿಡಬೇಕು. ಇದು ಅವರಿಗೆ ಕೊನೆಯ ವಾರ್ನಿಂಗ್‌. ಇನ್ನು ಮುಂದೆ ಅವರು ಇಂತಹ ಹೇಳಿಕೆ ಬಳಸುವಾಗ ಎಚ್ಚರಿಕೆ ವಹಿಸಬೇಕು. ತಪ್ಪಿದಲ್ಲಿ ಕಿಸಾನ್‌ ಕಾಂಗ್ರೆಸ್‌ನಿಂದ ಪ್ರತಿಭಟನೆ ಹಮ್ಮಿಕೊಂಡು ರಾಜ್ಯದಿಂದ ಗಡಿಪಾರಿಗೆ ಒತ್ತಾಯ ಮಾಡಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next